ಮಲಪ್ರಭಾ ಗ್ರಾಮೀಣ ಬ್ಯಾಂಕ್ನಿಂದ ಎನ್ಆರ್ಐ ಠೇವಣಿ ಸಂಗ್ರಹ ಯೋಜನೆ
ಧಾರವಾಡ: ಮಲಪ್ರಭಾ ಗ್ರಾಮೀಣ ಬ್ಯಾಂಕ್ ಅನಿವಾಸಿ ಭಾರತೀಯರಿಂದ ಠೇವಣಿ ಸಂಗ್ರಹಿಸುವ ಯೋಜನೆಯನ್ನು ಆರಂಭಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಅನುಮತಿಯಾಂದಿಗೆ ಆರಂಭವಾಗಿರುವ ಈ ಯೋಜನೆಯನ್ನು ಸಿಂಡಿಕೇಟ್ ಬ್ಯಾಂಕ್ನ ಮಹಾ ಪ್ರಬಂಧಕ ದಿನಕರ್ರಾವ್ಅವರು ಭಾನುವಾರ ಉದ್ಘಾಟಿಸಿದರು. ಈ ಯೋಜನೆ ಮೂಲಕ ಮಲಪ್ರಭಾ ಗ್ರಾಮೀಣ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿದಂತಾಗಿದೆ. ಹೊಸ ಯೋಜನೆಯ ಯಶಸ್ಸಿಗಾಗಿ ಸಿಂಡಿಕೇಟ್ ಬ್ಯಾಂಕ್ ಎಲ್ಲ ರೀತಿಯಲ್ಲಿಯೂ ಮಲಪ್ರಭಾ ಗ್ರಾಮೀಣ ಬ್ಯಾಂಕ್ಗೆ ಸಹಕರಿಸಲು ಸಿದ್ಧವಿದೆ ಎಂದು ದಿನಕರ್ರಾವ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲಪ್ರಭಾ ಬ್ಯಾಂಕಿನ ಅಧ್ಯಕ್ಷ ಆರ್.ಎಸ್. ಕಾಮತ್ ಅನಿವಾಸಿ ಭಾರತೀಯರು ಠೇವಣಿಗಳನ್ನು ತೆರೆಯುವ ಮೂಲಕ ಈ ಹೊಸ ಯೋಜನೆಯನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications