3 ತಿಂಗಳಲ್ಲಿ 4 ಬಾವಿ ತೋಡಿದ ಕಾರ್ಕಳದ ಆಧುನಿಕ ಭಗೀರಥ
ಉಡುಪಿ, ಜೂನ್ 9: ಮಳೆಯ ಅಭಾವದಿಂದ ಜಿಲ್ಲೆಯಲ್ಲಿ ಕೆರೆ, ಬಾವಿ, ನದಿಗಳು ಬರಿದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ನೀರಿನ ಹಾಹಾಕಾರ ಎಲ್ಲೆಡೆಯಾದರೆ ಇಲ್ಲೊಬ್ಬರು ಶ್ರಮ ಜೀವಿ ಸಾಹಸವನ್ನೇ ಮೆರೆದಿದ್ದಾರೆ.
ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕರಿಯಾಲು ನಿವಾಸಿ ವಸಂತ ಪೂಜಾರಿ ಏಕಾಂಗಿಯಾಗಿ ಕಳೆದ ಮೂರು ತಿಂಗಳಲ್ಲಿ 4 ಬಾವಿಗಳನ್ನು ಕೊರೆದಿದ್ದಾರೆ.
ವಸಂತ ಪೂಜಾರಿಯವರದು ಬಡ ಕುಟುಂಬ. ಕೃಷಿಗೆ ಅಗತ್ಯ ಭೂಮಿ ಇದ್ದರೂ ನೀರಿನ ಮೂಲಗಳು ಮಾತ್ರ ಇರಲಿಲ್ಲ. ಕರೆಗಳು ಬಂದಾಗ ಕೂಲಿ ಕೆಲಸ ಮಾಡುತ್ತಿದ್ದರೆ, ಉಳಿದ ದಿನಗಳಲ್ಲಿ ಪತ್ನಿ ಲಲಿತಾ ಅವರ ದುಡಿಮೆಯೇ ಜೀವನಕ್ಕೆ ಆಧಾರ. ಮಗ ವಜ್ರೇಶ್ 7ನೇ ತರಗತಿ ಓದುತ್ತಿದ್ದರೆ, ವಂದಿತಾ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಅವರ ತಾಯಿ ಸುಮಿತ್ರಾ ವಯೋ ವೃದ್ಧೆ. ಹೀಗೆ ಬಡತನದಲ್ಲೇ ಮುಳುಗೇಳುತ್ತಿದ್ದಾರೆ ವಸಂತ ಪೂಜಾರಿ.

ಕುಡಿಯಲೂ ನೀರಿಲ್ಲ
ವಸಂತ ಪೂಜಾರಿಯವರಿಗೆ ಹಿರಿಯರಿಂದ ಬಂದ ಭೂಮಿಯಲ್ಲಿ ಸ್ವಲ್ಪ ಅಡಿಕೆ ಮರಗಳಿವೆ. ಆದರೆ ಬೇಸಿಗೆ ಬಂದರೆ ಕುಡಿಯಲು ನೀರಿನ ವ್ಯವಸ್ಥೆಯೇ ಇರಲಿಲ್ಲ. ಅಕ್ಕ ಪಕ್ಕದ ಸಂಬಂಧಿಕರ ಮನೆ ಹಾಗೂ ಬಾವಿ ಇದ್ದರೂ ಬೇಸಿಗೆಯಲ್ಲಿ ಅವರ ಬಾವಿಗಳೂ ಬತ್ತಿ ಅಡಿಕೆ ತೋಟ ಕರಗಲಾಗುತ್ತಿದೆ.
ಕುಡಿಯಲು ನೀರು ಕೊಡುವಂತೆ ಸ್ಥಳೀಯ ಗ್ರಾಮ ಪಂಚಾಯತ್ಗೆ ಮೊರೆ ಹೋದರೂ ಅಲ್ಲಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ.

ಬಾವಿ ತೋಡಲು ಇಳಿದರು
ಬಡ ಕುಟುಂಬದ ವಸಂತ ಪೂಜಾರಿಗೆ ಬೇರೆ ದಾರಿ ಇರಲಿಲ್ಲ. ಹಿಂದೆ ಮುಂದೆ ಯೋಚಿಸದೇ ತನ್ನ ಜಾಗದಲ್ಲಿ ತಾನೇ ಒಂದು ಬಾವಿ ತೋಡಿದರೆ ಹೇಗೆ ಎಂಬ ಯೋಚನೆಯೊಂದಿಗೆ ಯೋಜನೆ ಸಿದ್ಧಪಡಿಸಿಕೊಂಡರು. ವಾಸ್ತವ್ಯ ಮನೆಯ ಎದುರು ಗುರುತು ಹಾಕಿ ಬಾವಿ ತೋಡಲು ಇಳಿದೇ ಬಿಟ್ಟರು. ಒಂದು ಹಾರೆ, ಒಂದು ಪಿಕ್ಕಾಸು, ಸಿದ್ಧಪಡಿಸಿದ ಮರದ ಏಣಿ, ರಾಟೆ, ಹಗ್ಗ ಇವಿಷ್ಟನ್ನೇ ಬಾವಿ ತೋಡುವುದಕ್ಕಾಗಿ ಬಳಸಿಕೊಂಡು ತೋಡಲು ಆರಂಭಿಸಿದರು.

20 ಅಡಿಯಲ್ಲೇ ನೀರು
ಮೊದಲ ದಿನ ಎರಡು ಅಡಿಗಳಷ್ಟು ಆಳ ತೋಡಿದ ಅವರು ಹಂತ ಹಂತವಾಗಿ ಆಳದ ಮಿತಿಯನ್ನು ಕಡಿಮೆಗೊಳಿಸುತ್ತಾ ಸಾಗಿದರು. 20 ಅಡಿ ಆಳ ತಲುಪುತ್ತಿದ್ದಂತೆ ನೀರು ಸಿಕ್ಕಿತ್ತಾದರೂ ವರ್ತುಲದಲ್ಲಿದ್ದ ಸೇಡಿಮಣ್ಣು ಕುಸಿಯಲು ಶುರುವಾಯಿತು.

ಮತ್ತೊಂದು ಬಾವಿ
ಸೇಡಿ ಮಣ್ಣು ಸಿಕ್ಕಿತೆಂದು ಮನೆಯ ಮತ್ತೊಂದು ಪಾರ್ಶ್ವದಲ್ಲಿ ಇನ್ನೊಂದುದು ಬಾವಿ ತೋಡಲು ಆರಂಭಿಸಿದರು. ಅದೇ ಆಳದ ಪ್ರಮಾಣದಲ್ಲಿ ನೀರು ಸಿಕ್ಕಿದೆ.

ತಡೆಗೋಡೆ ಕಟ್ಟಲು ದುಡ್ಡಿಲ್ಲ
ಮತ್ತೆ ಬಾವಿ ತೋಡಿದ್ದಾರೆ. ಹೀಗೆ ಒಟ್ಟು ನಾಲ್ಕು ಬಾವಿಗಳನ್ನು ತೋಡಿದ್ದಾರೆ. ಬಾವಿಯ ತಳಭಾಗದಲ್ಲಿ ಹಾಗೂ ಮೇಲ್ಭಾಗದಲ್ಲಿ ಕೆಂಪು ಕಲ್ಲಿನ ತಡೆಗೋಡೆ ಕಟ್ಟಬೇಕಾಗಿದೆ. ಇದೀಗ ಬಾವಿ ತೋಡಿದರೂ ಆರ್ಥಿಕ ಅಡಚಣೆ ಎದುರಾಗಿದೆ. ಆದುದರಿಂದ ಅದರ ಕಾಮಗಾರಿ ಇನ್ನೂ ಆರಂಭಿಸಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications