ನ್ಯೂಇಂಗ್ಲೆಂಡ್ನಲ್ಲಿ ಯುಗಾದಿ ಸಂಭ್ರಮ

ಈ ವರ್ಷದ ಯುಗಾದಿಗೆ ಬೆಂಗಳೂರಿನ ತಂಡ "Kriyative Theatre" ಅವರ ನಾಟಕಗಳ ಬಗ್ಗೆ ಬಹಳ ನಿರೀಕ್ಷೆ. ತಂಡದ ನಿರ್ದೇಶಕಿ ರಂಗಕರ್ಮಿ ಲಕ್ಷ್ಮಿ ಚಂದ್ರಶೇಖರ್. ಚುಮು ಚುಮು ಮಳೆಯನ್ನೂ ಲೆಕ್ಕಿಸದೆ ಸುಮಾರು 200 ಕ್ಕೂ ಹೆಚ್ಚು ಕನ್ನಡಿಗರು ಶನಿವಾರ, ಏಪ್ರಿಲ್ 17 2010 ರಂದು ಫ್ರಮೀನ್ಘಾಂ ನ Keefe Tech Auditorium ನಲ್ಲಿ ಕಲೆತಿದ್ದರು.
ಕಾರ್ಯಕಾರಿಣಿ ಸಮಿತಿಯ ಸದಸ್ಯರಿಂದ ಗಣೇಶ ವಂದನೆ ಹಾಗು ಯುಗಾದಿ ಗೀತೆಗಳ ನಂತರ "ರತ್ನನ್ ಪರ್ಪಂಚ" ನಾಟಕ ಪ್ರದರ್ಶನ. ಜಿ.ಪಿ. ರಾಜರತ್ನಂ ಅವರ ಜೀವನ ಹಾಗು ಸಾಧನೆಯ ಮೇಲೆ ಆಧಾರಿತವಾದ ಈ ನಾಟಕ ರಚಿಸಿದವರು Kriyative ನ ಲಕ್ಷ್ಮಿ ಚಂದ್ರಶೇಖರ್ ಹಾಗೂ ಸುಂದರ್ ಅವರು . ವಿಶೇಷ ಅಂದರೆ ಈ ನಾಟಕಕ್ಕೆ ಮುಂಚೆ ಜೀ.ಪೀ.ಆರ್ ಅವರ ಸೊಸೆ ಶೈಲಾ ಶ್ರೀಧರ ಅವರಿಂದ ಜೀ.ಪೀ.ಆರ್ ಅವರ ಬಗ್ಗೆ ಒಂದೆರಡು ಮಾತು.
ನಾಟಕದ highlight ಅಂದರೆ ಜೀ.ಪೀ.ಆರ್ ಅವರ ವ್ಯಕ್ತಿತ್ವ, ಬದುಕು ಹಾಗು ಸಾಧನೆಗಳ ಬಗ್ಗೆ ಸಮರ್ಪಕ ನಿರೂಪಣೆ. ಜೀ.ಪೀ.ಆರ್ ಅವರ ಕನ್ನಡ ಪ್ರೇಮ, ಪ್ರಕಟಣೆಗಳು, ಅವರ ಎದುರಿಸಿದ ಕಷ್ಟ, ಬಾಲ್ಯದ ನೆನಪುಗಳು, ಅವರ ಪದಗಳ ಸಂಕಲನ ಇವೆಲ್ಲವನ್ನೂ ಅಚ್ಚುಕಟ್ಟಾಗಿ ನಿರೂಪಿಸಿದ ಹೆಗ್ಗಳಿಕೆ Kriyative ತಂಡಕ್ಕೆ ಸಲ್ಲುತ್ತದೆ. ಜೀ.ಪೀ.ಆರ್ ಅವರ ಪದ್ಯಗಳನ್ನು ಆಧರಿಸಿದ ಹಿನ್ನೆಲೆ ಹಾಡುಗಳು ನಾಟಕ್ಕೆ ಪೂರಕವಾಗಿದವು. ಕೇವಲ ನಾಲ್ಕು ಕಲಾವಿದರು (ಲಕ್ಷ್ಮಿ ಚಂದ್ರಶೇಖರ್, ಸುಂದರ್, ಗಜಾನನ ಟೀ. ನಾಯಕ್, ರಾಮಕೃಷ್ಣ ಕನ್ನರ್ಪಾಡಿ) ನಾಟಕದ ಎಷ್ಟೊಂದು ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ್ದು ಶ್ಲಾಘನೀಯ. ಪ್ರೇಕ್ಷಕರನ್ನು ಬೇರೆಯೇ ಒಂದು ಪ್ರಪಂಚಕ್ಕೆ ಕರೆದೊಯ್ದ "ರತ್ನನ್ ಪರ್ಪಂಚ" ಪ್ರದರ್ಶನ ಸಾರ್ಥಕ.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ emcee ಕಾವ್ಯಶ್ರೀ ಮಲ್ಲಣ್ಣ ಅವರು ಪ್ರೇಕ್ಷಕರಿಗೆ ಒಂದು surprise ಕಾದಿದೆ ಎಂದು ಕಾರ್ಯದರ್ಶಿ ರಾಜು ಅವರನ್ನು ವೇದಿಕೆಗೆ ಆಹ್ವಾನಿಸಿದಾಗ ನಮಗೆಲ್ಲ ಕಾತರ. ರಾಜು ಅವರು ಮಂದಾರ ಕೂಟದ ಹೊಚ್ಚ ಹೊಸ ಅಂತರ್ಜಾಲ ತಾಣ ಅನಾವರಣ ಮಾಡಲು ಹಿರಿಯ ಸದಸ್ಯ ರಾಜೇಂದ್ರ ರಾವ್ ಅವರನ್ನು ಬರಮಾಡಿಕೊಂಡಾಗ ಎಲ್ಲರಿಗೂ ಸಂತೋಷ . ಈ ಹೊಸ ಅಂತರ್ಜಾಲ ತಾಣದ ರೂವಾರಿ ವಿನಯ್ ರಾವ್. ನಂತರ ಸ್ಥಳೀಯ ತಂಡಗಳಿಂದ ನೃತ್ಯ ಪ್ರದರ್ಶನ. ವಿವಿಧ ನೃತ್ಯ ಶಾಲೆಯವರಿಂದ "ಬಿಂದಾಸ್" ಚಿತ್ರದ ಹಾಡಿಗೆ salsa ಮತ್ತು tap ನೃತ್ಯ, ಹಾಗು ವಿಸ್ಮಯ ತಂಡ ಹಲವು ಕನ್ನಡ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿದ್ದು ಪ್ರೇಕ್ಷಕರ ಮನರಂಜಿಸಿತು.
ಎರಡನೇ ನಾಟಕ ಟಿ.ಸುನಂದಮ್ಮ ಅವರ "ಹೀಗಾದ್ರೆ ಹೇಗೆ?". ಉತ್ತಮ ಗೀತೆಗಳು, ತಿಳಿ ಹಾಸ್ಯ, ವಿಡಂಬನೆ, ಸರಳವಾಗಿದ್ದೂ ಸಮರ್ಪಕವಾದಂಥ ರಂಗಸಜ್ಜಿಕೆಯಿಂದ ಪ್ರೇಕ್ಷಕರನ್ನು ನಕ್ಕು ನಗಿಸಿದ ಈ ನಾಟಕದಲ್ಲಿ Kriyative ನ ಕಲಾವಿದರು ತಮ್ಮ ಅಭಿನಯ ಪ್ರೌಢಿಮೆ ಮೆರೆದರು. ಒಟ್ಟಿನಲ್ಲಿ ಯುಗಾದಿ ಹಬ್ಬಕ್ಕೆ ಅತ್ತ್ಯುತ್ತಮ ನಾಟಕಗಳಿಂದ ಎಲ್ಲರ ಮನ ಗೆದ್ದ Kriyative ತಂಡಕ್ಕೆ ಪ್ರೇಕ್ಷಕರ ಪ್ರಚಂಡ ಕರತಾಡನ.
ಸಮಾರಂಭವನ್ನು ಉತ್ತಮವಾಗಿ ನಡೆಸಿದಂಥ ಮಂದಾರ ಕಾರ್ಯಕಾರಿಣಿ ಸಮಿತಿಯ ಸದಸ್ಯರಿಗೂ, ಕಲಾವಿದರು ಹಾಗು ಎಲ್ಲ ಪ್ರೇಕ್ಷಕರಿಗೂ ಕಾರ್ಯದರ್ಶಿ ರಾಜು ಧನ್ಯವಾದ ಅರ್ಪಿಸಿದರು. ಇನ್ನು, ಚೆನ್ನಾಗಿ ಹಸಿದಿದ್ದ ಎಲ್ಲರಿಗೂ Minerva restaurant ನವರ ಭರ್ಜರಿ ಭೋಜನ ಕಾದಿತ್ತು. ನಂತರ, ಮತ್ತೆ ಬೇಸಿಗೆ ಪಿಕ್ನಿಕ್ ನಲ್ಲಿ ಸಿಗೋಣ ಅಂತ ಮಾತಾಡಿಕೊಂಡು ಮನೆಗೆ ಹೊರಟಾಗ ಎಲ್ಲರ ಮನಸಿನಲ್ಲೂ ಜೀ.ಪೀ.ಆರ್ ಅವರ ಪದ "ನರಕಕ್ಕಿಳ್ಸಿ ನಾಲಗೆ ಸೀಳ್ಸಿ, ಬಾಯ್ ಒಲ್ಸಾಕಿದ್ರೂನೆ, ಮೂಗ್ನಲ್ ಕನ್ನಡ ಪದವಾಡ್ತೀನಿ, ನನ್ನ ಮನ್ಸನೀಕಾಣೆ"
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications