ಲ್ಯಾಂಬೆತ್ ನಲ್ಲಿ ಬಸವಣ್ಣ : ಆರ್ ಅಶೋಕ್ ಮೆಚ್ಚುಗೆ
ಲಂಡನ್,
ಏ. 20 : ಲಂಡನ್ ನ ಲ್ಯಾಂಬೆತ್ ನಲ್ಲಿ ಕ್ರಾಂತಿಕಾರಿ 'ಜಗಜ್ಯೋತಿ' ಬಸವೇಶ್ವರರ ಮೂರ್ತಿಯನ್ನು ಸ್ಥಾಪಿಸುತ್ತಿರುವುದಕ್ಕೆ ಕರ್ನಾಟಕದ ಗೃಹ ಸಚಿವ ಆರ್ ಅಶೋಕ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸವೇಶ್ವರರ ಆಳೆತ್ತರದ ಮೂರ್ತಿಯನ್ನು ಸ್ಥಾಪಿಸಲು ಶ್ರಮಿಸುತ್ತಿರುವ ಲ್ಯಾಂಬೆತ್ ಮೇಯರ್ ಕನ್ನಡಿಗ ನೀರಜ್ ಪಾಟೀಲ್ ಮತ್ತು ಲ್ಯಾಂಬೆತ್ ಏಷ್ಯನ್ ಫೋರಂನ ಸದಸ್ಯರನ್ನು ಶ್ಲಾಘಿಸಿದ್ದಾರೆ. id="toptextpromo">ಪ್ರಸ್ತುತ
ಸಹಧರ್ಮಿಣಿ ಪ್ರಮಿಳಾ ಅವರ ಜೊತೆ ಯುರೋಪ್ ನ ಅಧಿಕೃತ ಪ್ರವಾಸದಲ್ಲಿರುವ ಅಶೋಕ್ ಅವರು, ಬಸವೇಶ್ವರ ಅವರ ತತ್ವಬೋಧನೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಜಾಗತಿಕ ಪ್ರಸ್ತುತತೆ ಹೊಂದಿವೆ ಎಂದು ನುಡಿದರು. ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ಸಾಮಾಜಿಕ ಕಾರ್ಯಕರ್ತರಾಗಿದ್ದ ಬಸವಣ್ಣ ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯ ಹರಿಕಾರ ಎಂದು ಬಸವೇಶ್ವರ ಅವರ ಕೊಡುಗೆಯನ್ನು ಕೊಂಡಾಡಿದರು. ಲಂಡನ್ ನಲ್ಲಿ ಬಸವೇಶ್ವರ ಅವರ ಪ್ರತಿಮೆ ಸ್ಥಾಪಿಸುತ್ತಿರುವುದು ಭಾರತದ ಜನತೆಗೆ ಮಾತ್ರವಲ್ಲ ಯುನೈಟೆಡ್ ಕಿಂಗ್ ಡಮ್ ನ ಜನತೆಗೂ ಹರ್ಷ ತರಲಿದೆ ಎಂದು ಅವರು ನುಡಿದರು. id='are-slot-1' class='oiad oi-axt oiadv'> id='top-searched-articles'>ಅಶೋಕ್
ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದ ನೀರಜ್ ಪಾಟೀಲ್ ಮತ್ತು ಲ್ಯಾಂಬೆತ್ ಏಷ್ಯನ್ ಫೋರಂನ ಸದಸ್ಯರು ಅಶೋಕ್ ದಂಪತಿಗಳಿಗೆ ಬರೋದಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನ ಮಾಡಿಸಿದರು. ನಂತರ ಹೌಸ್ ಆಫ್ ಕಾಮನ್ಸ್ ನ ಎದುರಿಗಿರುವ ಮೆರಿಯಟ್ ಹೊಟೇಲ್ ನಲ್ಲಿ ಏಷ್ಯನ್ ಫೋರಂ ಅವರನ್ನು ಸನ್ಮಾನಿಸಿತು.











Click it and Unblock the Notifications