ಫಿಲಡೆಲ್ಫಿಯಾದ ಕನ್ನಡ ಮನಸು ಡಾ.ಎಚ್.ವೈ.ರಾಜಗೋಪಾಲ್
ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಡಾ.ಎಚ್.ವೈ.ರಾಜಗೋಪಾಲ್ ಕಳೆದ ಸೋಮವಾರ ನಿಧನರಾಗಿದ್ದಾರೆ. ಅವರಿಗೆ ಎಂಬತ್ತೆರಡು ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ, 1935ರಲ್ಲಿ ಜನಿಸಿದ ರಾಜಗೋಪಾಲ್, ತಮ್ಮ ಬದುಕಿನುದ್ದಕ್ಕೂ ಕನ್ನಡವನ್ನೇ ಧೇನಿಸಿದವರು. ಬಿ.ಇ., ಹಾಗೂ ಎಂ.ಇ., ಶಿಕ್ಷಣ ಪಡೆದಿದ್ದ ಅವರು ಮಾಡಿದ್ದು ಕನ್ನಡ ಕಟ್ಟುವ ಕೆಲಸವನ್ನೇ.
1966ರಲ್ಲಿ ಅಮೆರಿಕಕ್ಕೆ ತೆರಳಿದ ರಾಜ್ ಗೋಪಾಲ್ ಅವರು ಪೆನ್ಸಿಲ್ವೇನಿಯಾ ವಿ.ವಿ.ಯಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್ ಪಡೆದಿದ್ದರು. ಫಿಲಿಡೆಲ್ಫಿಯಾದಲ್ಲಿ ವಾಸವಿದ್ದ ಅವರು ಕನ್ಸಲ್ಟಿಂಗ್ ಎಂಜಿನಿಯರ್ ಆಗಿ, ಫ್ಲುಯಿಡ್ ಮೆಕಾನಿಕ್ಸ್ ಪಾಠ ಮಾಡುವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಇಂದಿರಾಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಎಚ್.ವೈ.ಶಾರದಾಪ್ರಸಾದ್ ಅವರು ಇದೇ ರಾಜಗೋಪಾಲ್ ರ ಸಹೋದರ. ಇನ್ನು ರಾಜಗೋಪಾಲ್ ಅವರ ಸಾಹಿತ್ಯ ಪ್ರಿತಿ ಬಗ್ಗೆ ನೆನಪಿಸಿಕೊಂಡರೆ ಒಂದು ಪುಸ್ತಕದಂತಾಗುತ್ತದೆ. 'ಶ್ರುತಿ' ಎಂಬುದು ಸೇರಿದಂತೆ ಹಲ ಸಾಂಸ್ಕೃತಿಕ ಸಂಘಟನೆಗಳ ಜತೆಗೆ ರಾಜಗೋಪಾಲ್ ಅವರಿಗೆ ಕರುಳುಬಳ್ಳಿ ನಂಟಿತ್ತು. ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಸೊಸೈಟಿ 'ಪ್ರಸ್ತಾಪ'ವನ್ನು ಫಿಲಿಡೆಲ್ಫಿಯಾದಲ್ಲಿ ಆರಂಭಿಸಿದವರು ಅವರು. ಕನಡ ಸಾಹಿತ್ಯ ರಂಗವನ್ನು ಆರಂಭಿಸಿದ್ದರು.

1970ರ ದಶಕದಲ್ಲಿ ತಮ್ಮ ಪತ್ನಿ ವಿಮಲಾ ಅವರ ಜತೆಗೂಡಿ ಇಂಡೋ-ಯುಎಸ್ ಚಿಲ್ಡ್ರನ್ಸ್ ಅಸೋಸಿಯೇಷನ್ ಆರಂಭಿಸಿದ್ದರು. ರಾಜಗೋಪಾಲ್ ಅವರ ಮಕ್ಕಳಾದ ಮಾಧವಿ, ಚೇತನ ಹಾಗೂ ಶ್ರೀರಾಮ್ ಕೊಡುಗೆ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಬಹಳ ಇದೆ.
ಅಂದಹಾಗೆ, ರಾಜಗೋಪಾಲ್ ಅವರು ಲೇಖಕರಾಗಿಯೂ ಗುರುತಿಸಿಕೊಂಡವರು. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಬರೆಯುತ್ತಿದ್ದರು. ಗಾಂಧಿಯುಗಕ್ಕೆ ಕನ್ನಡಿ, ಸೃಷ್ಟಿ- ನಾಲ್ಕು ಜಗತ್ತುಗಳು, ಹಲವು ಮಕ್ಕಳ ತಾಯಿ ಒಳಗೊಂಡಂತೆ ಹಲವು ಪುಸ್ತಕಗಳು ಅವರ ಕೆಲಸವನ್ನು ನೆನಪಿಸುತ್ತವೆ.
ಹೊರನಾಡು ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಪ್ರಶಸ್ತಿಯಂಥ ಗೌರವಗಳು ರಾಜಗೋಪಾಲ್ ರಿಗೆ ಸಂದಿದ್ದವು. ನೆನಪಿಸಿಕೊಳ್ಳಲು, ಸ್ಮರಿಸಲು, ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಲು ರಾಜಗೋಪಾಲ್ ರ ಹಲವು ಕೆಲಸಗಳು ಇವೆ.
-
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications