ಅಮೆರಿಕಾದ ಶ್ರೀ ಶಿವವಿಷ್ಣು ದೇವಸ್ಥಾನದಲ್ಲಿ ಈವಾರ
ಸರಳ ಕನ್ನಡದಲ್ಲಿ ರಚಿತವಾಗಿರುವ 'ಸಿರಿಗನ್ನಡ ಗೀತರಾಮಾಯಣ' ( ಕಿರುಗಾವ್ಯ) ಕೃತಿ ಬಿಡುಗಡೆಗೆ ಅಣಿಯಾಗಿದೆ. ವಾಲ್ಮೀಕಿ, ಕುವೆಂಪು ಆದಿಯಾಗಿ ಅನೇಕರು ರಾಮಾಯಣ ಕಥಾವಸ್ತುವಿಗೆ ಮಾರುಹೋಗಿದ್ದಾರೆ. ಇವರೆಲ್ಲ ಭಾರತದ ಮೂಲನಿವಾಸಿಗಳು. ಆದ್ರೆ, ಅನಿವಾಸಿ ಕನ್ನಡಿಗರೊಬ್ಬರು ರಚಿಸಿದ ಪ್ರಪ್ರಥಮ ರಾಮಾಯಣ ಎಂಬ ಹೆಗ್ಗಳಿಗೆ ನಟರಾಜ ರಾಮಾಯಣ ಪಾತ್ರವಾಗುತ್ತಿರುವುದು ವಿಶೇಷ.
ವಾಷಿಂಗ್ಟನ್ ಪ್ರದೇಶದಲ್ಲಿರುವ ಶ್ರೀ ಶಿವವಿಷ್ಣು ದೇವಾಲಯದಲ್ಲಿ (ಇದೇ ಭಾನುವಾರ ಏಪ್ರಿಲ್ 13ರಂದು ನಡೆಯುವ ಶ್ರೀರಾಮನವಮಿ ವಿಶೇಷ ಕಾರ್ಯಕ್ರಮದಲ್ಲಿ ಈ ಕಿರುಗಾವ್ಯದ ಕರಡುಪ್ರತಿ ಬಿಡುಗಡೆಗೊಳ್ಳುತ್ತಿದೆ.
600ಕ್ಕೂ ಹೆಚ್ಚು ಚೌಪದಿಗಳಿಂದ ಕೂಡಿದ, ಸರಳ ಕನ್ನಡದಲ್ಲಿ ಮೈದಾಳಿದ ರಾಮಾಯಣ ಕಿರುಗಾವ್ಯವನ್ನು ಕಾವೇರಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷ ಡಾ|| ಮೈ.ಶ್ರೀ ನಟರಾಜ್ ರಚಿಸಿದ್ದಾರೆ. ಅಮೆರಿಕಾದ ಅತ್ಯಂತ ಹಳೆಯ ಕನ್ನಡ ಕೂಟಗಳಲ್ಲಿ ಕಾವೇರಿಯೂ ಒಂದು.

ಮೂಲತಃ ಹಾಸನ ಜಿಲ್ಲೆ ಗೊರೂರಿನವರಾದ ನಟರಾಜ್, ನಾಲ್ಕು ದಶಕಗಳಿಂದ ಅಮೆರಿಕಾದ ಮೇರಿಲ್ಯಾಂಡ್ ನಿವಾಸಿ. ಚಾಟೂಕ್ತಿ, ಅಶುಕವಿತೆ, ನಾಟಕ ಮತ್ತು ಪ್ರಬಂಧ ರಚನೆಯಲ್ಲಿ ಸಿದ್ಧಹಸ್ತರಾದ ಅವರ ರಾಮಾಯಣ ಕಿರುಗಾವ್ಯವು, "ಎಂಎಸ್ಎನ್ ಅವರ ಮೇರುಕೃತಿ" ಎಂದು ಅವರನ್ನು ಹತ್ತಿರದಿಂದ ಬಲ್ಲವರು ಬಣ್ಣಿಸುತ್ತಿದ್ದಾರೆ. ಪುಸ್ತಕ-ಸಿಡಿ ಲಭ್ಯತೆ, ಬೆಲೆ, ಯಾವ ಅಂಗಡಿಯಲ್ಲಿ ಸಿಕ್ಕುತ್ತೆ ಮತ್ತಿತರ ವಿವರಗಳನ್ನು ಸಾವಕಾಶವಾಗಿ ನಮ್ಮ ಓದುಗರಿಗೆ ತಿಳಿಯಪಡಿಸಲಾಗುವುದು - ಸಂಪಾದಕ
ಅಮೆರಿಕಾದಲ್ಲಿ ಹಿಂದು ದೇವಾಲಯಗಳಿಗೆ ಬೇಡಿಕೆ ಹೆಚ್ಚು. ನಿತ್ಯ ಜಪ ತಪ ಪೂಜೆ ಮಾಡಿಸಿಕೊಳ್ಳುವ ಭಾಗ್ಯವಂತ ದೇವಾನುದೇವತೆಗಳಿಗೆ ಕೊರತೆ ಇಲ್ಲ. ವಾರಾಂತ್ಯ ಬಂದರೆ ಕೇಳುವುದೇ ಬೇಡ. ದೇವಾಲಯಗಳು ಭಕ್ತಿ ಭಾವ ಸಮರ್ಪಣೆಯ ಮಾಲ್ ನಂತೆಯೇ ಕಂಡುಬರುತ್ತವೆ. ದೈವಿಕ ಭಾವ ತುಂಬಿತುಳುಕುತ್ತದೆ. ಐದಾರು ವರ್ಷಗಳ ಹಿಂದೆ ನವೀಕರಣಗೊಂಡ ಮೇರಿಲ್ಯಾಂಡ್ ಶಿವವಿಷ್ಣು ದೇವಸ್ಥಾನ ಅಂಥ ಪ್ರಾರ್ಥನಾ ಮಂದಿರಗಳಲ್ಲಿ ಪ್ರಮುಖವಾದದ್ದು.
ಅಭಿಷೇಕ, ಅರ್ಚನೆ, ಗೋತ್ರ ಹೇಳಿ ಕುಂಕುಮಾರ್ಚನೆ, ಹೋಮ ಹವನ, ಪ್ರಸಾದ ವಿನಿಯೋಗಳಿಗಷ್ಟೇ ದೇಗುಳಗಳು ಸೀಮಿತವಾಗದಿರುವುದು ಗಮನಾರ್ಹ. ಕೊಡುಗೈ ಕರ್ಣರ ದಾನ ದತ್ತಿ ನೆರವಿನಿಂದ ವಿಶಾಲ ಸಭಾಂಗಣಗಳನ್ನು, ವಾಹನ ನಿಲ್ದಾಣ ವ್ಯವಸ್ಥೆಯನ್ನು ಆಡಳಿತ ಮಂಡಳಿಗಳು ಕಲ್ಪಿಸುತ್ತವೆ. ಸಭಾಂಗಣದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ, ಭಜನೆ, ಉಪನ್ಯಾಸ, ದೇವರನಾಮ, ಲಲಿತಾ ಸಹಸ್ರನಾಮ, ರುದ್ರ ಪಠಿಸುವವರು ಅದೆಷ್ಟೋ ಜನ ಇರ್ತಾರೆ.
ಅಂದಹಾಗೆ, ಇದೇ ಶನಿವಾರ ಮತ್ತು ಭಾನುವಾರ ( ಏಪ್ರಿಲ್ 12-13) ಶಿವವಿಷ್ಣು ದೇವಸ್ಥಾನದಲ್ಲಿ ಪುರಂದರ ಮತ್ತು ತ್ಯಾಗರಾಜರ ಆರಾಧನೆ ಇಟ್ಟುಕೊಳ್ಳಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 8 ಗಂಟೆವರೆಗೆ ಸಂಗೀತ ಪ್ರಿಯರಿಗೆ ನಾದದಾಸೋಹ. ಶುಕ್ರವಾರ ಸಂಜೆಯಿಂದ ಭಾನುವಾರ ಸಂಜೆಯತನಕ ಪೇಯ್ಡ್ ಪ್ರಸಾದ ಸಮಾರಾಧನೆ ಶಿವವಿಷ್ಣು ದೇವಸ್ಥಾನದ ವಿಶೇಷತೆಗಳಲ್ಲಿ ಒಂದು. ಅಡುಗೆ ತಯ್ಯಾರಿ, ಊಟ ಬಡಿಸುವುದನ್ನು ಸ್ವಯಂಸೇವಕರು ಮಾಡುವರು.
ಈ ಶನಿವಾರ/ಭಾನುವಾರ ರಾತ್ರಿಯ ಅಡುಗೆ ಜವಾಬ್ದಾರಿಯನ್ನು ಗಂಡುಮಕ್ಕಳೇ ನಿರ್ವಹಿಸುತ್ತಿರುವುದು ಸುದ್ದಿ. ವಾಷಿಂಗ್ ಟನ್ ಪೋಸ್ಟ್ ಈ ಕುರಿತ ಚಿತ್ರ ವರದಿಯನ್ನು ಪ್ರಕಟಿಸಿದರೆ ಚೆನ್ನ. ಅಂತೂ, ಪುಸ್ತಕಪ್ರಿಯರಿಗೆ, ಸಂಗೀತ ಪ್ರಿಯರಿಗೆ, ದೇವರಿಗೆ ಹಣ್ಣು ಕಾಯಿ ಮಾಡಿಸುವವರಿಗೆ ಹಾಗೂ ನಳಪಾಕ ಪ್ರಿಯರಿಗೆ ಈ ವಾರ ಶುಭವಾರ. ಡಿಸಿ, ವರ್ಜೀನಿಯ, ವಾಷಿಂಗ್ಟನ್, ಬಾಲ್ಟಿಮೋರ್, ಮೇರಿಲ್ಯಾಂಡ್, ಜರ್ಮನ್ ಟೌನ್, ಹರ್ ಮಿಂಗ್ಡನ್ ಮುಂತಾದ ಬಡಾವಣೆಗಳಲ್ಲಿ ಝಾಂಡಾ ಊರಿರುವ ಕನ್ನಡ ಕುಟುಂಬಗಳಿಗೆ ಶುಭಮಸ್ತು ಮತ್ತು Happy Week-End.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್












Click it and Unblock the Notifications