ಪಂಜಿನ ಮಂದ ಬೆಳಕಲ್ಲಿ ಅನಾವರಣಗೊಂಡ ಕೊರಗ ಮಕ್ಕಳ ಯಕ್ಷಲೋಕ
ಉಡುಪಿ, ಡಿಸೆಂಬರ್ 23: ಹಿಂದೆ ವಿದ್ಯುತ್ ದೀಪಗಳಿಲ್ಲದ ದಿನಗಳಲ್ಲಿ ಪ್ರಕೃತಿಯ ಮಡಿಲಲ್ಲಿ ದೊಂದಿ ಅಥವಾ ಪಂಜಿನ ಬೆಳಕಿನ ನಡುವೆ ಆಯೋಜಿಸಲಾಗುತ್ತಿದ್ದ ಯಕ್ಷಗಾನ ಪ್ರಸಂಗಗಳು ಪ್ರೇಕ್ಷಕರಿಗೆ ರಸದೌತಣ ಉಣ ಬಡಿಸುತ್ತಿತ್ತು . ಆ ಹಿಂದಿನ ಯಕ್ಷಗಾನದ ಗತ ವೈಭವದ ಪ್ರಯೋಗವನ್ನು ಉಡುಪಿಯಲ್ಲಿ ಇತ್ತೀಚೆಗೆ ಮಾಡಲಾಯಿತು.
ಕೊರಗರ ಮಕ್ಕಳ ಮನೆಯಲ್ಲಿ ದೊಂದಿ ಬೆಳಕಿನ ಯಕ್ಷ ಪ್ರಯೋಗ ಮಾಡಲಾಯಿತು. ಪ್ರಕೃತಿಯ ಮಡಿಲಲ್ಲಿ ಚುಮು ಚುಮು ಚಳಿಯ ನಡುವೆ ದೊಂದಿಯ ಮಂದ ಬೆಳಕಿನಲ್ಲಿ ಬಡಗುತಿಟ್ಟಿನ ಯಕ್ಷ ಪ್ರಯೋಗದೊಂದಿಗೆ ಯಕ್ಷಲೋಕಕ್ಕೆ ಕೊರಗರ ಮಕ್ಕಳು ಕಾಲಿಟ್ಟರು.
ಯಕ್ಷಗಾನ ವನ್ನು ಕರಾವಳಿಯ ಹೆಮ್ಮೆಯ ಗಂಡು ಕಲೆ ಎಂದೇ ಗುರುತಿಸಲಾಗುತ್ತದೆ. ಯಕ್ಷಗಾನಕ್ಕೆ ಮೂಲ ಪ್ರೇಕ್ಷಕರು ಅಂದರೆ ಕೊರಗ ಜನಾಂಗ. ಯಕ್ಷಗಾನದ ಮೂಲ ಪ್ರೇಕ್ಷಕರಿಗೆ ಮೂಲ ಸ್ವರೂಪವನ್ನು ಉಣಬಡಿಸಿ ಕೊರಗ ಜನಾಂಗಕ್ಕೆ ಯಕ್ಷ ಕಲೆಯಲ್ಲಿ ತೊಡಗಿಸಿಕೊಳ್ಳುವ ಹೊಸ ಪ್ರಯತ್ನ ಕೊರಗರ ಛಾವಡಿ ಮಕ್ಕಳ ಮನೆಯಲ್ಲಿ ನಡೆಯಿತು. ಮಂದ ಬೆಳಕಿನಲ್ಲಿ ಪ್ರಕ್ರತಿಯ ಮಡಿಲಲ್ಲಿ ನಡೆದ ಈ ಸಾಂಪ್ರದಾಯಿಕ ಪ್ರಯೋಗ ಗತಕಾಲದ ದಿನಗಳ ವೈಭವದ ಪರಿಚಯ ಮಾಡಿಕೊಟ್ಟಿತು.

ದಾರಿಯುದ್ದಕ್ಕೂ ಸಾಲು ಪ್ರಕೃತಿಯ ನಡುವೆ ದೊಂದಿ ಬೆಳಕಿನ ಮಂದ ಬೆಳಕು. ರಾತ್ರಿ ಕತ್ತಲಿಗೆ ಕೊರಗ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬುಟ್ಟಿ , ಡೋಲು ಪ್ರದರ್ಶನ. ರಾತ್ರಿ ಕತ್ತಲಿಗೆ ರಂಗೇರಿಸುವ ಬಡಗುತಿಟ್ಟಿನ ಯಕ್ಷ ನರ್ತನ. ಹೀಗೊಂದು ಯಕ್ಷ ಪ್ರಯೋಗ ನಡೆದಿದ್ದು ಕುಂದಾಪುರದ ಕುಂಭಾಶಿ ಕೊರಗರ ಮಕ್ಕಳ ಮನೆಯಲ್ಲಿ.
ಬಾರ್ಕೂರು ಹುಭಾಶಿಕ ಕೊರಗರ ವೇದಿಕೆ ವತಿಯಿಂದ ಬಡಗುತಿಟ್ಟಿನ ಅತಿಥಿ ಕಲಾವಿದರು ಧ್ರುವ ಚರಿತ್ರೆ ಪ್ರಸಂಗದ ಮೂಲಕ ಪ್ರಕೃತಿಯ ಮಡಿಲಲ್ಲಿ ವಿಶಿಷ್ಟ ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶಿಸಿದರು. ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಹಾಡಿಗಳಲ್ಲಿ ನಡೆಯುತ್ತಿದ್ದ ಈ ಯಕ್ಷ ಪ್ರಯೋಗ ಮೂಲ ನಿವಾಸಿಗಳ ಜೊತೆ ನೆರೆದ ಯಕ್ಷಪ್ರಿಯರಿಗೂ ಮುದ ನೀಡಿತು.

ಯಕ್ಷಗಾನದಷ್ಟು ಪ್ರಯೋಗಗಳಿಗೆ ಒಡ್ಡಿಕೊಂಡ ಇನ್ನೊಂದು ಜನಪದ ಕಲೆ ದೇಶದಲ್ಲೇ ಇಲ್ಲ. ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣದಿಂದ ಯಕ್ಷಗಾನ ಜಗತ್ ಪ್ರಸಿದ್ಧ ಕಲೆಯಾಗಿರುವುದಕ್ಕೆ ಇಂತಹ ಪ್ರಯೋಗಗಳೇ ಕಾರಣವಿರಬಹುದು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications