1953ರ ಬಳಿಕ ಮೊದಲ ಬಾರಿ ಮಹಿಳೆಗೆ ಮರಣದಂಡನೆ
ವಾಷಿಂಗ್ಟನ್, ಜನವರಿ 13: ಅಮೆರಿಕದಲ್ಲಿ 1953ರ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಅಪರಾಧಿಯೊಬ್ಬರಿಗೆ ಮರಣದಂಡನೆ ಶಿಕ್ಷೆ ಜಾರಿಮಾಡಲಾಗಿದೆ. ಕನ್ಸಾಸ್ನ 52 ವರ್ಷದ ಲಿಸಾ ಮೊಂಟ್ಗೊಮೆರಿ ಎಂಬಾಕೆಯನ್ನು ಬುಧವಾರ ಗಲ್ಲಿಗೇರಿಸಲಾಯಿತು. ಟ್ರಂಪ್ ಆಡಳಿತವು ನೀಡಿದ ಸರಣಿ ಮರಣದಂಡನೆ ಅನುಮತಿಗಳಲ್ಲಿ ಇದೂ ಒಂದು.
ಬುಧವಾರ ಮರಣದಂಡನೆ ಪ್ರಕ್ರಿಯೆ ಆರಂಭಿಸಲಾಯಿತು. ಲಿಸಾ ಮೊಂಟ್ಗೊಮೆರಿ ಅವರ ಮುಖದ ಮಾಸ್ಕ್ ಅನ್ನು ತೆಗೆದ ಮಹಿಳಾ ಅಧಿಕಾರಿ, ಆಕೆಗೆ ಕೊನೆಯದಾಗಿ ಏನಾದರೂ ಹೇಳಲು ಬಯಕೆ ಇದೆಯೇ ಎಂದು ಕೇಳಿದರು. ಅದಕ್ಕೆ ಆಕೆ 'ಇಲ್ಲ' ಎಂದು ಗದ್ಗದ ಸ್ವರದಲ್ಲಿ ಪ್ರತಿಕ್ರಿಯಿಸಿ ಸುಮ್ಮನಾದರು.
ಮರಣದಂಡನೆಗೂ ಮುನ್ನ ಕೊಂಚ ಉದ್ವಿಗ್ನರಾದಂತೆ ಲಿಸಾ ಕಂಡುಬಂದರು. ಮರಣದಂಡನೆ ಜಾರಿಗೆ ಕಾದು ನಿಂತಿದ್ದ ಪತ್ರಕರ್ತರತ್ತ ನಿರ್ಲಿಪ್ತ ನೋಟ ಹರಿಸಿದರು. ಬಳಿಕ ಅವರಿಗೆ ಮಾರಕ ಇಂಜೆಕ್ಷನ್ ನೀಡಲಾಯಿತು. ಸ್ಥಳೀಯ ಕಾಲಮಾನ ರಾತ್ರಿ 1.30ರ ವೇಳೆಗೆ ಕಪ್ಪು ಗವುಸು ಧರಿಸಿ, ಸ್ಟೆತಾಸ್ಕೋಪ್ ಹಿಡಿದ ಅಧಿಕಾರಿಯೊಬ್ಬರು ಒಳಗೆ ಪ್ರವೇಶಿಸಿ ಆಕೆಯ ಹೃದಯ ಮತ್ತು ನಾಡಿಮಿಡಿತ ಪರಿಶೀಲಿಸಿದರು. ನಂತರ ಆಕೆ ಮೃತಪಟ್ಟಿರುವುದನ್ನು ಖಚಿತಪಡಿಸಿದರು.

2007ರಲ್ಲಿ ಬಾಬ್ಬಿ ಜೋ ಸ್ಟಿನ್ನೆಟ್ ಎಂಬ ಎಂಟು ತಿಂಗಳ ಗರ್ಭಿಣಿಯನ್ನು ಅಪಹರಿಸಿ ಕತ್ತು ಹಿಸುಕಿ ಕೊಂದ ಅಪರಾಧದಲ್ಲಿ ಮಿಸ್ಸೌರಿಯಲ್ಲಿ ಲಿಸಾಳನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಸ್ಟಿನ್ನೆಟ್ ಅವರ ಗರ್ಭದಲ್ಲಿನ ಭ್ರೂಣವನ್ನು ಕತ್ತರಿಸಿದ್ದ ಲಿಸಾ, ಅವರನ್ನು ಕತ್ತುಹಿಸುಕಿ ಕೊಂದಿದ್ದರು. ಈ ಭಯಾನಕ ಘಟನೆಯಲ್ಲಿ ಮಗು ಬದುಕುಳಿದಿತ್ತು.
ಲಿಸಾ ತನ್ನ ಮಲತಂದೆ ಮತ್ತು ಅವರ ಸ್ನೇಹಿತರಿಂದ ಸತತವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದರು. ಇದರಿಮದ ಮಾನಸಿಕವಾಗಿ ಗಾಸಿಗೊಂಡಿದ್ದರು ಎಂದು ವಕೀಲರು ವಾದಿಸಿದ್ದರು. ಲಿಸಾ, ಜುಲೈ ತಿಂಗಳಿನಿಂದ ಮಾರಕ ಇಂಜೆಕ್ಷನ್ ಮೂಲಕ ಮರಣದಂಡನೆಗೆ ಒಳಗಾದ 11 ಕೈದಿಯಾಗಿದ್ದಾಳೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications