Get Updates
Get notified of breaking news, exclusive insights, and must-see stories!

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಯಿಂದ ಕೈಬಿಟ್ಟ ಬಳಿಕ ವರುಣ್‌ ಕೊಟ್ಟ ಪ್ರತಿಕ್ರಿಯೆ

ನವದೆಹಲಿ, ಅಕ್ಟೋಬರ್‌ 08: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ರೈತರ ಸಾವಿನ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ವರುಣ್‌ ಗಾಂಧಿಯನ್ನು ಗುರುವಾರ 80 ಸದಸ್ಯರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ. ಹಾಗೆಯೇ ತಾಯಿ ಮನೇಕಾ ಗಾಂಧಿಯನ್ನು ಕೂಡಾ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ, "ನಾನು 5 ವರ್ಷದಲ್ಲಿ ಒಂದೇ ಒಂದು ಸಲವೂ ಈ ಸಭೆಗೆ ಭಾಗಿಯಾಗಿಲ್ಲ," ಎಂದು ವರುಣ್‌ ಗಾಂಧಿ ಹೇಳಿದ್ದಾರೆ.

ಸುಮಾರು 17 ವರ್ಷಗಳಿಂದ ಬಿಜೆಪಿಯಲ್ಲಿ ಇರುವ 41 ವರ್ಷದ ವರುಣ್‌ ಗಾಂಧಿ ತನ್ನನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಟ್ಟಿರುವ ವಿಚಾರದಲ್ಲಿ ಎಎನ್‌ಐಗೆ ಪ್ರತಿಕ್ರಿಯೆ ನೀಡುತ್ತಾ, "ಕಳೆದ ಐದು ವರ್ಷದಿಂದ ನಾನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಯಾವುದೇ ಒಂದು ಸಭೆಗೂ ಹಾಜರಾಗಿಲ್ಲ, ನಾನು ಅದರಲ್ಲಿ ಇದ್ಧೇನೆ ಎಂದು ನನಗೆ ಅನಿಸುತ್ತಿಲ್ಲ," ಎಂದು ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು, ಹಲವಾರು ಕೇಂದ್ರ ಸಚಿವರುಗಳು, ಬಿಜೆಪಿಯ ಹಿರಿಯ ನಾಯಕರುಗಳಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ, ಹಲವಾರು ಹಿರಿಯ ರಾಜ್ಯ ನಾಯಕರ ಹೆಸರುಗಳಿವೆ. ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಅಜಯ್‌ ಮಿಶ್ರಾರ ಪುತ್ರ ಆಶೀಶ್‌ ಮಿಶ್ರಾ ಮೇಲೆ ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಮೇಲೆ ಹರಿದ ವಾಹನದಲ್ಲಿ ಇದ್ದ ಆರೋಪವಿದೆ. ಬಿಜೆಪಿ ನಾಯಕರಾದರೂ ಕೂಡಾ ವರುಣ್‌ ಗಾಂಧಿ ಈ ವಿಚಾರದಲ್ಲಿ ತೀವ್ರ ಟೀಕೆ ಮಾಡಿದ್ದಾರೆ. ಈ ಉತ್ತರ ಪ್ರದೇಶದ ಲಖಿಂಪುರ ವಿಚಾರದಲ್ಲಿ ರೈತರ ಪರವಾಗಿ ಮಾತನಾಡುತ್ತಿರುವ ಏಕೈಕ ಬಿಜೆಪಿ ನಾಯಕ ವರುಣ್‌ ಗಾಂಧಿ ಆಗಿದ್ದಾರೆ.

 ಪಕ್ಷದ ವಿರುದ್ಧ ಮಾತನಾಡಿದ್ದವರು ಹೆಸರು ಔಟ್‌

ಪಕ್ಷದ ವಿರುದ್ಧ ಮಾತನಾಡಿದ್ದವರು ಹೆಸರು ಔಟ್‌

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ನೂತನ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಆ ಪಟ್ಟಿಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕರಾದ ಮನೇಕಾ ಗಾಂಧಿ ಮತ್ತು ಅವರ ಮಗ ವರುಣ್ ಗಾಂಧಿ ಅವರನ್ನು ಕೈಬಿಡಲಾಗಿದೆ. ಹಾಗೆಯೇ ಇವರಿಬ್ಬರನ್ನು ಮಾತ್ರವಲ್ಲದೇ ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷವನ್ನು ಟೀಕೆ ಮಾಡುತ್ತಿರುವ ಬಿಜೆಪಿ ನಾಯಕ ಸುಬ್ರಮನಿಯನ್‌ ಸ್ವಾಮಿ ಹಾಗೂ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾದ ಹೇಳಿಕೆಯನ್ನು ನೀಡುವ ಮಾಜಿ ಕೇಂದ್ರ ಸಚಿವ ಬಿರೇಂದರ್‌ ಸಿಂಗ್‌ರನ್ನು ಕೂಡಾ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಿಂದ ಹೊರ ಇಡಲಾಗಿದೆ.

 ರೈತರ ಪರವಾಗಿ ವರುಣ್‌ ಗಾಂಧಿ ಟ್ವೀಟ್‌

ರೈತರ ಪರವಾಗಿ ವರುಣ್‌ ಗಾಂಧಿ ಟ್ವೀಟ್‌

ಗುರುವಾರ ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಮೇಲೆ ಕಾರು ಹರಿದು ಹೋದ ಸ್ಪಷ್ಟವಾದ ವಿಡಿಯೋವನ್ನು ಮತ್ತೆ ಟ್ವೀಟ್‌ ಮಾಡಿದ್ದ ವರುಣ್‌ ಗಾಂಧಿ, "ಈ ವಿಡಿಯೋವು ಸ್ಫಟಿಕದಂತೆ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆಯ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಮುಗ್ಧ ರೈತರ ರಕ್ತ ಚಿಮ್ಮಿದ್ದಕ್ಕೆ ಹೊಣೆಗಾರರು ಇರಲೇಬೇಕು. ಎಲ್ಲಾ ರೈತರ ಮನಸ್ಸಲ್ಲಿ ಆಕ್ರೋಶ ಹಾಗೂ ಕ್ರೂರತೆ ತೀವ್ರಗೊಳ್ಳುವ ಮುನ್ನವೇ ನ್ಯಾಯವನ್ನು ದೊರಕಿಸಬೇಕು," ಎಂದು ಹೇಳಿದ್ದರು. ಇದಕ್ಕೂ ಮುನ್ನ ಈ ಪ್ರಕರಣದ ವಿಡಿಯೋವನ್ನು ಟ್ವೀಟ್‌ ಮಾಡಿದ್ದ ವರುಣ್‌ ಗಾಂಧಿ, ""ಉತ್ತರ ಪ್ರದೇಶದ ಲಖಿಂಪುರ ಖೇರಿಯ ವಿಡಿಯೋದಲ್ಲಿ ರೈತರ ಮೇಲೆ ವಾಹನವು ಹರಿದು ಹೋಗುವ ದೃಶ್ಯವು ಈ ವಿಡಿಯೋದಲ್ಲಿ ಕಾಣಿಸುತ್ತದೆ. ಇದು ಯಾರದೇ ಆದರೂ ಹೃದಯವನ್ನು ಕದಕುವಂತಿದೆ. ಪೊಲೀಸರು ಈ ವಿಡಿಯೋವನ್ನು ಪರಿಶೀಲನೆ ನಡೆಸಬೇಕು ಹಾಗೂ ಈ ಕಾರಿನ ಮಾಲೀಕರನ್ನು ಪತ್ತೆ ಹಚ್ಚಬೇಕು. ಈ ಕಾರಿನಲ್ಲಿ ಕುಳಿತಿರುವವರನ್ನು ಕೂಡಾ ಪತ್ತೆ ಹಚ್ಚಬೇಕು. ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಕಂಡು ಹಿಡಿದು ಅವರನ್ನು ಕೂಡಲೇ ಬಂಧನ ಮಾಡಬೇಕು," ಎಂದು ಆಗ್ರಹ ಮಾಡಿದ್ದರು. ಈ ಪ್ರಕರಣದ ಹೊಣೆಗಾಗರು ಯಾರು ಎಂದು ಕೇಳಿರುವ ವರುಣ್‌ ಗಾಂಧಿ, ಈ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರವನ್ನು ಬರೆದಿದ್ದರು. ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಹಾಗೂ ಮೃತ ರೈತರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಆಗ್ರ ಮಾಡಿದ್ದರು.

 ಅಜಯ್‌ ಮಿಶ್ರಾ ಪುತ್ರ ಆಶೀಶ್‌ಗೆ ಯುಪಿ ಪೊಲೀಸ್‌ ಸಮನ್ಸ್‌

ಅಜಯ್‌ ಮಿಶ್ರಾ ಪುತ್ರ ಆಶೀಶ್‌ಗೆ ಯುಪಿ ಪೊಲೀಸ್‌ ಸಮನ್ಸ್‌

ಇನ್ನು ಈ ಲಖಿಂಪುರ ಪ್ರಕರಣದ ತನಿಖೆಗೂ ಹಾಗೂ ಈ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೂ ವರುಣ್‌ ಗಾಂಧಿ ಆಗ್ರಹ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅಜಯ್‌ ಮಿಶ್ರಾ ಪುತ್ರ ಆಶೀಶ್‌ ಮಿಶ್ರಾ ವಿರುದ್ಧ ಎಫ್‌ಐಆರ್‌ ದಾಖಲು ಆಗಿದ್ದು, ಉತ್ತರ ಪ್ರದೇಶ ಪೊಲೀಸರು ಗುರುವಾರ ಆಶೀಶ್‌ ಮಿಶ್ರಾಗೆ ಸಮನ್ಸ್‌ ನೀಡಿದ್ದಾರೆ. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಇಬ್ಬರ ಬಂಧನ ಮಾಡಲಾಗಿದೆ. ಸೋಮವಾರ ಆಶೀಶ್‌ ಮಿಶ್ರಾ ವಿರುದ್ದ ಎಫ್‌ಐಆರ್‌ ದಾಖಲು ಆಗಿದ್ದು, ಆದರೆ ಬಂಧನ ಇನ್ನೂ ಆಗಿಲ್ಲ. ಮೂರು ದಿನದ ಬಳಿಕ ಸಮನ್ಸ್‌ ನೀಡಲಾಗಿದೆ. ಇತರೆ ಇಬ್ಬರನ್ನು ಬಂಧನ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ಹತ್ತು ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಆಶೀಶ್‌ ಮಿಶ್ರಾಗೆ ಸೂಚನೆ ನೀಡಲಾಗಿದೆ. ಇನ್ನು ಇಬ್ಬರು ಬಂಧಿತರನ್ನು ಲವ್‌ಕುಶ್‌ ಹಾಗೂ ಆಶೀಶ್‌ ಪಾಂಡೆ ಎಂದು ಗುರುತಿಸಲಾಗಿದೆ. "ಅವರಿಬ್ಬರು ರೈತರ ಮೇಲೆ ಹರಿದ ಕಾರಿನಲ್ಲಿ ಇದ್ದವರು," ಎಂದು ಪೊಲೀಸರು ಹೇಳಿದ್ದಾರೆ. ಈ ಸಮನ್ಸ್‌ ಹಾಗೂ ಬಂಧನಕ್ಕೂ ಮುನ್ನ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಬಂಧನ ಹಾಗೂ ಈವರೆಗೂ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನೆ ಮಾಡಿತ್ತು.

"ವಿಪಕ್ಷಗಳು ಆಕ್ರೋಶದಲ್ಲಿ ಇರುವಾಗ ವರುಣ್‌ ಸ್ವಲ್ಪ ತಾಳ್ಮೆಯಿಂದ ಇರಬೇಕಾಗಿತ್ತು"

ಮನೇಕಾ ಗಾಂಧಿ ಹಾಗೂ ವರುಣ್‌ ಗಾಂಧಿಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಯಿಂದ ಕೈ ಬಿಟ್ಟ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಕೆಲವು ಬಿಜೆಪಿ ನಾಯಕರು, "ಇದು ಪ್ರತಿ ಬಾರಿ ನಡೆಸಲಾಗುವ ಸಾಮಾನ್ಯ ಪರಿಷ್ಕರಣೆ," ಎಂದು ಹೇಳಿದ್ದಾರೆ. ಇನ್ನೂ ಕೆಲವರು, "ರೈತರ ವಿಚಾರದಲ್ಲಿ ವರುಣ್‌ ನಿಲುವಿನ ಹಿನ್ನೆಲೆ ಬಿಜೆಪಿ ಹಿರಿಯ ನಾಯಕರು ಅವರ ವಿರುದ್ದ ಅಸಮಾಧಾನಗೊಂಡಿದ್ದಾರೆ," ಎಂದಿದ್ದಾರೆ. ಈ ಬಗ್ಗೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರೋರ್ವರು, "ನಾಯಕರದ್ದೇ ತಪ್ಪು ಎಂಬಂತೆ ವರುಣ್‌ ಗಾಂಧಿ ಬಿಂಬಿಸುತ್ತಿದ್ದಾರೆ. ನಾವು ತನಿಖಾ ವರದಿಗಾಗಿ ಕಾಯುತ್ತಿದ್ದೇವೆ. ಆ ಘಟನೆ ಮಾತ್ರ ದುರದೃಷ್ಟಕರ. ಎಲ್ಲಾ ವಿರೋಧ ಪಕ್ಷಗಳು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುವ ಈ ಸಂದರ್ಭದಲ್ಲಿ ವರುಣ್‌ ಗಾಂಧಿ ಸ್ವಲ್ಪ ತಾಳ್ಮೆಯಿಂದ ಇರಬೇಕಾಗಿತ್ತು," ಎಂದು ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+