ಥೈ ಪೂಸಮ್ : ಕನ್ನಡತಿ ಕಂಡಂತೆ ತಮಿಳರ ಹಬ್ಬ
ದೇವಸ್ಥಾನದಲ್ಲಿ ಸ್ವಲ್ಪ ಬಿಡುವಾಗಿ ಕೂತಿದ್ದ ಒಬ್ಬ ಅರ್ಚಕರನ್ನು ಕಂಡು, ಇದರ ಬಗ್ಗೆ ಸ್ವಲ್ಪ ತಿಳಿಸುವಿರಾ ಎಂದು ಕೇಳಿದೆ. ಅವರು ಹೇಳಿದ್ದು- ಇದು ಹೆಚ್ಚು ತಮಿಳುನಾಡಿನಲ್ಲಿ ಆಚರಿಸಲ್ಪಡುತ್ತದೆ. ಕಾರ್ತಿಕೇಯನನ್ನು ಕ್ಷಮಾಪಣೆ ಕೇಳಿ, ಪ್ರಾಯಶ್ಚಿತ ಮಾಡಿಕೊಂಡು, ನಮ್ಮ ಕೃತಜ್ಞತೆಯನ್ನು ತೋರುವ ದಿನ. ಈ ಹಬ್ಬ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಸೌರಮಾನ ಮಾಸದ ಪುಷ್ಯಾ ನಕ್ಷತ್ರ ಅಥವಾ ಪೂರ್ಣಿಮೆ ದಿನಗಳಲ್ಲಿ ಬರುತ್ತದೆ. ಹರಕೆಯಲ್ಲಿ ಹಲವು ಬಗೆ. ಕಾವಡಿಗಳನ್ನು ಹೊರುವುದೂ ಒಂದು ಹರಕೆ.
ಈ ಕಾವಡಿಗಳನ್ನು ಹೊರುವವರು ಹಲವು ನಿಯಮಗಳನ್ನು ಪಾಲಿಸುತ್ತಾರೆ. ಬ್ರಹ್ಮಚರ್ಯ, ಸಾತ್ವಿಕ ಆಹಾರ. ಧೂಮಪಾನ ನಿಷೇಧ, ಕುಡಿತಕ್ಕೆ ರಜೆ, ಹಲವರು ಮೌನ ಆಚರಿಸುತ್ತಾರೆ. ಇವರಲ್ಲಿ ಹಲವರು ಕಾವಿ ಬಟ್ಟೆ, ಕೈಯಲ್ಲಿ ಜೋಳಿಗೆ ಹಿಡಿದು, ಅಕ್ಕಿ, ಹಾಲು, ಗಂಧ ಇವುಗಳನ್ನು ಭಿಕ್ಷಾರೂಪದಲ್ಲಿ ಸ್ವೀಕರಿಸುತ್ತಾರೆ. ಈ ವೇಷ ಶಿವನಿಗೆ ಪ್ರೀತಿಯಂತೆ.
ಇಲ್ಲಿನ ಶ್ರೀನಿವಾಸ ದೇಗುಲದಿಂದ ಹೊರಟು ಶ್ರೀದಂಡಾಯುಧಪಾಣಿ ದೇಗುಲದವರೆಗೆ (ಸುಮಾರು ನಾಲ್ಕು ಕಿ.ಮೀ) ವರೆಗೆ ಕಾವಡಿ, ಹಾಲಿನ ಕೊಡಗಳನ್ನು ಹೊತ್ತು ಬರಿಗಾಲಿನಲ್ಲಿ ನಡೆಯುತ್ತಾರೆ.
ಇಷ್ಟಕ್ಕೇ ಬಿಡದೆ ಆತನನ್ನು ಇದರ ಐತಿಹ್ಯವೇನು, ಇದಕ್ಕೊಂದು ದಂತ ಕಥೆ ಇದೆಯೇ ಎಂದು ಕೇಳಿದೆ. ಶಿವ ತನ್ನ ಮನದನ್ನೆಗೆ ಒಂದು ದಿವ್ಯ ಮಂತ್ರ ಉಪದೇಶಿಸುತ್ತಿದ್ದ. ಇದನ್ನು ಕದ್ದುಕೇಳಿದ ಬಾಲಕ ಸುಬ್ರಮಣ್ಯ. ಈ ತಪ್ಪಿಗೆ ಪಾರ್ವತಿ ಮಗನಿಗೆ ಶಿಕ್ಷೆಯನ್ನಿತ್ತಳು. ಮಾಡಿದ ತಪ್ಪಿಗೆ ಷಣ್ಮುಗ ತಿರುಪ್ಪರನ್ಕುನ್ರಮ್ ಎಂಬಲ್ಲಿ ತಪಃಗೈದು ಪ್ರಾಯಶ್ಚಿತ ಮಾಡಿಕೊಂಡನಂತೆ. ಈತನ ತಪಕ್ಕೆ ಮೆಚ್ಚಿ ಶಿವ ಪಾರ್ವತಿಯರು ಥೈ ಮಾಸದ ಪೂಸ (ಮಾಘ ಮಾಸ, ಪುಷ್ಯಾ ನಕ್ಷತ್ರ, ಹುಣ್ಣಿಮೆಯ ಆಸುಪಾಸು) ನಕ್ಷತ್ರದ ದಿನ ನಿನಗೇ ಮೀಸಲು ಎಂದು ವರವನ್ನಿತ್ತರಂತೆ. ಈ ದಿನವೇ ಥೈ ಪೂಸಮ್. ಈ ದಿನ ಸುಬ್ರಮಣ್ಯನನ್ನು ತೊಂದರೆ ನಿವಾರಣೆಗಾಗಿ ಬೇಡಿಕೊಂಡು ಕಾವಡಿಗಳನ್ನು ಎತ್ತಿ ಹರಕೆ ಸಲ್ಲಿಸುತ್ತಾರೆ.
ನೀಂಗ ತಮಿಳ್ ಕಡೆಯಾದ, ಎಂದೂರು ಉಂಗಳದ್ (ನೀವು ತಮಿಳಿನವರಲ್ಲವೇ, ಯಾವ ಊರು ನಿಮ್ಮದು) ಎಂಬ ಅವರ ಪ್ರಶ್ನೆಗೆ ಉತ್ತರಿಸಿ ಇಷ್ಟು ಹೊತ್ತು ಆಸ್ಥೆಯಿಂದ ಮಾಹಿತಿಗಳನ್ನು ತಿಳಿಸಿದ ಅರ್ಚಕರಿಗೆ ಕೈಮುಗಿದು, ಕೃತಜ್ಞತೆಯನ್ನು ತಿಳಿಸಿ ಮನೆಗೆ ನಡೆದೆ. ಹಬ್ಬದ ಸಂಭ್ರಮ ಮನಸ್ಸಿನಲ್ಲಿ ತುಂಬಿಕೊಂಡಿತ್ತು .
-
Dr Rajkumar: ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಬಗ್ಗೆ ಯಾರು ಏನಂದ್ರು, ಇಲ್ಲಿದೆ ವಿವರ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications