ಲಾರಾ ಹೊಡೆತಕ್ಕೆ 50 ಜನರ ಸಾವು, 6 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು
ಅಮೆರಿಕದಲ್ಲಿ 'ಲಾರಾ' ಚಂಡಮಾರುತ ಬಹುದೊಡ್ಡ ವಿಪತ್ತನ್ನೇ ಸೃಷ್ಟಿಸಿಬಿಟ್ಟಿದೆ. 250 ಕಿಲೋ ಮೀಟರ್ ವೇಗದಲ್ಲಿ ಬಂದು ಅಮೆರಿಕದ ಕರಾವಳಿಗೆ ಬಂದು ಅಪ್ಪಳಿಸಿರುವ ರಾಕ್ಷಸ ಗಾತ್ರ ಸುಳಿಗಾಳಿಗೆ ಹತ್ತಾರು ಮಂದಿ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಮಾತ್ರವಲ್ಲದೆ, ಹೈಟಿ ಹಾಗೂ ಕ್ಯೂಬಾ ದ್ವೀಪಗಳಲ್ಲೂ ಚಂಡಮಾರುತ ಭೀಕರ ಅನಾಹುತ ಸೃಷ್ಟಿಸಿದ್ದು 50ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ.
ಶತಮಾನದಲ್ಲೇ ಇಂತಹ ಭೀಕರ ಚಂಡಮಾರುತವನ್ನು ಅಮೆರಿಕದ ದಕ್ಷಿಣ ಭಾಗದ ರಾಜ್ಯಗಳು ಎದುರಿಸಿರಲಿಲ್ಲ ಎನ್ನಲಾಗಿದ್ದು, ಲೂಸಿಯಾನಾ ಹಾಗೂ ಟೆಕ್ಸಾಸ್ ರಾಜ್ಯಗಳ ಅಕ್ಷರಶಃ ನಲುಗಿ ಹೋಗಿವೆ. ಈಗಾಗಲೇ ಜನಾಂಗೀಯ ಸಂಘರ್ಷ ಹಾಗೂ ಕೊರೊನಾ ದಾಳಿಯಿಂದ ನಲುಗಿ ಹೋಗಿರುವ ಅಮೆರಿಕದ ನಿವಾಸಿಗಳು, ಇದೀಗ ಚಂಡಮಾರುತದ ಹೊಡೆತಕ್ಕೆ ಸಿಲುಕಿ ನರಳಾಡುತ್ತಿದ್ದಾರೆ.
ಪರಿಸ್ಥಿತಿ ಹೇಗಿದೆ ಎಂದರೆ ಸೈಕ್ಲೋನ್ ಅಪ್ಪಳಿಸಿರುವ ರಾಜ್ಯಗಳು ನರಕದಂತೆ ಭಾಸವಾಗುತ್ತಿವೆ. ಈಗಾಗಲೇ ಟ್ರಂಪ್ ಆಡಳಿತ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದು ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದೆ. ಚುನಾವಣೆಯ ಹೊತ್ತಲ್ಲೇ 'ಲಾರಾ' ಚಂಡಮಾರುತ ಟ್ರಂಪ್ ಸರ್ಕಾರಕ್ಕೆ ಮತ್ತೊಂದು ಸವಾಲನ್ನು ತಂದೊಡ್ಡಿದೆ.

ಹೊಟ್ಟೆಗೆ ಆಹಾರ ಸಿಗುತ್ತಿಲ್ಲ
'ಲಾರಾ' ಚಂಡಮಾರುತ ಅಪ್ಪಳಿಸಿರುವ ಅಮೆರಿಕದ ರಾಜ್ಯಗಳಲ್ಲಿ ನರಕ ಸದೃಶ ವಾತಾವರಣ ನಿರ್ಮಾಣವಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಮನೆಗಳು ಭೀಕರ ಚಂಡಮಾರುತಕ್ಕೆ ನಾಶವಾಗಿ ಹೋಗಿದ್ದರೆ, ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ವಿದ್ಯುತ್ ಕೂಡ ಕೈಕೊಟ್ಟಿದ್ದು, ಕತ್ತಲೆಯಲ್ಲೇ ಕೋಟಿ ಕೋಟಿ ಜನರು ಜೀವನ ಸಾಗಿಸಬೇಕಾಗಿದೆ. ಬೃಹತ್ ಮರಗಳು ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಯ ಮೇಲೆ ಬಿದ್ದಿರುವ ಪರಿಣಾಮ ವಿದ್ಯುತ್ ಪೂರೈಕೆಯನ್ನೂ ಸಂಪೂರ್ಣ ಬಂದ್ ಮಾಡಲಾಗಿದೆ. ಈವರೆಗೆ 6 ಲಕ್ಷಕ್ಕೂ ಹೆಚ್ಚು ಜನರನ್ನ ಸ್ಥಳಾಂತರ ಮಾಡಲಾಗಿದ್ದು, ಆಹಾರಕ್ಕಾಗಿ ಹಾಹಾಕಾರ ಶುರುವಾಗಿದೆ.

ರೈತರ ಬದುಕು ಮೂರಾಬಟ್ಟೆ
ಮೇಲೆ ವಿವರಿಸಿದ ಅಷ್ಟೂ ಪರಿಸ್ಥಿತಿ ಶ್ರೀಮಂತ ರಾಷ್ಟ್ರ ಅಮೆರಿಕದ್ದಾದರೆ, ಬಡ ರಾಷ್ಟ್ರಗಳಾದ ಕ್ಯೂಬಾ, ಹೈಟಿ ದ್ವೀಪಗಳ ಸ್ಥಿತಿ ಇನ್ನೂ ಭೀಕರವಾಗಿದೆ. ಅತ್ತ ಕೊರೊನಾ ಹೊಡೆತದಿಂದ ಎರಡೂ ದ್ವೀಪಗಳು ಸುಧಾರಿಸಿಕೊಳ್ಳುತ್ತಿರುವಾಗಲೇ 'ಲಾರಾ' ಚಂಡಮಾರುತ ಏಟು ಕೊಟ್ಟಿದೆ. ಇಲ್ಲಿನ ಸರ್ಕಾರದ ಬಳಿ ನಿರಾಶ್ರಿತರಿಗೆ ಸಹಾಯ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಎರಡೂ ರಾಷ್ಟ್ರಗಳು ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಬದುಕು ಮೂರಾಬಟ್ಟೆಯಾಗಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications