ಬಾಸ್ಟನ್ ನಲ್ಲಿ ಕನ್ನಡತಿಯ ಭರತನಾಟ್ಯ ರಂಗಪ್ರವೇಶ
ಬೇಸಿಗೆ ಬಂತೆಂದರೆ ಅಮೆರಿಕಾದಲ್ಲಿ ಯುವ ಕಲಾವಿದರು ರಂಗಪ್ರವೇಶ ಮಾಡುವ ಕಾಲ. ಪಾಶ್ಚಾತ್ಯ ದೇಶದಲ್ಲಿ ಹುಟ್ಟಿ ಬೆಳೆದು, ಭಾರತೀಯ ಕಲೆಯನ್ನು ಕಲಿತು, ಅದರಲ್ಲಿ ಪರಿಣಿತಿ ಗಳಿಸಿ ರಂಗಪ್ರವೇಶ ಮಾಡುವುದು ಚಿಕ್ಕ ಸಾಧನೆಯೇನು ಅಲ್ಲ.
ಅಮೆರಿಕಾದ ಬೋಸ್ಟನ್ ನ ಕನ್ನಡದ ಹುಡುಗಿಯಾದ ಶೃಣೋತ್ರ ಸ್ಯಾನ್ ಕಳೆದ ಸೆಪ್ಟೆಂಬರ್ ನಲ್ಲಿ ಇಲ್ಲಿನ ವೆಸ್ಟನ್ ಕಾಲೇಜ್ ನ ರಂಗಮಂಚದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದಳು. ನೃತ್ಯ ಕಲಾವಿದೆಯಾದ ಮೀನಾ ಸುಬ್ರಮಣ್ಯಮ್ ಅವರ ಶಿಷ್ಯೆಯಾದ ಶೃಣೋತ್ರ, ಈ ಕಾರ್ಯಕ್ರಮದಲ್ಲಿ ತನ್ನ ಅಚ್ಚುಕಟ್ಟಾದ ನೃತ್ಯ ಪ್ರದರ್ಶನದಿಂದ ಎಲ್ಲರ ಪ್ರಶಂಸೆ ಗಳಿಸಿದಳು. ನೃತ್ಯ ಕಲೆಯ ಬಗ್ಗೆ ಶ್ರದ್ಧೆ ಮತ್ತು ಸತತ ಅಭ್ಯಾಸದ ಫಲ ಪ್ರದರ್ಶನದುದ್ದಕ್ಕೂ ಕಂಡುಬಂತು.

ಶೃಣೋತ್ರಳ ತಮ್ಮ ಶ್ರುಜಲ್ ನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬೋಸ್ಟನ್ ನ ಪ್ರಖ್ಯಾತ ಸಂಗೀತಗಾರರು ಮತ್ತು ಸಂಗೀತ ಶಿಕ್ಷಕರೂ ಆದ ತಾರಾ ಬೆಂಗಳೂರು ಅವರ ವಯೊಲಿನ್, ದುರ್ಗಾ ಕೃಷ್ಣನ್ ಅವರ ವೀಣೆ, ಗೌರಿಶಂಕರ್ ಚಂದ್ರಶೇಖರ್ ಅವರ ಮೃದಂಗ, ಭುವನ ಗಣೇಶ ಅವರ ಗಾಯನ ಮತ್ತು ನಟುವಾಂಗದಲ್ಲಿ ಮೀನಾ ಸುಬ್ರಮಣ್ಯಮ್ ಮತ್ತು ಅವರ ಸಹೋದರಿ, ನೃತ್ಯ ಪಟು ರೋಜ ಕಣ್ಣನ್ - ಇವರೆಲ್ಲರ ಅತ್ಯುತ್ತಮ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.
ಸಾಂಪ್ರದಾಯಿಕ ಪುಷ್ಪಾಂಜಲಿಯಿಂದ ಆರಂಭವಾದ ಶೃಣೋತ್ರಳ ನೃತ್ಯ ಅಭಿನಯಪೂರ್ವಕವಾದ "ಸುಬ್ರಮಣ್ಯ ಕೌತುಕಂ" ಮತ್ತು ಅದರ ನಂತರ ಮಿಶ್ರಛಾಪು ತಾಳದ ಜತಿ ಸ್ವರಕ್ಕೆ ಮುಂದುವರೆಯಿತು. ವಸ್ತ್ರ ಬದಲಾವಣೆ ನಂತರ ಶೃಣೋತ್ರ ದೇವಿಯ ಹಲವು ಭಾವವನ್ನು ಅರ್ಧ ಘಂಟೆಗೂ ಮೀರಿದ ಒಂದು ವರ್ಣಂನ ಮೂಲಕ ಪ್ರದರ್ಶಿಸುವಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದಳು. ಕೀರ್ತನೆ ಮತ್ತು ದೇವರನಾಮ ಭಾಗದಲ್ಲಿ ನಾದ ಮುರಳಿ, ಲಕ್ಷ್ಮಿ, ಭಕ್ತ - ಹೀಗೆ ನಾನಾ ಪಾತ್ರಗಳನ್ನು ಸರಾಗವಾಗಿ ಅಭಿನಯಿಸಿದಳು. ಅಮೋಘವಾದ ತಿಲ್ಲಾನ ಪ್ರದರ್ಶನವನ್ನು ಕಲಾಕ್ಷೇತ್ರ ನಾಟ್ಯಶಾಲೆಯ ಸ್ಥಾಪಕಿ ಹಾಗು ಪ್ರಸಿದ್ಧ ನೃತ್ಯ ಕಲಾವಿದೆ ರುಕ್ಮಿಣಿ ದೇವಿ ಅವರಿಗೆ ಅರ್ಪಿಸಿದ್ದು ಪ್ರಶಂಸನೀಯ.
ನಿಖಿಲ ಮತ್ತು ಶ್ರೀನಿವಾಸುಲು ಅಂಬಾಟಿ ಅವರ ಪುತ್ರಿ, 14 ವರ್ಷದ ಮೃದು ಸ್ವಭಾವದ ಶೃಣೋತ್ರ ಆಗಮಿಸಿದ ಅತಿಥಿಗಳು ತಂದ ಉಡುಗೊರೆಯನ್ನು A I F ಸಂಸ್ಥೆಗೆ ದಾನ ಮಾಡಿದ್ದು ಉಲ್ಲೇಖಾರ್ಹ. ನವರಸಗಳಿಂದ ಕೂಡಿದ ಪ್ರದರ್ಶನದಲ್ಲಿ ಪ್ರೇಕ್ಷಕರು ಮಧುರ ರಸದಲ್ಲಿ ಮಿಂದು ಸಂತೋಷ ವ್ಯಕ್ತಪಡಿಸಿದರು. ಇಂಥ ಕಾರ್ಯಕ್ರಮಗಳಿಂದ, ಹೊರದೇಶದಲ್ಲಿ ಭಾರತೀಯ ಕಲೆಯನ್ನು ಮುಂದಿನ ಪೀಳಿಗೆಯವರು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸುವರು ಮತ್ತು ಪುರಸ್ಕರಿಸುವರು ಎಂಬ ಭರವಸೆ ಪ್ರಬಲವಾಗುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications