ನೀವೆಲ್ಲಾ ಹುಟ್ಟಿದ ಮೇಲೆ ನಾ ಕವಿಯೆನಿಸಿದೆ
ನೀವೆಲ್ಲಾ ಹುಟ್ಟಿದ ಮೇಲೆ
ನಾನೊಬ್ಬ ಕವಿಯೆನಿಸಿದೆ ...!
ಅಪ್ಪ ಅಮ್ಮರ ಮೀರಿಸಿ
ಜ್ಞಾನ ವಿಜ್ಞಾನ
ತತ್ವ ಸತ್ವವ ಹೀರಿ
ಎಲ್ಲೆಡೆ ಬೀರಿ
ನನ್ನ ಆಶಯ
ಶ್ರೆಯೋದ್ದಾರರಾದಿರಿ...
ನೀನೊಬ್ಬನೇ ಜನಿಸಿದರೆ
ನಾನು ಕವಿಯೆನಿಸುತಿರಲಿಲ್ಲವೇನೋ?
ನೂರೊಂದು ಕೌರವರು
ಪಂಚ ಪಾಂಡವರು
ಅವರೆಲ್ಲರ ಹೊಗಳುವರು ತೆಗಳುವರು
ಹುಟ್ಟಿ ವಿವಿಧ
ವಿಕಾರ ಅಕಾರ ಸಾಕಾರವಾಗಿ
ಅದೊಂದು ಅದ್ಭುತ
ಇತಿಹಾಸ ಅಟ್ಟಹಾಸ ಬಿಂಬಿಸಿದಾಗ...
ಪಂಚ ಭೂತಗಳ
ಮಿಡಿತ ಹಿಡಿತದಲಿ
ಯೋಗೇಶ್ವರ ಶ್ರೀಕೃಷ್ಣನ ಕಂಡಾಗ
ನೀವೆಲ್ಲಾ ಹುಟ್ಟಿ ನಾ ಕವಿಯೇನಿಸಿದ್ದಕೆ
ಈ ನನ್ನ ಜೀವನ ಸಾರ್ಥಕವಾಯಿತು
ಅರ್ಥಪೂರ್ಣವಾದ ಕವಿನಾಮ ಶಾಶ್ವತವಾಯಿತು












Click it and Unblock the Notifications