ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಶಿಲಾಶಾಸನ ಉಡುಪಿಯಲ್ಲಿ ಪತ್ತೆ

|
Google Oneindia Kannada News

ಉಡುಪಿ, ಜೂನ್ 13: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಂದನವನ ಗ್ರಾಮದಲ್ಲಿ15ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಶಿಲಾ ಶಾಸನವೊಂದು ಪತ್ತೆಯಾಗಿದೆ.

ನಿವೃತ್ತ ಶಿಕ್ಷಕ ಕೆ. ಶ್ರೀಧರ್ ಭಟ್ ಮತ್ತು ಉಡುಪಿಯ ಪ್ರಾಚ್ಯವಸ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಎಸ್. ಎ. ಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ನಿರ್ದೇಶಕ ಶ್ರುತೇಶ್ ಆಚಾರ್ಯ ಶಾಸನದ ಅಧ್ಯಯನ ನಡೆಸಿದ್ದಾರೆ.

 8 ಶತಮಾನದ ಹಿಂದಿನ ದೇಗುಲದ ಇತಿಹಾಸ ಬಗೆದ ಕನ್ನಡತಿ 8 ಶತಮಾನದ ಹಿಂದಿನ ದೇಗುಲದ ಇತಿಹಾಸ ಬಗೆದ ಕನ್ನಡತಿ

ಸಂಜೀವ ಪ್ರಭುವಿ ಎನ್ನುವವರಿಗೆ ಸೇರಿದ ಜಮೀನಿನಲ್ಲಿ ಈ ಶಾಸನ ಪತ್ತೆಯಾಗಿದ್ದು, ಕಾನ ಶಿಲೆಯಲ್ಲಿ ಕೆತ್ತಲಾಗಿದೆ. 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಿರುವ ಶಾಸನವು ಕನ್ನಡದಲ್ಲಿ 38 ಸಾಲುಗಳನ್ನು ಹೊಂದಿದೆ.

Vijayanagar Empire Stone Inscription Found In Udupi

ಮೇಲಿನ ತುದಿಯಲ್ಲಿರುವ ವಾಮನ ವಿಗ್ರಹದ ಎರಡೂ ಬದಿಯಲ್ಲಿ ಶಂಖ, ಚಕ್ರ, ಸೂರ್ಯ ಮತ್ತು ಚಂದ್ರರನ್ನು ಕೆತ್ತಲಾಗಿದೆ. ಇದು 'ಸ್ವಸ್ತಿ ಶ್ರೀ ಗಣಾಧಿಪತಯೇ ನಮಃ' ಎಂಬ ಶೀರ್ಷಿಕೆಯನ್ನು ಹೊಂದಿದೆ ಮತ್ತು ದಿನಾಂಕವನ್ನು 1442 ವರ್ತಮಾನ ಪ್ರಮಾಧಿ ಸಂವತ್ಸರದ ಶ್ರವಣ ಶುದ್ಧ 15 ಬುಧವಾರ ಎಂದು ಉಲ್ಲೇಖಿಸಲಾಗಿದೆ, ಅಂದರೆ ಕ್ರಿಸ್ತಶಕ 1519 ಆಗಸ್ಟ್ 21 ಎಂದು ಅರ್ಥ ಬರುತ್ತದೆ.

ಇದು ವಿಜಯನಗರ ಸಾಮ್ರಾಜ್ಯದ ತುಳುವ ರಾಜ ಕೃಷ್ಣದೇವರಾಯನ ಕಾಲಕ್ಕೆ ಸೇರಿದ್ದು ಎಂದು ಕಲ್ಲಿನ ಶಾಸನದ ದಿನಾಂಕದ ರೇಖೆಯು ಸ್ಪಷ್ಟವಾಗಿ ಹೇಳುತ್ತದೆ. ಈ ಅವಧಿಯಲ್ಲಿ ಬಾರಕೂರ ರಾಜ್ಯವನ್ನು ರತ್ನಪ್ಪ ಒಡೆಯರ ಮಗ ವಿಜಯಪ್ಪ ಒಡೆಯರು ಆಳುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.

ಮೈಸೂರು, ಪಟ್ಟದಲ್ಲು, ಜೋಗ, ಹಂಪಿಯಲ್ಲಿ ಯೋಗ ದಿನಾಚರಣೆಮೈಸೂರು, ಪಟ್ಟದಲ್ಲು, ಜೋಗ, ಹಂಪಿಯಲ್ಲಿ ಯೋಗ ದಿನಾಚರಣೆ

ಈ ಶಾಸನವು ದೊರೆ ವಿಜಯಪ್ಪ ಒಡೆಯರ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆಯಾಗಿದೆ. ಈ ಶಾಸನವು ಅಂಗೀರಸ ಗೋತ್ರದ ಈಶಾನ ಉಪಾಧ್ಯಾಯರ ಪುತ್ರ ಕೇಶವ ಉಪಾಧ್ಯಾಯರಿಂದ ದೇಣಿಗೆ ಪಡೆದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲೂ ಪತ್ತೆಯಾಗಿತ್ತು; ಕಳೆದ ಮಾರ್ಚ್ ತಿಂಗಳಲ್ಲಿ ಕೂಡ ಕರಾವಳಿ ಭಾಗದಲ್ಲಿ ವಿಜಯನಗರ ಕಾಲದ ಶಿಲಾಶಾಸನ ಪತ್ತೆಯಾಗಿತ್ತು. ಕುಂದಾಪುರದ ಸಮೀಪದ ಯಡಾಡಿ - ಮತ್ಯಾಡಿ ಗ್ರಾಮದ ಹೈಗುಳಿ ಯಕ್ಷಿ ದೇವಸ್ಥಾನವಿರುವ ಗದ್ದೆಯಲ್ಲಿ ವಿಜಯನಗರ ಕಾಲದ ಒಂದನೇ ಬುಕ್ಕರಾಯನಿಗೆ ಸಂಬಂಧಪಟ್ಟ ಶಿಲಾ ಶಾಸನ ಪತ್ತೆಯಾಗಿತ್ತು.

Vijayanagar Empire Stone Inscription Found In Udupi

ಈ ಶಾಸನವನ್ನು ಉಡುಪಿ ಪ್ರಾಚ್ಯಸಂಚಯ ಅಧ್ಯಯನ ಕೇಂದ್ರದ ನಿರ್ದೇಶಕ ಎಸ್‌. ಎ. ಕೃಷ್ಣಯ್ಯ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿ ಶೃತೇಶ್ ಆಚಾರ್ಯ, ಹೇಮಾ ಶೆಟ್ಟಿ ಪತ್ತೆ ಹಚ್ಚಿದ್ದರು.

ಗ್ರಾನೈಟ್ ಶಿಲೆಯಲ್ಲಿ ಈ ಶಾಸನವನ್ನು ಕೆತ್ತಾಲಗಿದ್ದು, 5 ಅಡಿ ಎತ್ತರ 2 ಅಡಿ ಅಗಲ ಇದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವನ್ನು ಪೂಜಿಸುತ್ತಿರುವ ವ್ಯಕ್ತಿ ಮತ್ತು ಇಕ್ಕೆಲಗಳಲ್ಲಿ ದೀಪ, ನಂದಿ, ರಾಜಕತ್ತಿ ಹಾಗೂ ಸೂರ್ಯ-ಚಂದ್ರರ ಕೆತ್ತನೆಯಿದೆ.

ಈ ಶಾಸನವು ಕ್ರಿಸ್ತಶಕ 1356ರ ಕಾಲಮಾನಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ಶಾಸನದ ಹಲವು ಅಕ್ಷರಗಳು ಕಾಣದಂತೆ ಅಳಿಸಿಹೋಗಿದೆ. ಶಾಸನದಲ್ಲಿ ವಿಜಯನಗರ ದೊರೆ ವೀರ ಬುಕ್ಕಣ್ಣ ಒಡೆಯರ ಉಲ್ಲೇಖವಿದೆ. ಈ ಶಾಸನವು ಬ್ರಾಹ್ಮಣರಿಗೆ ನೀಡಿದ ಭೂದಾನದ ಬಗ್ಗೆ, ದಾನದ ಭೂಮಿಯ ಚತುಸ್ಸೀಮೆಗಳ ಬಗ್ಗೆ ಮಾಹಿತಿ ನೀಡುತ್ತದೆ.

Recommended Video

Nitish Kumar ಮುಂದಿನ President ಆಗ್ತಾರಾ ? | *Politics | OneIndia Kannada

English summary
A stone inscription belonging to 15th century Vijayanagara empire was found in Nandanavana village of Byndoor taluk in Udupi district in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X