Get Updates
Get notified of breaking news, exclusive insights, and must-see stories!

ದುಬೈನಲ್ಲಿ 'ಆಷಾಡದ ಒಂದು ದಿನ' ಕನ್ನಡ ನಾಟಕ

Kannada drama show in Dubai
ದುಬೈ, ಡಿ. 27 : ಧ್ವನಿ ಪ್ರತಿಷ್ಠಾನ ರಜತ ಮಹೋತ್ಸವದ ಯಶಸ್ವಿ ಸಮಾರಂಭಗಳ ನಂತರ ಇಪ್ಪತ್ತೇಳನೆ ವರ್ಷದ ಕಾಣಿಕೆಯಾಗಿ "ಆಷಾಡದ ಒಂದು ದಿನ" ಕನ್ನಡ ನಾಟಕವನ್ನು 30ನೇ ಮಾರ್ಚ್ 2012 ಶುಕ್ರವಾರ ಸಂಜೆ 5 ಗಂಟೆಗೆ ಜುಮೇರಾ ಇಂಗ್ಲಿಷ್ ಸ್ಪೀಕಿಂಗ್ ಸ್ಕೂಲ್ ನ ಏಮೇರೆಟ್ಸ್ ಥಿಯೇಟರ್ ನಲ್ಲಿ ರಂಗವೇರಲಿದೆ.

ಈ ನಾಟಕವನ್ನು ದುಬೈ ಕನ್ನಡಿಗರಿಗಾಗಿ 2010ರ ಸಾಲಿನ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪ್ರಕಾಶ್ ರಾವ್ ಪಯ್ಯಾರ್ ಅವರು ನಿರ್ದೇಶಿಸಲಿದ್ದಾರೆ. ’ಧ್ವನಿ’ ಈ ಹಿಂದೆ ಗಿರೀಶ್ ಕಾರ್ನಡರ ’ನಾಗ ಮಂಡಲ’, ’ಹಯವದನ’, ’ಒಡಕಲು ಬಿಂಬ’ ನಾಟಕಗಳನ್ನು ದುಬೈಯಲ್ಲಿ ಪ್ರದರ್ಶಿಸಿದೆ. ’ಧ್ವನಿ’ ನಿರ್ಮಿಸಿದ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳು ಭಾರತದ ವಿವಿಧೆಡೆ ಹಲವಾರು ಪ್ರದರ್ಶನಗೊಂಡಿವೆ. ನಾಟಕಗಾರ ಪ್ರೊ. ಮೋಹನ್ ರಾಕೇಶ್ ಅವರ ಈ "ಆಷಾಡ್ ಕಾ ಏಕ್ ದಿನ್" ನಾಟಕವನ್ನು ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ.

ಮೋಹನ್ ರಾಕೇಶ್ ಬಗ್ಗೆ : ಹಿಂದಿಯ ಸುಪ್ರಸಿದ್ಧ ನಾಟಕಕಾರ ಮೋಹನ್ ರಾಕೇಶ್ ಅವರ ಪ್ರಪ್ರಥಮ ಈ ನಾಟಕ 1958ರಲ್ಲಿ ರಚಿಸಲ್ಪಟ್ಟು ಹಿಂದಿಯ ಪ್ರಥಮ ಆಧುನಿಕ ನಾಟಕ ಎಂಬ ಹೆಗ್ಗಳಿಕೆಯೊಂದಿಗೆ 1959ರ ಅತ್ಯುತ್ತಮ ನಾಟಕ ಪ್ರಶಸ್ತಿಯನ್ನು ಸಂಗೀತ ನಾಟಕ ಆಕಾಡೆಮಿಯಿಂದ ಪಡೆದುಕೊಂಡಿತು. ಹಿಂದಿ ರಂಗಭೂಮಿಯ ದಿಕ್ಕು ದೆಸೆ ಬದಲಾಯಿಸಿದ ಈ ನಾಟಕ ಭಾರತದ ಪ್ರಖ್ಯಾತ ರಂಗ ನಿರ್ದೇಶಕರಿಂದ ದೇಶದ ವಿವಿಧೆಡೆ ಪ್ರದರ್ಶಿಸಲ್ಪಟ್ಟಿದೆ.

1972ರಲ್ಲಿ ಮೋಹನ್ ರಾಕೇಶ್ ಅವರು ದೈವಾಧೀನರಾದಾಗ ಅವರ ಮೂರು ನಾಟಕಗಳು ಪ್ರಕಟಗೊಂಡಿದ್ದವು; ನಾಲ್ಕನೇ ನಾಟಕ ಅಪೂರ್ಣವಾಗಿತ್ತು. ಮೋಹನ್ ರಾಕೇಶ್ ಅವರು ಏಳು ಕಾದಂಬರಿ ಏಳು ಕಥಾ ಸಂಕಲನ ಹಾಗೂ ನೂರಾರು ಇತರ ಪ್ರಕಾರದ ಸಾಹಿತ್ಯ ಲೇಖನಗಳನ್ನು ರಚಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+