ಪಿಳ್ಳಾರಿ ಗೀತೆಗಳಲ್ಲಿ ಮೊದಲನೆಯದು ಲಂಬೋದರ
..ಲಕುಮಿಕರ. ರಾಗ ಮಲಹರಿ, ರೂಪಕತಾಳದಲ್ಲಿರುವ ಗೀತೆಯ ಸಾಹಿತ್ಯ ಸುಮಾರು ಪೂರ್ತಿ ಸಂಸ್ಕೃತವೇ ಎನ್ನಿಸುವ ಕನ್ನಡದಲ್ಲಿದೆ (ಲಕುಮಿ ಎಂಬ ತದ್ಭವವೊಂದನ್ನುಳಿದು). ಪಿಳ್ಳಾರಿ ಎಂದರೆ ಪುಟ್ಟದು ಎಂಬ ಅರ್ಥ, ಹಾಗೇ ಗಣಪತಿಗೂ ಅದೇ ಹೆಸರಿರುವುದರಿಂದ ಗಣಪತಿಯ ಸ್ತುತಿಯಾದ ಇದೇ ಮೊದಲ ಪಿಳ್ಳಾರಿಗೀತೆಯಾಗಿರುವುದು ಸೂಕ್ತವಾಗಿದೆ.
ಬಾಲಪಾಠಗಳಿಗೆ ಬಳಸುವ ಮಾಯಾಮಾಳವಗೌಳದ್ದೇ ಸ್ವರಗಳನ್ನು ಬಳಸುವ ಈ ರಾಗವನ್ನು ಹೊಸದೊಂದು ರಾಗವನ್ನು ಕಲಿಯುವ ಕೆಲಸವನ್ನೂ ಸುಲಭವಾಗಿಸುತ್ತೆ. ಸರಳ ಸಾಹಿತ್ಯ, ಒಂದು ಸ್ವರಕ್ಕೆ ಒಂದು ಅಕ್ಷರ ಸಾಹಿತ್ಯವಿದ್ದು, ಬಾಲ ಪಾಠಗಳಲ್ಲಿ ಸಾಹಿತ್ಯವಿರುವ ಮೊದಲ ಹಾಡಿದು. ಇದಕ್ಕೆ ಮುಂಚೆ ಬರೀ ಸ್ವರಗಳ ಪರಿಚಯ ಮಾಡಿಕೊಟ್ಟಿರಲಾಗುತ್ತೆ.

ಶ್ರೀ ಗಣನಾಥ ಸಿಂಧೂರವರ್ಣ ಕರುಣಸಾಗರ ಕರಿವದನ
ಲಂಬೋದರ ಲಕುಮಿಕರಾ ಅಂಬಾಸುತ ಅಮರವಿನುತ ||
ಸಿದ್ಧಚಾರಣ ಗಣಸೇವಿತ ಸಿದ್ಧಿವಿನಾಯಕ ತೇ ನಮೋನಮೋ
ಲಂಬೋದರ ಲಕುಮಿಕರಾ ಅಂಬಾಸುತ ಅಮರವಿನುತ
ಸಕಲವಿದ್ಯಾ ಆದಿಪೂಜಿತ ಸರ್ವೋತ್ತಮ ತೇ ನಮೋನಮೋ
ಲಂಬೋದರ ಲಕುಮಿಕರಾ ಅಂಬಾಸುತ ಅಮರವಿನುತ ||
ಹೀಗೆ :
ಮಪ|ದಸಸರಿ || ರಿ ಸ | ದಪಮಪ|| ರಿಮ |ಪ ದ ಮ ಪ ||ದ ಪ| ಮ ಗ ರಿ ಸ ||
ಶ್ರೀ |ಗಣನಾಥ|| ಸಿಂಧೂ| ರವರ್ಣ || ಕರು |ಣ ಸಾ ಗ ರ ||ಕ ರಿ | ವ ದ ನ - ||
ಸರಿ | ಮಾಗರಿ || ಸ ರಿ | ಗರಿಸಾ || ರಿಮ | ಪ ದ ಮ ಪ || ದಪ | ಮ ಗ ರಿ ಸ ||
ಲಂ |ಬೋ ದರ ||ಲಕು | ಮಿಕರಾ || ಅಂ |ಬಾ - ಸುತ || ಅಮ |ರವಿನುತ ||
ಪ್ರೊ. ಮೈಸೂರು ನಾಗಮಣಿ ಶ್ರೀನಾಥ್ ಅವರು ಈ ಗೀತೆಯನ್ನು ಹಾಡಿ ಹೇಳಿಕೊಡುತ್ತಿರುವ ವಿಡಿಯೋ ಇಲ್ಲಿ ಕೇಳಿ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications