ನ್ಯೂ ಇಂಗ್ಲೆಂಡ್ ಮಂದಾರದಲ್ಲಿ ಭರ್ಜರಿ ಗಣೇಶೋತ್ಸವ

ನೂತನ ಅಧ್ಯಕ್ಷ ಪ್ರವೀಣ ನಡುತೋಟ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರೆಲ್ಲ ಹುರುಪಿನಿಂದ ಸಮಯಕ್ಕೆ ಮುಂಚೆ ಆಗಮಿಸಿತಮ್ಮ ತಯಾರಿಯಲ್ಲಿ ಮಗ್ನರಾಗಿದ್ದರು. ಶಾಂತರಾಜು ಅವರ ಹಣಕಾಸು ಸಮಿತಿ ಮತ್ತು ಜಾಹ್ನವಿ ಬಸವರಾಜಪ್ಪ ಅವರ ಸ್ವಾಗತ ಸಮಿತಿಯವರು, ಸದಸ್ಯರು ಹಾಗೂ ಅತಿಥಿಗಳನ್ನು ಬಹಳ ಅಚ್ಚುಕಟ್ಟಾಗಿ ಬರಮಾಡಿಕೊಂಡರು. ಕಾರ್ಯಕ್ರಮದ ಮೊದಲಿಗೆ ಕೋದಂಡಪಾಣಿ ಅವರು ಸಾಂಪ್ರದಾಯಿಕ ಗಣೇಶ ಪೂಜೆ ನಡೆಸಿಕೊಟ್ಟರು. ವಿಘ್ನ ವಿನಾಶಕನ ಕೃಪೆ ಕೋರಿದ ನಂತರ ಉಪಾಧ್ಯಕ್ಷೆ ಮಮತಾ ಕೂಡ್ಲುಗಿ ಅವರಿಂದ ಸ್ವಾಗತ ಭಾಷಣ. ನಂತರ, ಬೋಸ್ಟನ್ನವರೇ ಆದ ದೀಪ್ತಿ ನವರತ್ನ ಅವರು ಕರ್ನಾಟಕ ಶಾಸ್ತ್ರೀಯ ಗಾಯನದಿಂದ ಪ್ರೇಕ್ಷಕರ ಮನ ಗೆದ್ದರು. ಪಕ್ಕವಾದ್ಯದಲ್ಲಿ ಮೃದಂಗ ನುಡಿಸಿದವರು ಉಲ್ಲಾಸ್ ರಾವ್.
ಮುಂದಿನ ಕಾರ್ಯಕ್ರಮದಲ್ಲಿ, ಶೋಭಾ ಹಿರೇಮಠ ಅವರು ತಮ್ಮ ತಂಡದೊಂದಿಗೆ ಹಳ್ಳಿಯ ಜೀವನ ಹಾಗೂ ಜಾನಪದ ಸೊಗಡನ್ನು ನಿರೂಪಿಸುವ "ದುಡಿತ-ಮಿಡಿತ" ಎಂಬ ವಿನೂತನ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಇದರಲ್ಲಿ ಅಡುಗೆ ಮನೆ ಪರಿಕರಗಳನ್ನು ಉಪಯೋಗಿಸಿ ಸಂಗೀತ ವಾದ್ಯ ನುಡಿಸಿದರು. ಜನಪದ ಗೀತೆ "ಹಾಕಯ್ಯಾ ಹರಿಗೋಲ ನೂಕಯ್ಯ ತೆಪ್ಪ" ಹಾಗೂ ಇತರ ಹಾಡುಗಳನ್ನು ಕೇಳಿ ಕರ್ನಾಟಕದ ಯಾವುದೋ ಹಳ್ಳಿಗೆ ಭೇಟಿ ಕೊಟ್ಟಂಥ ಅನುಭವ! ಮುಂದೆ, ಕಣ್ಮನ ತಣಿಸುವ ಕರ್ನಾಟಕದ ವಿವಿಧ ಪ್ರದೇಶಗಳ ವಸ್ತ್ರ ವಿನ್ಯಾಸವನ್ನು ಬಿಂಬಿಸುವ ಫ್ಯಾಶನ್ ಶೋ. ಅಶ್ವಿನಿ ಸಾಮಗ ಹಾಗೂ ತಂಡದವರು ವಿವಿಧ ಉಡುಗೆ ಧರಿಸಿ ತಮ್ಮ "ಬೆಕ್ಕಿನ ನಡಿಗೆ" ಯಿಂದ ಎಲ್ಲರನ್ನು ರಂಜಿಸಿದರು! ದಂಪತಿಗಳಲ್ಲದೆ ಮಕ್ಕಳು ಕೂಡ ತಮ್ಮ ವೇಷಭೂಷಣದಿಂದ ನಮ್ಮನ್ನು ಕರುನಾಡಿಗೆ ಒಯ್ದರು.
ವೈಶಾಲಿ ಹೆಗಡೆ ಅವರ ನೇತೃತ್ವದಲ್ಲಿ ಮನರಂಜನಾ ಸಮಿತಿಯವರು ಕೂಟದ ವಿವಿಧ ಸಮಿತಿಗಳನ್ನು ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರಿಗೆ ಪರಿಚಯಿಸಿದರು. ಪ್ರತಿ ಕಾರ್ಯಕ್ರಮಕ್ಕೆ ಮುಂಚೆ ಒಬ್ಬೊಬ್ಬರಂತೆ ಭೋಜನ, ಸ್ವಾಗತ, ಅಂತರ್ಜಾಲ ತಾಣ, ಛಾಯಾಗ್ರಹಣ, ಧ್ವನಿ ವ್ಯವಸ್ಥೆ, ಮನರಂಜನೆ, ಪ್ರಚಾರ, ಸಲಹೆ, ಹಾಗೂ ದರ್ಪಣ ವಾರ್ತಾಪತ್ರಿಕೆ ಸಮಿತಿಯವರು ವೇದಿಕೆ ಮೇಲೆ ಬಂದು ತಮ್ಮ ಯೋಜನೆಗಳನ್ನು ಹಂಚಿಕೊಂಡು, ಮುಂಬರುವ ಕಲಾವಿದರ ಪರಿಚಯ ಮಾಡಿಕೊಟ್ಟರು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications