ಬಾಸ್ಟನ್ ನಲ್ಲಿ ಕನ್ನಡತಿಯ ಭರತನಾಟ್ಯ ರಂಗಪ್ರವೇಶ
ಬೇಸಿಗೆ ಬಂತೆಂದರೆ ಅಮೆರಿಕಾದಲ್ಲಿ ಯುವ ಕಲಾವಿದರು ರಂಗಪ್ರವೇಶ ಮಾಡುವ ಕಾಲ. ಪಾಶ್ಚಾತ್ಯ ದೇಶದಲ್ಲಿ ಹುಟ್ಟಿ ಬೆಳೆದು, ಭಾರತೀಯ ಕಲೆಯನ್ನು ಕಲಿತು, ಅದರಲ್ಲಿ ಪರಿಣಿತಿ ಗಳಿಸಿ ರಂಗಪ್ರವೇಶ ಮಾಡುವುದು ಚಿಕ್ಕ ಸಾಧನೆಯೇನು ಅಲ್ಲ.
ಅಮೆರಿಕಾದ ಬೋಸ್ಟನ್ ನ ಕನ್ನಡದ ಹುಡುಗಿಯಾದ ಶೃಣೋತ್ರ ಸ್ಯಾನ್ ಕಳೆದ ಸೆಪ್ಟೆಂಬರ್ ನಲ್ಲಿ ಇಲ್ಲಿನ ವೆಸ್ಟನ್ ಕಾಲೇಜ್ ನ ರಂಗಮಂಚದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದಳು. ನೃತ್ಯ ಕಲಾವಿದೆಯಾದ ಮೀನಾ ಸುಬ್ರಮಣ್ಯಮ್ ಅವರ ಶಿಷ್ಯೆಯಾದ ಶೃಣೋತ್ರ, ಈ ಕಾರ್ಯಕ್ರಮದಲ್ಲಿ ತನ್ನ ಅಚ್ಚುಕಟ್ಟಾದ ನೃತ್ಯ ಪ್ರದರ್ಶನದಿಂದ ಎಲ್ಲರ ಪ್ರಶಂಸೆ ಗಳಿಸಿದಳು. ನೃತ್ಯ ಕಲೆಯ ಬಗ್ಗೆ ಶ್ರದ್ಧೆ ಮತ್ತು ಸತತ ಅಭ್ಯಾಸದ ಫಲ ಪ್ರದರ್ಶನದುದ್ದಕ್ಕೂ ಕಂಡುಬಂತು.

ಶೃಣೋತ್ರಳ ತಮ್ಮ ಶ್ರುಜಲ್ ನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬೋಸ್ಟನ್ ನ ಪ್ರಖ್ಯಾತ ಸಂಗೀತಗಾರರು ಮತ್ತು ಸಂಗೀತ ಶಿಕ್ಷಕರೂ ಆದ ತಾರಾ ಬೆಂಗಳೂರು ಅವರ ವಯೊಲಿನ್, ದುರ್ಗಾ ಕೃಷ್ಣನ್ ಅವರ ವೀಣೆ, ಗೌರಿಶಂಕರ್ ಚಂದ್ರಶೇಖರ್ ಅವರ ಮೃದಂಗ, ಭುವನ ಗಣೇಶ ಅವರ ಗಾಯನ ಮತ್ತು ನಟುವಾಂಗದಲ್ಲಿ ಮೀನಾ ಸುಬ್ರಮಣ್ಯಮ್ ಮತ್ತು ಅವರ ಸಹೋದರಿ, ನೃತ್ಯ ಪಟು ರೋಜ ಕಣ್ಣನ್ - ಇವರೆಲ್ಲರ ಅತ್ಯುತ್ತಮ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.
ಸಾಂಪ್ರದಾಯಿಕ ಪುಷ್ಪಾಂಜಲಿಯಿಂದ ಆರಂಭವಾದ ಶೃಣೋತ್ರಳ ನೃತ್ಯ ಅಭಿನಯಪೂರ್ವಕವಾದ "ಸುಬ್ರಮಣ್ಯ ಕೌತುಕಂ" ಮತ್ತು ಅದರ ನಂತರ ಮಿಶ್ರಛಾಪು ತಾಳದ ಜತಿ ಸ್ವರಕ್ಕೆ ಮುಂದುವರೆಯಿತು. ವಸ್ತ್ರ ಬದಲಾವಣೆ ನಂತರ ಶೃಣೋತ್ರ ದೇವಿಯ ಹಲವು ಭಾವವನ್ನು ಅರ್ಧ ಘಂಟೆಗೂ ಮೀರಿದ ಒಂದು ವರ್ಣಂನ ಮೂಲಕ ಪ್ರದರ್ಶಿಸುವಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದಳು. ಕೀರ್ತನೆ ಮತ್ತು ದೇವರನಾಮ ಭಾಗದಲ್ಲಿ ನಾದ ಮುರಳಿ, ಲಕ್ಷ್ಮಿ, ಭಕ್ತ - ಹೀಗೆ ನಾನಾ ಪಾತ್ರಗಳನ್ನು ಸರಾಗವಾಗಿ ಅಭಿನಯಿಸಿದಳು. ಅಮೋಘವಾದ ತಿಲ್ಲಾನ ಪ್ರದರ್ಶನವನ್ನು ಕಲಾಕ್ಷೇತ್ರ ನಾಟ್ಯಶಾಲೆಯ ಸ್ಥಾಪಕಿ ಹಾಗು ಪ್ರಸಿದ್ಧ ನೃತ್ಯ ಕಲಾವಿದೆ ರುಕ್ಮಿಣಿ ದೇವಿ ಅವರಿಗೆ ಅರ್ಪಿಸಿದ್ದು ಪ್ರಶಂಸನೀಯ.
ನಿಖಿಲ ಮತ್ತು ಶ್ರೀನಿವಾಸುಲು ಅಂಬಾಟಿ ಅವರ ಪುತ್ರಿ, 14 ವರ್ಷದ ಮೃದು ಸ್ವಭಾವದ ಶೃಣೋತ್ರ ಆಗಮಿಸಿದ ಅತಿಥಿಗಳು ತಂದ ಉಡುಗೊರೆಯನ್ನು A I F ಸಂಸ್ಥೆಗೆ ದಾನ ಮಾಡಿದ್ದು ಉಲ್ಲೇಖಾರ್ಹ. ನವರಸಗಳಿಂದ ಕೂಡಿದ ಪ್ರದರ್ಶನದಲ್ಲಿ ಪ್ರೇಕ್ಷಕರು ಮಧುರ ರಸದಲ್ಲಿ ಮಿಂದು ಸಂತೋಷ ವ್ಯಕ್ತಪಡಿಸಿದರು. ಇಂಥ ಕಾರ್ಯಕ್ರಮಗಳಿಂದ, ಹೊರದೇಶದಲ್ಲಿ ಭಾರತೀಯ ಕಲೆಯನ್ನು ಮುಂದಿನ ಪೀಳಿಗೆಯವರು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸುವರು ಮತ್ತು ಪುರಸ್ಕರಿಸುವರು ಎಂಬ ಭರವಸೆ ಪ್ರಬಲವಾಗುತ್ತದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications