ಅರಿಜೋನಾದಲ್ಲಿ ಶ್ರೀಮನ್ನಾರಾಯಣ ಪ್ರತ್ಯಕ್ಷ!

ಅರಿಜೋನಾ ರಾಜ್ಯದಲ್ಲಿ ಆರಂಭಗೊಂಡಿರುವ ನೂತನ ಹರಿಯ ದೇವಸ್ಥಾನದಿಂದಾಗಿ 'ಹರಿಝೋನ್' ಹರಿ ವಲಯ ಎಂಬಂತಾಗಿದೆ ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು. ನೂರಾರು ಭಕ್ತಾದಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡು ಹರಿ ಸ್ಮರಣೆ ಮಾಡಿ ಶ್ರೀಗಳ ಆಶೀರ್ವಾದ ಪಡೆದರು.
ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ನಡೆದ ದೇವರ ವಿಗ್ರಹಗಳ ಪ್ರತಿಷ್ಠ್ಠಾಪನಾ ಸಮಾರಂಭದಲ್ಲಿ ಟೆಂಪೆ ನಗರದ ಮೇಯರ್ ಹ್ಯೂಗ್ ಹಾಲ್ಮನ್ ಪಾಲ್ಗೊಂಡಿದ್ದರು. ಶಾಂತಿ ಮತ್ತು ಭಕ್ತಿಯ ನೆಲೆಯೊಂದು ತಮ್ಮ ನಗರದಲ್ಲಿ ಆರಂಭವಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ದೇವಸ್ಥಾನ ನಿರ್ಮಿಸಲು ನೆರವಾದ ಅರಿಜೋನಾ ನಾಗರಿಕರ ಕೊಡುಗೆ ಮತ್ತು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರೀಸ್ಟ್ ಸ್ಟ್ರೀಟ್ ಸಮೀಪ ಸ್ಥಾಪನೆಗೊಂಡಿರುವ ಹಿನ್ನೆಲೆಯಲ್ಲಿ ಪ್ರದೇಶವನ್ನು 'ವೆಂಕಟ ಕೃಷ್ಣ ಕ್ಷೇತ್ರ' ಎಂದು ಘೋಷಿಸಿದ್ದಾರೆ.











Click it and Unblock the Notifications