ಕನವರಿಕೆ

ಇಂದ್ರ ಧನುಷ್ಯದ ಕಮಾನು ಕಟ್ಟುವ ಮನಸು
ಆಕಾಶಗಂಗೆಯ ತೃಣಮಾತ್ರ ಸ್ಥಳದಿಂದ
ನೀಹಾರಿಕೆಗಳಿಗೆ ಸೇತು ರಚಿಸುವ ಹುರುಪು
ಕನಸುಗಣ್ಣುಗಳಿಂದ ಕರ್ಮ ಲೋಕಕೆ ಹೋಗಿ
ಮರೀಚಿಕೆಯ ಜಲಧಾರೆ ಆಶಿಸುವ ಹೊಂಗನಸು
ಕ್ಷಿಪಣಿ ವೇಗದಿ ಸಾಗಿ ತನುಮನವ ದುಡಿಸಿ
ಕೀರ್ತಿ ಸಿರಿಯನ್ನೆಲ್ಲ ಬಾಚುವ ಹುಮ್ಮಸ್ಸು
ಉತ್ತುಂಗದಿಂದಿಳಿವಾಗ ಆಗೊಮ್ಮೆ ಈಗೊಮ್ಮೆ
ಅಂದಿನ ಮುಗ್ಧತೆಯ ಸರಳತೆಯ ನೆನಪು
ಅಹಮಿಕೆಯ ಸ್ಪರ್ಧೆಯ ಕ್ಷಣಗಳಲ್ಲೊಮ್ಮೆ
ಬಾಲ್ಯದಲಿ ಘ್ರಾಣಿಸಿದ ಹೂವುಗಳ ಹೊಳಹು
ಕೌಮಾರ್ಯದ ಮಧುರ ಅನುಭೂತಿ ಸ್ಫುರಿಸಿ
ತರಗೆಲೆಗಳಂತುದುರಿದ ವರ್ಷಗಳ ಲೆಕ್ಕ
ಮುಸ್ಸಂಜೆಯು ಮಸುಕು ಮುಸುಕನ್ನು ಧರಿಸಿ
ಮುಂದೆ ನಿಂತಿರುವದದು ಸ್ವಾಭಾವಿಕ
ಎಲ್ಲವನು ಗಳಿಸಿದರೂ ಎಲ್ಲವನು ಕಳೆದು
ಮಾಯವಾಗುವ ಕಾಲವದು ಮಾಯಾ ಮಿಕ!
ನಮ್ಮೆಲ್ಲರೊಳಗುಳಿವ ಅಭಿಲಾಷೆಯು
ನಶಿಸಿ ತಾ ಹೋಗದದು ಬಲು ಮಾರ್ಮಿಕ!
ಅದಾವ ಅಗೋಚರ ಚದುರಂಗದಾಟವಿದು
ಅರಿವಿಲ್ಲದೇ ಹೆಜ್ಜೆ ಇಡುವ ಗತಿಯು?
ಕಾಣದಿಹ ಸೂತ್ರಗಳ ಕೈಯಲ್ಲಿ ಹಿಡಿದು
ಅಡಗಿ ಆಡಿಸುತಿರುವ ಅಚಿಂತ್ಯವು!
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications