ಮಧುರ ಮಧುರವೀ ಮಂಜುಳಾ ಗುರುರಾಜ್ ಗಾನ

ಈ ಇಂಪುಗಾನದ ಮಂಜುಳ ಸಿಂಚನ ಆದದ್ದು ಆಗಸ್ಟ್ 16, ಭಾನುವಾರ ಸಂಜೆ ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಲಿ ಸಿಂಗಪುರ ಕನ್ನಡ ಸಂಘ ನಿಯೋಜಿಸಿದ್ದ ಮಂಜುಳಾ ಗುರುರಾಜ್ ಅವರ "ಸುಮಧುರ ಸಂಜೆ" ಕಾರ್ಯಕ್ರಮದಲಿ. ರಾಜ್ಯ ಪ್ರಶಸ್ತಿ ವಿಜೇತೆ ಮಂಜುಳಾ ಗುರುರಾಜ್ ಅವರ ಮಧುರ ಮಧುರವೀ ಮಂಜುಳ ಗಾನದಲಿ ಮಿಂದ ಅನುಭವ.
ಜಿ.ಎಸ್ ಕರ್ಕಿ ಅವರ ಕವನ 'ಹಚ್ಚೇವು ಕನ್ನಡದ ದೀಪ'ದ ಮೂಲಕ ಸಂಗೀತ ಸಂಜೆ ಪ್ರಾರಂಭಗೊಂಡಿತು. ಮಂಜುಳಾ ಗುರುರಾಜ್ ಅವರ ಕಂಠದಸಿರಿ ಶ್ರೋತೃಗಳ ಮೋಡಿ ಮಾಡಿತು. ಮುಂದೆ ಸಾಗಿತು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ 'ಋತು ವಸಂತ ಬಂದನಿದೋ', ಗೋಪಾಲಕೃಷ್ಣ ಅಡಿಗರ 'ಇಂದು ಕೆಂದಾವರೆಯ', ಎಚ್.ಎಸ್. ವೆಂಕಟೇಶ ಮೂರ್ತಿ ಅವರ 'ಹವಳ ಕೆಂಪಿನ ಸಂಜೆ, ವಸಂತ ಬರಲು ಮರ ಚಿಗುರುವುದು', ಕುವೆಂಪು ಅವರ 'ತೇನವಿನಾ' ಕವನಗಳ ಭಾವಸಂಗಮ ಬೇಗೆಯಿಂದ ದಣಿದ ಮನಕೆ ತಂಪೆರೆಚಿತ್ತು.
ಕವನಗಳ ಕಲರವ ಮುಗಿದಂತೆ ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಮಂಜುಳಾ ಹಾಡಿದರು. ಸ್ಥಳೀಯ ಪ್ರತಿಭೆಗಳನ್ನು ತಮ್ಮೊಟ್ಟಿಗೆ ಹಾಡಲು ವೇದಿಕೆಯ ಮೇಲೆ ಆಹ್ವಾನಿಸಿದರು. ಸಿಂಗಪುರದ ಕಲಾವಿದರಾದ ವಿನುತಾ ಭತ್ ಜೊತೆಗೂಡಿ ಹೊಸಬೆಳಕು ಚಿತ್ರದ 'ತೆರೆದಿದೆ ಮನೆ ಓ ಬಾ ಅತಿಥಿ', ಶ್ರೀಕಾಂತ್ ಜೊತೆ 'ಜನುಮದ ಜೋಡಿ ನೀನು ನನ್ನ ಕನಕ', ಸುಹಾಸ್ ಅವರೊಂದಿಗೆ 'ಜೊತೆಯಲಿ ಜೊತೆ ಜೊತೆಯಲೀ' ಹಾಡಿದಾಗ ಒನ್ಸ್ ಮೋರ್ ಕೇಳಿ ಬಂದವು. ಮಂಜುಳಾ ಗುರುರಾಜ್ ಅವರು ಸ್ಥಳೀಯ ಪ್ರತಿಭೆಗಳಿಗೆ ನೀಡಿದ ಸದವಕಾಶ, ಪ್ರೋತ್ಸಾಹ ಪ್ರಶಂಸನೀಯ. ಡಾ.ರಾಜ್ ಅವರ ಧ್ವನಿಯೊಂದಿಗೆ ಬೆರೆತ 'ಹೃದಯದಲಿ ಇದೇನಿದು ನದಿಯೊಂದು ಓಡಿದೆ', ಹುಲಿಯ ಹಾಲಿನ ಮೇವು ಚಿತ್ರದ 'ಚಿನ್ನದ ಮಲ್ಲಿಗೆ ಹೂವೇ' ಹಾಡುಗಳು ಮತ್ತೆ ರಾಜ್ಕುಮಾರ್ ಅವರನ್ನು ನಮ್ಮ ಕಣ್ಮುಂದೆ ತಂದವು.
ಎಸ್.ಜಾನಕಿ ಅವರ 'ಗಿಲಿ ಗಿಲಿ ಗಿಲಕ್' ಕಾಲ್ಗಳು ತಾಳ ಹಾಕುವಂತೆ ಮಾಡಿತು. ಆಶಾ ಭೋಸ್ಲೆ ಅವರ 'ಆವೋ ಹುಜೂರ್ ತುಮ್ ಕೊ, ಪಿಯ ತೂ ಅಬ್ ತೊ ಆಜಾ' ಓಲ್ದ್ ಈಸ್ ಗೋಲ್ದ್ ಸಿದ್ದಾಂತಕ್ಕೆ ಮತ್ತೆ ತಲೆ ಬಾಗುವಂತೆ ಮಾಡಿತು. ಮಂಜುಳಾ ಗುರುರಾಜ್ ಪ್ರಸಿದ್ಧಿ ತಂದದ್ದು ನಂಜುಂಡಿ ಕಲ್ಯಾಣ ಚಿತ್ರದ ಗುಂಡಿನ ಹಾಡು 'ಒಳಗೆ ಸೇರಿದರೆ ಗುಂಡು' ಹಾಡಿಗೆ ಧಡಬಡನೆ ಸುರಿಯಿತು ಶಿಳ್ಳುಗಳ ಸುರಿಮಳೆ. ಅಡೆತಡೆಯಿಲ್ಲದೆ 3 ಗಂಟೆಗಳ ಮಂಜುಳ ನಿನಾದದ ಮಳೆ ನಿಂತಾಗ ಮಧುರ ಮಧುರವೀ ಮಂಜುಳ-ಗಾನ ಹೃದಯ ತಣಿಸುವಾ ಹೊಸ ತಾನ ಎಂದು ಸಿರಿಕಂಠ ತನ್ನದೇ ಛಾಪನ್ನು ಅಚ್ಚೊತ್ತಿತ್ತು.
ಕನ್ನಡ ಸಂಘ ಸಿಂಗಪುರ 2009ನೇ ಸಾಲಿನ ನೂತನ ಅಧ್ಯಕ್ಷರಾದ ಡಾ. ವಿಜಯ ಕುಮಾರ್ ಅವರಿಂದ ಸ್ವಾಗತ ಭಾಷಣ ಹಾಗೂ ನೂತನ ಪದಾಧಿಕಾರಿಗಳ ಪರಿಚಯ. ರಾಜೇಶ್ವರಿ ಅವರಿಂದ ನಿರೂಪಣೆ, ಸಂಘದ ಉಪಾಧ್ಯಕ್ಷ ಬಿ.ಕೆ ರಾಮದಾಸ್ ಅವರಿಂದ ವಂದನಾರ್ಪಣೆ ನಡೆಯಿತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications