ಶೀರೂರು ಶ್ರೀಗಳ ಸಾವಿನ ಹಿಂದೆ ಮಹಿಳೆಯ ನೆರಳು?: ತನಿಖೆ ಚುರುಕು
ಉಡುಪಿ, ಜುಲೈ 21: ಶೀರೂರು ಮಠದ ಯತಿಗಳಾದ ಲಕ್ಷ್ಮೀವರ ತೀರ್ಥ ಶ್ರೀಗಳ ಅಸಹಜ ಸಾವಿನ ಪ್ರಕರಣದ ತನಿಖೆ ಇದೀಗ ತೀವ್ರಗೊಂಡಿದ್ದು, ಈ ಸಂಬಂಧ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶ್ರೀಗಳಿಗಾಗಿ ಫಲಾಹಾರ ತರುತ್ತಿದ್ದ ಬ್ರಹ್ಮಾವರದ ಮಹಿಳೆಯೊಬ್ಬರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಮಹಿಳೆಯು ಪ್ರತಿದಿನ ಸ್ವಾಮೀಜಿಗಳಿಗಾಗಿ ಫಲಾಹಾರಗಳನ್ನು ತರುತ್ತಿದ್ದರು ಎಂದು ಮಠದ ಮೂಲಗಳು ಪೊಲೀಸರಿಗೆ ತಿಳಿಸಿವೆ.
ನಿನ್ನೆಯಿಂದಲೂ ಆ ಮಹಿಳೆಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದು, ಏನೆಲ್ಲಾ ಮಾಹಿತಿ ಕಲೆ ಹಾಕಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಚಾರಣೆ ಇನ್ನೂ ಮುಂದುವರೆದಿದೆ.

ಶ್ರೀಗಳ ಜತೆ ನಂಟು ಎಂತಹದ್ದು?
ಮಹಿಳೆಗೆ ಶ್ರೀಗಳ ಜೊತೆಗಿರುವ ನಂಟು ಎಂತಹದ್ದು ಹಾಗೂ ಎಷ್ಟು ಸಮಯದಿಂದ ಮಹಿಳೆ ಮಠಕ್ಕೆ ಬರುತ್ತಿದ್ದಾರೆ. ಅಥವಾ ಬೇರೆನಾದರು ಉದ್ದೇಶ ಇತ್ತಾ? ಇದಲ್ಲೆ ಗುಟ್ಟಾಗಿ ಉಳಿದಿವೆ. ಮೂಲಗಳ ಪ್ರಕಾರ ಪ್ರತಿದಿನ ಮಠಕ್ಕೆ ಕಾರಿನಲ್ಲಿ ಬರುತ್ತಿದ್ದ ಆ ಮಹಿಳೆ ಕಾರನ್ನು ದೂರ ನಿಲ್ಲಿಸಿ ಸ್ವಾಮಿಗಳಿಗೆ ಫಲಾಹಾರ ಕೊಟ್ಟು ಕೆಲ ಕಾಲ ಇದ್ದು ಹೋಗುತ್ತಿದ್ದರು ಎನ್ನಲಾಗಿದೆ.

ಅಡುಗೆ ಭಟ್ಟರನ್ನೂ ವಿಚಾರಣೆ
ಮಹಿಳೆಯನ್ನು ಮಾತ್ರವಲ್ಲದೆ ಮಠದಲ್ಲಿ ಅಡುಗೆ ಮಾಡುವ ಭಟ್ಟರನ್ನು ಹಾಗೂ ಶ್ರೀಗಳ ಒಡನಾಡಿಗಳನ್ನು, ವಿಚಾರಣೆಗೆ ಒಳಪಡಿಸಿದ್ದಾರೆ. ಶ್ರೀಗಳ ಸಹೋದರರನ್ನು ವಿಚಾರಣೆ ಮಾಡಿದ್ದಾರೆ. ಅಲ್ಲದೆ ಮಠದಲ್ಲಿದ್ದ ಶ್ರೀಗಳಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಠದಲ್ಲಿದ್ದರು ಇಬ್ಬರು ಮಹಿಳೆಯರು!
ನಿನ್ನೆ ಪೇಜಾವರ ಹಿರಿಯ ಶ್ರೀಗಳು ಕೂಡ ಮದ್ಯ, ಮಾನಿನಿಯ ಸಹವಾಸದ ಪ್ರಸ್ತಾಪ ಮಾಡಿದ್ದರು. ಶೀರೂರು ಶ್ರೀಗಳು ಸನ್ಯಾಸತ್ವ ಪಾಲುಸುತ್ತಿಲ್ಲ ಹಾಗೂ ಶ್ರೀಗಳ ಮಠದಲ್ಲಿಯೇ ಇಬ್ಬರು ಮಹಿಳೆಯರಿದ್ದರು. ಅವರಿಬ್ಬರ ಜಗಳದಿಂದ ಈ ರೀತಿ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.

ಪೇಜಾವರರ ಅನುಮಾನ ನಿಜ
ಪೊಲೀಸರು ಮಹಿಳೆಯೊಬ್ಬರನ್ನು ವಶಕ್ಕೆ ಪಡೆದಿರುವುದು ಪೇಜಾವರರ ಮಾತಿಗೆ ಪುಷ್ಠಿ ನೀಡುತ್ತಿದ್ದು, ಶ್ರೀಗಳ ಸಾವಿನ ಕುತೂಹಲ ಇನ್ನಷ್ಟು ಹೆಚ್ಚಿಕೊಂಡಿದೆ. ಮಹಿಳೆಯ ದ್ವೇಷದಿಂದಲೇ ಶ್ರೀಗಳು ಸಾವಿಗೆ ಈಡಾದರೇ ಎಂಬ ಅನುಮಾನ ಈಗ ಭಕ್ತರಲ್ಲಿ ಕಾಡುತ್ತಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications