ಕಾರ್ಕಳದಲ್ಲಿ ಫೆ.12ರಂದು ಉತ್ತರಕಾಂಡ ಕಾದಂಬರಿ ಸಮೀಕ್ಷೆ
ಕಾರ್ಕಳ, ಫೆಬ್ರವರಿ 9: ಎಸ್.ಎಲ್ ಭೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಒಂದು ಅವಲೋಕನ - ಸಮೀಕ್ಷೆ ಕಾರ್ಕಳದಲ್ಲಿ ಫೆ. 12ರಂದು ಜರುಗಲಿದೆ.
ಉಡುಪಿ ಜಿಲ್ಲೆಯ ಕಾರ್ಕಳದ, ಕಾರ್ಕಳ ಸಾಹಿತ್ಯ ಸಂಘವು ಹೋಟೆಲ್ ಪ್ರಕಾಶ್ ನ ಸಂಭ್ರಮ ಸಭಾಂಗಣದಲ್ಲಿ ಫೆ.12 ರಂದು ಭಾನುವಾರ ಸಂಜೆ 5 ಗಂಟೆಗೆ ಎಸ್ ಎಲ್. ಭೈರಪ್ಪ ಅವರ ಉತ್ತರಕಾಂಡ ಕಾದಂಬರಿಯ ಸಹೃದಯ ಸಮೀಕ್ಷೆಯನ್ನು ನಡೆಸಲು ಮುಂದಾಗಿದೆ.

ಇನ್ನು ಕಾರ್ಕಳ ಸಾಹಿತ್ಯ ಸಂಘವು- ವಿಶಂತಿ ವರ್ಷ(2016-17) ರ ಅಂಗವಾಗಿ ಸಮೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎನ್ನಲಾಗಿದೆ.
ಉತ್ತರಕಾಂಡ ಕಾದಂಬರಿಯ ಬಗ್ಗೆ ಒಂದು ಅವಲೋಕನ - ಸಮೀಕ್ಷೆ ಕಾರ್ಕಳದಲ್ಲಿ ಇದೇ ಭಾನುವಾರ ನಡೆಯಲಿದೆ. ಆಸಕ್ತರು ಗಮನಿಸಬಹುದು!#SLBhyrappa pic.twitter.com/OJU9IcB5PR
— SL Bhyrappa Quotes (@SLBhyrappa) February 8, 2017












Click it and Unblock the Notifications