ಉಡುಪಿ ಎಸ್ಪಿ ಅಣ್ಣಾ ಮಲೈ ವರ್ಗಾವಣೆ
ಉಡುಪಿ, ಜುಲೈ 26 : ಕರ್ನಾಟಕ ಸರ್ಕಾರ ಮಂಗಳವಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾ ಮಲೈ ಅವರನ್ನು ಚಿಕ್ಕಮಗಳೂರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮಂಗಳವಾರ
ಸಂಜೆ
ಈ
ಕುರಿತು
ಆದೇಶ
ಹೊರಬಿದ್ದಿದೆ.
ಚಿಕ್ಕಮಗಳೂರು
ಡಿವೈಎಸ್ಪಿ
ಕಲ್ಲಪ್ಪ
ಹಂಡಿಭಾಗ್
ಆತ್ಮಹತ್ಯೆ
ಪ್ರಕರಣದಲ್ಲಿ
ಹೆಸರು
ಕೇಳಿಬಂದಿದ್ದ
ಚಿಕ್ಕಮಗಳೂರು
ಎಸ್ಪಿ
ಸಂತೋಷ್
ಬಾಬು
ಅವರನ್ನು
ಗದಗ
ಜಿಲ್ಲಾಧಿಕಾರಿಯಾಗಿ
ವರ್ಗಾವಣೆ
ಮಾಡಲಾಗಿದೆ.[24
ಐಎಎಸ್
ಅಧಿಕಾರಿಗಳ
ವರ್ಗಾವಣೆ,
ಪಟ್ಟಿ
ಇಲ್ಲಿದೆ]
ಸಂತೋಷ್ ಬಾಬು ಅವರಿಂದ ತೆರವಾದ ಸ್ಥಾನಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾ ಮಲೈ ಅವರನ್ನು ನೇಮಿಸಲಾಗಿದೆ. ಗದಗದ ಎಸ್ಪಿ ಕೆ.ಟಿ.ಬಾಲಕೃಷ್ಣ ಅವರನ್ನು ಉಡುಪಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.[ಕಲ್ಲಪ್ಪ ಸಾವಿಗೆ ಕಿರುಕುಳ ಕಾರಣವಲ್ಲ: ಎಸ್ಪಿ ಸಂತೋಷ್]
ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಜುಲೈ 22ರಂದು ಟಿ.ವೆಂಕಟೇಶ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.[ನಾ ಉಡುಪಿ ಬಿಟ್ಟು ಎಲ್ಲಿಗೂ ಹೋಗೊಲ್ಲ: ಎಸ್ ಪಿ ಅಣ್ಣಾಮಲೈ]