ಸೆಪ್ಟಂಬರ್ 4 ರಂದು ನಡೆಯಲಿದೆ ಶೀರೂರು ಶ್ರೀಗಳ ಆರಾಧನೆ
ಉಡುಪಿ, ಆಗಸ್ಟ್.30: ಶೀರೂರು ಶ್ರೀಗಳು ಸಾವನ್ನಪ್ಪಿ 40 ದಿನಗಳು ಕಳೆದಿವೆ. ತನಿಖಾ ದೃಷ್ಟಿಯಿಂದ ಪೊಲೀಸ್ ಸುಪರ್ದಿಯಲ್ಲಿದ್ದ ಶೀರೂರು ಮಠ ಈಗ ವಿಮುಕ್ತಗೊಂಡಿದೆ. ತನಿಖಾ ವೇಳೆಯಲ್ಲಿ ಸಾಕ್ಷ್ಯಾಧಾರಗಳು ನಾಶವಾಗಬಹುದೆಂಬ ಹಿನ್ನಲೆಯಲ್ಲಿ ಪೊಲೀಸರು ಶ್ರೀಗಳ ಆರಾಧನೆಗೆ ಅವಕಾಶ ನೀಡಿರಲಿಲ್ಲ.
"ತನಿಖೆ ಮುಗಿದು ಶೀರೂರು ಮಠ ಪೂರ್ಣವಾಗಿ ನಮ್ಮ ಕೈ ಸೇರಿದ ಮೇಲೆ ಶ್ರೀಗಳ ಆರಾಧನೆ ಕ್ರಿಯೆಯನ್ನು ನಡೆಸಲಿದ್ದೇವೆ" ಎಂದು ದ್ವಂದ್ವ ಮಠದ ಯತಿಗಳಾದ ಸೋದೆ ಶ್ರೀಗಳು ತಿಳಿಸಿದ್ದರು. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಹಿನ್ನಲೆಯಲ್ಲಿ ಪೊಲೀಸರು ಶೀರೂರು ಮೂಲಮಠವನ್ನು ಸೋದೆ ಮಠಕ್ಕೆ ಹಸ್ತಾಂತರಿಸಿದ್ದಾರೆ.
ಹಾಗಾಗಿ ಶೀರೂರು ಶ್ರೀಗಳ ಆರಾಧನೆಗೆ ದಿನ ನಿಗದಿಯಾಗಿದೆ. ಸೆಪ್ಟಂಬರ್ 5ಕ್ಕೆ ಶ್ರೀಗಳ ಆರಾಧನೆ ನಡೆಯಲಿದೆ. ಶೀರೂರು ಮೂಲಮಠದಲ್ಲಿ ಸೋದೆ ಶ್ರೀಗಳ ನೇತೃತ್ವದಲ್ಲಿ ಆರಾಧನೆ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಜುಲೈ 19 ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶೀರೂರು ಶ್ರೀಗಳು, ಬಳಿಕ ಅದು ಅಸಹಜ ಸಾವು ಎಂಬ ವೈದ್ಯರ ಉಲ್ಲೇಖದಿಂದ ಹಲವು ಆಯಾಮಗಳನ್ನು ಕಂಡಿತ್ತು. ವಿಷಪ್ರಾಶನವೆಂದು ಹೇಳಿದ್ದ ಕೆಎಂಸಿ ಆಸ್ಪತ್ರೆ ವೈದ್ಯರ ಹೇಳಿಕೆ ಹಲವು ಗೊಂದಲವನ್ನು ಉಂಟುಮಾಡಿತ್ತು.
ಇದೀಗ ಶ್ರೀಗಳ ದೇಹದಲ್ಲಿ ವಿಷವಿಲ್ಲವೆಂದು ವಿಧಿವಿಜ್ಞಾನ ತಜ್ಞರು ಖಚಿತ ಪಡಿಸಿದ್ದಾರೆ. ಅದರ ಜೊತೆಗೆ ಶ್ರೀಗಳ ಭಕ್ತರು ಅವರ ಆತ್ಮಕ್ಕೆ ಶಾಂತಿ ಸಿಗಲಿಲ್ಲ. ಅವರ ಆರಾಧನಾ ಕ್ರಿಯೆಯನ್ನು ಮಾಡಬೇಕೆಂದು ಹೇಳಿದ್ದರು. ವಿಳಂಬವಾದ ಹಿನ್ನಲೆ ಭಕ್ತವೃಂದದಲ್ಲಿ ಬೇಸರದ ಛಾಯೆ ಮೂಡಿದ್ದು, ಸೋದೆ ಶ್ರೀಗಳ ನಿರ್ಧಾರದಿಂದ ಎಲ್ಲದಕ್ಕೂ ಅಂತ್ಯ ಸಿಗಲಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications