ಸೆ.24ರಂದು ಅಮೆರಿಕ ಮಂದಾರದಲ್ಲಿ ಗಣೇಶೋತ್ಸವ

ಇದೇ ಬರುವ ಸೆಪ್ಟೆಂಬರ್ 24ರಂದು ಮೆಸಾಚುಸೆತ್ಸ್ ರಾಜ್ಯದ ಫ್ರೆಮಿಂಗ್ ಹ್ಯಾಮಿನಲ್ಲಿ ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಣ್ಮನ ಕಿವಿಗಳಿಗೆ ರಸದೌತಣದ ಜೊತೆಗೆ ಬಾಯಲ್ಲಿ ನೀರೂರಿಸುವ ಹಬ್ಬದ ರಸಗವಳದ ಸಿದ್ಧತೆಯೂ ಭರದಿಂದ ಸಾಗಿದೆ.
ಕಾರ್ಯಕ್ರಮದ ಪಟ್ಟಿ : ಗಣಪತಿ ಪೂಜೆಯೊಂದಿಗೆ ಸರಿಯಾಗಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗುವ ಕಾರ್ಯಕ್ರಮ, ಭರವಸೆಯ ಕಲಾವಿದೆ ದೀಪ್ತಿ ನವರತ್ನ ಅವರ ಕರ್ನಾಟಕ ಸಂಗೀತ, ಗಣಪತಿ ಆರಾಧನೆಯೊಂದಿಗೆ ಮನರಂಜನೆಗೆ ಮೊದಲುಗೊಳ್ಳಲಿದೆ.
ಕನ್ನಡ ಸಂಗೀತ ಕ್ಷೇತ್ರದ ಹೊಸ ತಲೆಮಾರಿನ ಅದ್ಭುತ ಹಾಡುಗಾರ ಗಣೇಶ್ ದೇಸಾಯಿ ಮತ್ತು 'ಮೂಡಲ ಮನೆ' ಖ್ಯಾತಿಯ ನಮಿತಾ ದೇಸಾಯಿಯವರ ಲಾಲಿತ್ಯಪೂರ್ಣ ನೃತ್ಯಾವಳಿ, ಕಾರ್ಯಕ್ರಮದ ಕೇಂದ್ರ ಆಕರ್ಷಣೆ.
ಕರ್ನಾಟಕದ ವಿವಿಧ ಸಂಸ್ಕೃತಿಯ ಬಟ್ಟೆಬರೆಗಳ ಸೊಬಗನ್ನು ಪರಿಚಯಿಸುವ ಫ್ಯಾಶನ್ ಶೋ, ಹಳ್ಳಿ ಹೆಂಗಸರ ವಿಶಿಷ್ಟ ವಾದ್ಯಗೋಷ್ಠಿಯ ದುಡಿತ-ಮಿಡಿತ ಜಾನಪದ ಸಂಗೀತ, ಕಲಾಶ್ರೀ ಪ್ರೊ. ಮಲ್ಲಣ್ಣರವರ ತಂಡದಿಂದ ಕನ್ನಡ ಜನಪ್ರಿಯ ಗೀತೆಗಳ ಲಘು ರಸಸಂಜೆ. ಇವೆಲ್ಲದರ ಜೊತೆಗೆ ಇದೇ ಮೊದಲ ಬಾರಿಗೆ "ನ್ಯೂ ಇಂಗ್ಲೆಂಡ್ ನಾಲಾಯಕರು" ತಂಡದವರು ನಗೆಗಡಲಲ್ಲಿ ನಿಮ್ಮನ್ನೆಲ್ಲ ತೇಲಿಸಲು ಪ್ರಸ್ತುತಪಡಿಸುತ್ತಿರುವ ಹಾಸ್ಯನಾಟಕ.
ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತಿರುವ ಕಾರ್ಯಕ್ರಮ ನಡೆಯಲಿರುವ ಸ್ಥಳದ ವಿಳಾಸ ಹೀಗಿದೆ : Keef Tech Auditorium, 750 Winter Street, Framingham MA. ಈಗಲೇ ಕಾರ್ಯಕ್ರಮಕ್ಕೆ ಹೊರಡಲು ತಯಾರಾಗುತ್ತಿದ್ದರೆ ಸ್ವಲ್ಪ ತಡೆಯಿರಿ. ಇನ್ನೂ ಇದೆ!
ಅಪ್ಪಟ ಕರ್ನಾಟಕ ಶೈಲಿಯ ರುಚಿಕರ ಹಬ್ಬದೂಟದ ನಂತರ ರಂಗದಮೇಲೆ ರಂಗುರಂಗಿನ ಯಕ್ಷಗಾನ. ಯಕ್ಷಗಾನ ಕಲಾವೃಂದದವರ ಆಶ್ರಯದಲ್ಲಿ ಸ್ಥಳೀಯ ಕಲಾವಿದರೂ ಸೇರಿ ನಡೆಸಿಕೊಡಲಿದ್ದಾರೆ "ಮಾಗಧ ವಧೆ".
ಇದೇ ಸಂದರ್ಭದಲ್ಲಿ ಮಂದಾರ ಕನ್ನಡ ಕೂಟಕ್ಕೆ ಸದಸ್ಯರಾಗಿ ತಮ್ಮ ಕುಟುಂಬವನ್ನು ನೊಂದಾಯಿಸಿಕೊಳ್ಳಲು ಮರೆಯಬೇಡಿ. ಬನ್ನಿ, ಆನಂದಿಸಿ, ಹಬ್ಬದೂಟದೊಡನೆ ಗಣಪನ ಕೃಪೆಯಲ್ಲಿ ಕನ್ನಡಕೂಟವನ್ನು ಹರಸಿ ಬೆಳೆಸಿ. ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗಾಗಿ ನಮ್ಮ ಜಾಲತಾಣಕ್ಕೆ http://www.nekk.org ಭೇಟಿ ನೀಡುತ್ತಿರಿ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications