ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಪೇಜಾವರ ಶ್ರೀ ಸಂತಾಪ
Recommended Video

ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಪೇಜಾವರ ಶ್ರೀ ಸಂತಾಪ | Oneindia Kannada
ಉಡುಪಿ, ಆಗಸ್ಟ್ 16: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿಗೆ ಹಿರಿಯ ಯತಿಗಳಾದ ಪೇಜಾವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ತನ್ನ ಕಳೆದ ಪರ್ಯಾಯದಲ್ಲಿ ಅಟಲ್ ಜಿ ಭಾಗಿಯಾಗಿದ್ದರು ಎಂದು ಶ್ರೀಗಳು ವಾಜಪೇಯಿ ಅವರನ್ನು ಸ್ಮರಿಸಿದರು. ಈ ದೇಶ ಕಂಡ ಧೀಮಂತ ನಾಯಕರಲ್ಲಿ ವಾಜಪೇಯಿ ಕೂಡ ಒಬ್ಬರು ಎಂದು ಅವರು ಹೇಳಿದರು.
ದೇಶದ ಒಳಿತಿಗಾಗಿ ರಾತ್ರಿ ಹಗಲೆಂದು ದುಡಿದವರು. ಅವರ ಅಗಲಿಕೆ ದೇಶಕ್ಕೆ ದೊಡ್ಡ ಹೊಡೆತ. ಇಂತಹ ನಾಯಕರನ್ನು ಕಳೆದು ನಾವು ನಮ್ಮ ಶಕ್ತಿಯನ್ನು ಕಳೆದುಕೊಂಡಂತೆ ಎಂದು ಸಂತಾಪ ಸೂಚಿಸಿದರು.

ಕಳೆದ ಪರ್ಯಾಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾಗಿಯಾಗಿದ್ದರು. ಯತಿಗಳೊಂದಿಗೆ ಆತ್ಮೀಯ ಸಂಭಂಧ ವಾಜಪೇಯಿ ಅವರಿಗಿತ್ತು.












Click it and Unblock the Notifications