ಅಮೆರಿಕದ ತಿರುಪತಿಯಲ್ಲಿ ಮಹಾಲಕ್ಷ್ಮಿ ಯಾಗ

ಅಮೆರಿಕದ ಹಿಂದೂ ಭಕ್ತಾದಿಗಳ ನೆಚ್ಚಿನ ತಾಣವಾಗಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಈ ಐದು ದಿನಗಳಲ್ಲಿ ಅಪಾರ ಭಕ್ತ ಸಮೂಹ ಹರಿದು ಬರುವ ನಿರೀಕ್ಷೆ ವ್ಯಕ್ತವಾಗಿದೆ.
ಧನ ಸಂಪತ್ತು, ಐಶ್ವರ್ಯ, ಸೌಂದರ್ಯಕ್ಕೆ ಒಡತಿಯಾದ ಮಹಾಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಐದು ದಿನಗಳ ಕಾಲದ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ಐದೂ ದಿನಗಳ ಪೂಜಾ ಕೈಂಕರ್ಯಗಳನ್ನು ಸಾಂಗವಾಗಿ ನೆರವೇರಿಸಲು ಶ್ರೀ ಥಿಂಡಂಡಿ ಶ್ರೀಮನ್ನಾರಾಯಣ ಚಿನ್ನ ಜೀಯರ್ ಸ್ವಾಮೀಜಿ ಹಾಗೂ ಅವರ ನಾಲ್ಕು ಜನ ವೇದ ಪಾರಂಗತ ಹೋತ್ರಿಗಳು ಸನ್ನದ್ಧರಾಗಿದ್ದಾರೆ.
ವೇದ ಘೋಷಗಳ ಜೊತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಈ ಧಾರ್ಮಿಕ ಹಬ್ಬ ಸಾಕ್ಷಿಯಾಗಲಿದೆ. ದಕ್ಷಿಣ ಭಾರತದ ಖ್ಯಾತನಾಮರಿಂದ ನಾದಸ್ವರ ವಾದನ ಸೇರಿದಂತೆ ಭಾರತದ ಹೆಸರಾಂತ ಕಲಾವಿದರು ಶ್ರೀ ವೆಂಕಟೇಶ್ವರನಿಗೆ 'ಸಂಗೀತ ಸೇವೆ'ಯನ್ನು ಸಲ್ಲಿಸಲಿದ್ದಾರೆ.
ಯಾಗದ ಕೊನೆ ದಿನದಂದು ಶ್ರೀ ವೆಂಕಟೇಶ್ವರನಿಗೆ ಸ್ವರ್ಣ ಕವಚ ತೊಡಿಸಲಾಗುವುದು. ಚಿನ್ನದ ಕರ್ಣ ಕುಂಡಲ ಶಂಖ ಚಕ್ರ,ವರದ ಹಸ್ತ ಆಭರಣಗಳ ಸಮೇತನಾದ ವೆಂಕಟೇಶ್ವರ ವೈಭವದಿಂದ ಮೆರೆಸಲಾಗುತ್ತದೆ.
ಶ್ರೀ ವೆಂಕಟೇಶ್ವರನಿಗೆ ಚಿನ್ನದ ಉಡುಗೆ ತೊಡುಗೆ ತೊಡಿಸಿ, ಸರ್ವಾಭರಣ ಸರ್ವಾಲಂಕಾರ ಭೂಷಿತನಾದ ಸರ್ವಶಕ್ತನಿಗೆ ಎಲ್ಲರೂ ನಮಿಸುತ್ತಿದ್ದಂತೆ ಅತ್ತ ಮಹಾಲಕ್ಷ್ಮಿ ಯಾಗ ಕೂಡಾ ಪೂರ್ಣಾಹುತಿಗೆ ಸಿದ್ಧವಾಗಲಿದೆ. ಭಾರತ ತೊರೆದು ತಮ್ಮ ನೆಚ್ಚಿನ ದೇವರನ್ನು ಕಾಣಲು ಬಯಸುವ ಅಮೆರಿಕದ ಆಸ್ತಿಕರ ಪಾಲಿಗೆ ಪಿಟ್ಸ್ ಬರ್ಗ್ ನ ವೆಂಕಟೇಶ್ವರನೇ ತಿರುಮಲದ ತಿಮ್ಮಪ್ಪನಾಗಿ ಎಲ್ಲರಿಗೂ ಕಾಣಿಸಲಿದ್ದಾನೆ.
ದೇಗುಲದ ಸಂಪರ್ಕ ವಿಳಾಸ:
Official Website: SVMTemple
Email: [email protected]
[email protected]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications