ಡಿಸೆಂಬರ್ವರೆಗೆ ಹೆಚ್-1B ವೀಸಾ ನಿಷೇಧ: ನಿರಾಸೆಗೊಂಡ ಗೂಗಲ್ ಸಿಇಒ ಸುಂದರ್ ಪಿಚೈ
ವಾಷಿಂಗ್ಟನ, ಜೂನ್ 23: 2020 ರ ಅಂತ್ಯದವರೆಗೆ ಹೆಚ್-1B ವೀಸಾ ಅಮಾನತುಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ನಿರಾಸೆಗೊಂಡಿದ್ದಾರೆ.
Recommended Video
ಈ ವರ್ಷ ಡಿಸೆಂಬರ್ವರೆಗೆ ಎಚ್ -1 ಬಿ, ಹೆಚ್ -2 ಬಿ, ಎಲ್ ಮತ್ತು ಜೆ ವಿಭಾಗಗಳಲ್ಲಿ ಕೆಲಸದ ವೀಸಾಗಳನ್ನು ಅಮಾನತುಗೊಳಿಸುವುದಾಗಿಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನಲ್ಲೇ ಗೂಗಲ್ ಸಿಇಒ ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ.
ಎಚ್ -1 ಬಿ ವೀಸಾ ಅಮೆರಿಕಾದಲ್ಲಿ ಭಾರತೀಯ ಟೆಕ್ಕಿಗಳು ಹೆಚ್ಚು ಬಳಸುವ ಕೆಲಸದ ವೀಸಾಗಳಲ್ಲಿ ಒಂದಾಗಿದೆ. ಈ ವೀಸಾ ಅಲ್ಲಿನ ಕಂಪನಿಗಳಿಗೆ ವಿದೇಶದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಯುಎಸ್ ಸರ್ಕಾರವು ತನ್ನ ವೀಸಾ ನಿಯಮಗಳನ್ನು ಬಿಗಿಗೊಳಿಸುವ ಹಾದಿಯಲ್ಲಿದೆ.

ಈ ವೀಸಾಗಳಲ್ಲಿಯೇ ಗೂಗಲ್, ಮೈಕ್ರೋಸಾಫ್ಟ್, ಇಂಡಿಯನ್ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೊ ಕಂಪೆನಿಗಳು ಭಾರತದಿಂದ ಯುಎಸ್ಗೆ ಎಂಜಿನಿಯರ್ಗಳನ್ನು ಕರೆತರುತ್ತವೆ. ಎಚ್ 1 ಬಿ ವೀಸಾ ಹೊಂದಿರುವ ಅಮೆರಿಕಾದಲ್ಲಿ ವಾಸಿಸುವ 75 ಪರ್ಸೆಂಟ್ ಜನರು ಭಾರತೀಯ ಪ್ರಜೆಗಳು ಅನ್ನೋದು ಗಮನಾರ್ಹ. ವಲಸೆಯನ್ನು ನಿಗ್ರಹಿಸಲು ಮತ್ತು ದೇಶದಲ್ಲಿ ಸ್ಥಳೀಯ ಉದ್ಯೋಗಕ್ಕೆ ಸಹಾಯ ಮಾಡುವ ಪ್ರಯತ್ನಗಳ ಭಾಗವಾಗಿ ಎಚ್ -1 ಬಿ, ಎಲ್ -1 ಮತ್ತು ಇತರ ತಾತ್ಕಾಲಿಕ ಕೆಲಸದ ಪರವಾನಗಿಗಳನ್ನು ವಿಧಿಸಲಾಗುತ್ತಿದೆ. ಆದರೆ ಟ್ರಂಪ್ ಸರ್ಕಾರವು ಇದನ್ನು ಅಮಾನತುಗೊಳಿಸಿ ಸುಗ್ರೀವಾಜ್ಞೆಗೆ ಸಹಿ ಹಾಕಿದರು.
ಟ್ರಂಪ್ ಈ ಆದೇಶಕ್ಕೆ ಸಹಿ ಹಾಕುವ ಮೂಲಕ, ಈ ವರ್ಷದ ಅಂತ್ಯದ ವೇಳೆಗೆ ಸುಮಾರು 3.25 ಲಕ್ಷ ವಲಸಿಗರು ಮತ್ತು ಅವರ ಕುಟುಂಬಗಳಿಗೆ ನಿಷೇಧ ಅನ್ವಯವಾಗುತ್ತದೆ. ಆದರೆ ಇದು 5.25 ಲಕ್ಷದಷ್ಟಾಗುತ್ತದೆ ಎಂದು ಟ್ರಂಪ್ ಆಡಳಿತದ ಉನ್ನತ ಮೂಲಗಳು ತಿಳಿಸಿವೆ. ಕೋವಿಡ್- 19 ರ ಹರಡುವಿಕೆಯಿಂದ ಸ್ಥಳೀಯ ಜನರು ಗಮನಾರ್ಹ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ.
ಆದ್ದರಿಂದ, H-1B, H-2B, J ಮತ್ತು L ವಲಸೆರಹಿತ ವೀಸಾಗಳನ್ನು ಬಳಸುವ ಕಾರ್ಮಿಕರ ಸಂಖ್ಯೆಯು ಪ್ರಸ್ತುತ ಅಮೆರಿಕಾದ ಸ್ಥಳೀಯ ಜನರ ಉದ್ಯೋಗಕ್ಕೆ ಅಪಾಯವನ್ನುಂಟುಮಾಡುತ್ತದೆ. ಅಮೆರಿಕಾದ ಉದ್ಯೋಗಕ್ಕೆ ಧಕ್ಕೆ ತರುವ ವಲಸೆ ಕಾರ್ಮಿಕರ ಮೇಲಿನ ನಿಷೇಧವನ್ನು 2020 ರ ಅಂತ್ಯದವರೆಗೆ ಈ ಸುಗ್ರೀವಾಜ್ಞೆ ವಿಸ್ತರಿಸಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications