ದುಬೈಯಲ್ಲಿ ಜೂ. 26ರಂದು ರಂಗ ಸಿರಿ ಉತ್ಸವ

Prakash Rao Payyar, Dubai
ದುಬೈ, ಜೂ. 25 : ಧ್ವನಿ ಪ್ರತಿಷ್ಠಾನದ ರಂಗ ಸಿರಿ ಉತ್ಸವ 26ನೇ ಜೂನ್ 2009, ಶುಕ್ರವಾರ ಸಂಜೆ 4.30 ಗಂಟೆಯಿಂದ ಅಲ್ ನಾಸರ್ ಲೀಜರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನೆರವೇರಲಿರುವುದು.

ಉತ್ಸವದ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಲೇಖಕ ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಖ್ಯ ಭೂಮಿಕೆಯಲ್ಲಿ ಗೋಪಿಕ ಮಯ್ಯ ಹಾಗೂ ಸರ್ವೊತ್ತಮ್ ಶೆಟ್ಟಿ ಅಭಿನಯಿಸಲಿದ್ದಾರೆ.

ನಾಗಿಣಿ ಭರಣ ಅವರ ಕೂಚುಪುಡಿ ನೃತ್ಯ ಮತ್ತು ರಂಗಗೀತೆಗಳ ವಿಶೇಷ ಕಾರ್ಯಕ್ರಮಗಳಿವೆ. ಪ್ರಖ್ಯಾತ ರಂಗ ನಿರ್ದೇಶಕ ಮತ್ತು ಚಲನಚಿತ್ರ ನಿರ್ದೇಶಕ ಟಿ.ಯಸ್.ನಾಗಾಭರಣ ಹಾಗೂ ಡಾ. ಬಿ.ವಿ ರಾಜಾರಾಂ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಮಾರಂಭಕ್ಕೆ ಯು.ಎ.ಇ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ರಂಗ ಸಿರಿ ಉತ್ಸವದ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+