ಉಡುಪಿ ಮೇಲ್ಸೇತುವೆಗೆ ಪೇಜಾವರರ ಹೆಸರು ನಾಮಕರಣ

ಉಡುಪಿ, ಜೂನ್ 6: ಬೆಂಗಳೂರಿನ ಯಲಹಂಕ ಮೇಲ್ಸೇತುವೆ ನಾಮಕರಣ ಜಟಾಪಟಿಗೆ ಕಾರಣವಾಗಿದೆ. ಅದರ ನಡುವೆ ಉಡುಪಿಯಲ್ಲಿಯೂ ಮೇಲ್ಸೇತುವೆಗಳಿಗೆ ನಾಮಕರಣ ಮಾಡಲಾಗಿದ್ದು, ಚರ್ಚೆಗೆ ಕಾರಣವಾಗಿದೆ.

Recommended Video

      ನಿಷಿದ್ಧ ಪದ ಬಳಕೆ ಮಾಡಿ ವಿವಾದಕ್ಕೆ ಸಿಲುಕಿದ ಯುವರಾಜ್ ಸಿಂಗ್ | Oneindia Kannada

      ಉಡುಪಿಯ ಕರಾವಳಿ ಬೈಪಾಸ್ ಮೇಲ್ಸೇತುವೆಗೆ ಪೇಜಾವರ ಶ್ರೀಗಳ ಹೆಸರು ನಾಮಕರಣ ಮಾಡಲಾಗಿದೆ. ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಕರಾವಳಿ ಬೈಪಾಸ್ ಬಳಿ ಈ ಮೇಲ್ಸೇತುವೆ ಇದೆ. ಇಂದು ಸಂಜೆ ಹೊತ್ತಿಗೆ ಮೇಲ್ಸೇತುವೆ ಮೇಲೆ ಪೇಜಾವರ ವಿಶ್ವೇಶ್ವ ತೀರ್ಥ ಮೇಲ್ಸೇತುವೆ ಎಂಬ ಬೋರ್ಡು ಪ್ರತ್ಯಕ್ಷವಾಗಿದೆ.

      Udupi Flyover Named As Pejavara Shree Vishwesha Tirtha

      ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ಕೋಟಿ-ಚೆನ್ನಯ ಮೊದಲಾದ ಹೆಸರುಗಳನ್ನು ಸೇತುವೆಗಳಿಗೆ ಇಡಲಾಗಿತ್ತು. ಬೆಂಗಳೂರಿನ ಯಲಹಂಕ ಸೇತುವೆ ವಿವಾದದ ಬಳಿಕ ಅಲ್ಲಲ್ಲಿ ಕಂಡು ಬರುತ್ತಿರುವ ವಿದ್ಯಮಾನ ಇದಾಗಿದೆ.

      ಉಡುಪಿ ಜಿಲ್ಲೆಯ ಜನರಲ್ಲಿ ಇದು ಅಚ್ಚರಿ ಮೂಡಿಸಿದ್ದು, ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+