ಐವರು ಮಕ್ಕಳನ್ನು ಕೊಂದ ಆತನಿಗೆ ಯಾವ ಶಿಕ್ಷೆಯೂ ಕೊಡಬೇಡಿ ಎಂದ ತಾಯಿ
ವಾಷಿಂಗ್ಟನ್, ಜೂನ್ 14: ತನ್ನ ಐವರು ಮಕ್ಕಳನ್ನು ಕೊಂದ ವ್ಯಕ್ತಿಗೆ ಅಮೆರಿಕದಲ್ಲಿ ಗುರುವಾರ ಮರಣದಂಡನೆ ವಿಧಿಸಲಾಗಿದೆ. "ಆ ಮಕ್ಕಳು ಆತನನ್ನು ತುಂಬ ಪ್ರೀತಿಸುತ್ತಿದ್ದರು. ಆದ್ದರಿಂದ ಅವನನ್ನು ಬಿಟ್ಟುಬಿಡಿ" ಎಂದು ಆ ವ್ಯಕ್ತಿಯ ಮಾಜಿ ಪತ್ನಿ ಮನವಿ ಮಾಡಿದರೂ ಕೋರ್ಟ್ ನಿಂದ ಈ ತೀರ್ಪು ನೀಡಲಾಗಿದೆ.
ಮೂವತ್ತೇಳು ವರ್ಷದ ತಿಮೋತಿಗೆ ಸ್ಕಿಜೋಫ್ರೇನಿಕ್. ಆದ್ದರಿಂದ ಆತನಿಗೆ ವಿಚಾರಣೆ ಎದುರಿಸಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿದ್ದರು. ಐದು ವರ್ಷಗಳ ಹಿಂದೆ ತನ್ನ ಒಂದರಿಂದ ಎಂಟು ವರ್ಷದ ಐವರು ಮಕ್ಕಳನ್ನು ಕೊಂದ ಆರೋಪವು ಜೋನ್ಸ್ ಮೇಲೆ ಕಳೆದ ವಾರ ನಿಗದಿ ಆಗಿತ್ತು.
ಈ ಮಧ್ಯೆ, ಜೋನ್ಸ್ ನ ಮಾಜಿ ಪತ್ನಿ ಗುರುವಾರ ದಕ್ಷಿಣ ಕರೋಲಿನಾದ ಕೋರ್ಟ್ ನಲ್ಲಿ ಮನವಿಯೊಂದನ್ನು ಮುಂದಿಡುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದರು. ಜೋನ್ಸ್ ನನ್ನು ಬದುಕಲು ಬಿಡಿ ಎಂದು ಆಕೆ ಕೇಳಿಕೊಂಡರು.

"ಅವನು ನನ್ನ ಮಕ್ಕಳಿಗೆ ಯಾವ ರೀತಿಯಿಂದಲೂ ಕರುಣೆ ತೋರಿಸಲಿಲ್ಲ. ಆದರೆ ನನ್ನ ಮಕ್ಕಳು ಅವನನ್ನು ಪ್ರೀತಿಸಿದವು. ನನ್ನ ಮಕ್ಕಳ ಪರವಾಗಿ ನಾನು ಮಾತನಾಡಬೇಕು ಅಂದರೆ, ನನ್ನ ಪರವಾಗಿ ಅಲ್ಲ ಅಂದರೆ ಇದನ್ನು ನಾನು ಹೇಳಬೇಕು" ಎಂದು ಅಂಬರ್ ಕೈಜರ್ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.
ಕಂಪ್ಯೂಟರ್ ಎಂಜಿನಿಯರ್ ಆಗಿದ್ದ ಜೋನ್ಸ್ ತನಗಿಂತ ಹೆಚ್ಚು ದುಡಿಯುತ್ತಿದ್ದ ಎಂಬ ಕಾರಣಕ್ಕೆ ಮಕ್ಕಳನ್ನು ಆತನ ಸುಪರ್ದಿಗೆ ಒಪ್ಪಿಸಲು ನಿರ್ಧರಿಸಿದೆ ಎಂದು ಕೈಜರ್ ಹೇಳಿದ್ದಾರೆ.
ಆರು ವರ್ಷದ ಮಗನು ತನ್ನ ತಾಯಿ ಜತೆ ಸೇರಿ ನನ್ನನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾನೆ ಅನಿಸಿತು. ಆದ್ದರಿಂದ ಅವನ ಪ್ರಾಣ ಹೋಗುವ ತನಕ ಬಲವಂತವಾಗಿ ಅವನಿಂದ ವ್ಯಾಯಾಮ ಮಾಡಿಸಿದೆ. ಆ ನಂತರ ಇತರ ನಾಲ್ವರು ಮಕ್ಕಳನ್ನು ಕೊಂದೆ ಎಂದು ಜೋನ್ಸ್ ಒಪ್ಪಿಕೊಂಡಿದ್ದಾನೆ.
ಇನ್ನು ಆ ಮಕ್ಕಳ ಶವಗಳನ್ನು ಕಾರಿನಲ್ಲಿ ಹಾಕಿಕೊಂಡು ಒಂಬತ್ತು ದಿನಗಳ ಕಾಲ ಜೋನ್ಸ್ ಸುತ್ತಾಡಿದ್ದಾನೆ. ಆ ನಂತರ ಅಲಬಾಮದ ಬೆಟ್ಟದ ಬಳಿಯಲ್ಲಿ ಕಸದ ಚೀಲದಲ್ಲಿ ತುಂಬಿ, ಆ ಮಕ್ಕಳ ಶವಗಳನ್ನು ಬಿಸಾಡಿದ್ದಾನೆ. ಕಾರಿನಲ್ಲಿ ಕೊಳೆತ ಶವದ ವಾಸನೆ ಇದ್ದುದರಿಂದ ಜೋನ್ಸ್ ನನ್ನು ಸಂಚಾರ ಪೊಲೀಸರೊಬ್ಬರು ಬಂಧಿಸಿದ್ದರು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications