ಉಡುಪಿ: ಕನ್ನಡ ಶಾಲಾ ಮಕ್ಕಳ ಪಾಲಿಗೆ ಬೆಳಕಾದ ಪಲಿಮಾರು ಪರ್ಯಾಯ ಮಠ
ಉಡುಪಿ, ಜುಲೈ.24: ಕನ್ನಡ ನಾಡಲ್ಲಿ ಕನ್ನಡ ಉಳಿಸಿ ಎಂಬ ಹೋರಾಟ ಎಲ್ಲೆಡೆ ನಡೆಯುತ್ತಿದ್ದು, ಕನ್ನಡ ಉಳಿಸಲು ನಡೆಯುತ್ತಿರುವ ಪ್ರಯತ್ನ ಮಾತ್ರ ಶೂನ್ಯ. ಆದರೆ ಇದೆಲ್ಲದರ ನಡುವೆ ಉಡುಪಿಯ ಪಲಿಮಾರು ಪರ್ಯಾಯ ಮಠ ಕನ್ನಡ ಶಾಲೆಗಳಿಗೂ, ಬಡಮಕ್ಕಳ ಪಾಲಿಗೂ ಬೆಳಕಾಗಿದೆ. ಅನುದಾನಿತ ಶಾಲೆಗಳಿಗೂ ವರವಾಗಿದೆ. ಅದರ ಫುಲ್ ಡೀಟೆಲ್ಸ್ ಇಲ್ಲಿದೆ.
ಒಂದು ಕಡೆಯಿಂದ ಕನ್ನಡ ಉಳಿಸಿ, ಕನ್ನಡ ಶಾಲೆ ಉಳಿಸಿ ಅನ್ನುವ ಕೂಗುಗಳು ಮಾತ್ರ ಮೊಳಗುತ್ತಿವೆ. ಆದರೆ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಮಾತ್ರ ಒಂದೊಂದಾಗಿ ಬಾಗಿಲು ಮುಚ್ಚಿಕೊಳ್ಳುತ್ತಿವೆ. ಇನ್ನು ಅನುದಾನಿತ ಶಾಲೆಗಳ ಕಥೆಯೂ ಇದಕ್ಕೆ ಹೊರತಾಗಿಲ್ಲ.
ಆದರೆ ಅಂತಹ ಶಾಲೆಗಳನ್ನು ಉಳಿಸುವ ಮತ್ತು ಪೋಷಿಸುವ ಯೋಜನೆಗಳಿಗೆ ಉಡುಪಿಯ ಕೃಷ್ಣ ಮಠ ಮುನ್ನುಡಿ ಬರೆದಿದೆ. ಅಷ್ಟಮಠಗಳ ಪೈಕಿ ಒಂದಾದ ಪಲಿಮಾರು ಮಠದ ಶ್ರೀಗಳು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿದ್ದಾರೆ.

ಸೋದೆ ವಿಶ್ವವಲ್ಲಭ ಸ್ವಾಮೀಜಿ ಜಿಲ್ಲೆಯ ಮಕ್ಕಳಿಗಾಗಿ ಸಮವಸ್ತ್ರ ವಿತರಣೆ ಯೋಜನೆಯನ್ನು ಆರಂಭಿಸಿದ್ದು, ಪಲಿಮಾರು ಶ್ರೀ ಆ ಯೋಜನೆಯನ್ನು ಬೃಹತ್ ಮಟ್ಟದಲ್ಲಿ ಅನುಷ್ಠಾನಗೊಳಿಸಿದ್ದಾರೆ. ಆಂಗ್ಲಮಾಧ್ಯಮ ಮೋಹ, ಸರ್ಕಾರದ ನಿರ್ಲಕ್ಷದಿಂದ ಸಾಕಷ್ಟು ಕನ್ನಡ ಶಾಲೆಗಳು ಬೀಗ ಜಡಿದು ಅಂತಿಮ ಮೊಳೆ ಹೊಡೆದಿದೆ.
2017-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 9 ಅನುದಾನಿತ ಶಾಲೆಗಳು ಬಾಗಿಲು ಮುಚ್ಚಿಕೊಂಡ್ರೆ, 13 ಸರ್ಕಾರಿ ಶಾಲೆಗಳು ಬಂದ್ ಅಗಿದೆ. ಇನ್ನಷ್ಟೂ ಶಾಲೆಗಳು ಬಾಗಿಲು ಮುಚ್ಚಿಕೊಳ್ಳುವ ಹಂತದಲ್ಲಿದೆ. ಆದ್ರೆ ಉಡುಪಿ ಕೃಷ್ಣ ಮಠದ ಸ್ವಾಮಿಗಳು ಮಾತ್ರ ಸದ್ದಿಲ್ಲದೇ ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮ ಪಡುತ್ತಿದ್ದಾರೆ.

ಈ ಬಾರಿ ಪಲಿಮಾರು ಶ್ರೀಗಳು ತಮ್ಮ ಪರ್ಯಾಯ ಅವಧಿಯಲ್ಲಿ 100 ಅನುದಾನಿತ ಶಾಲೆಗಳ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ತಾರತಮ್ಯವಿಲ್ಲದೆ ಸಮವಸ್ತ್ರ ವಿತರಣೆ ಮಾಡಿದ್ದಾರೆ. ಸಮವಸ್ತ್ರ ಸಿದ್ದಪಡಿಸುವ ವೆಚ್ಚವನ್ನು ಕೂಡ ಮಠವೇ ವಹಿಸಿಕೊಂಡಿದೆ.
ಕೃಷ್ಣ ಮಠದೊಳಗೆ ಕೃಷ್ಣ ಪೂಜೆ ಮಾಡೊ ಕೈಗಳು, ಪರೋಕ್ಷವಾಗಿ ಶಾರದೆಯ ಆರಾಧನೆಯನ್ನು ನೆರವೇರಿಸುತ್ತಿದ್ದಾರೆ. ಈ ಹಿಂದೆ ಪಲಿಮಾರು ಶ್ರೀಗಳು ತನ್ನ ಪರ್ಯಾಯ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಅನ್ನದಾಸೋಹ ಪರಿಕಲ್ಪನೆ ಹುಟ್ಟುಹಾಕಿ ಕಾರ್ಯಗತ ಮಾಡಿದ್ದರು.
ಮುಂದೆ ರಾಜ್ಯ ಸರ್ಕಾರ ಕೂಡ ಅದೇ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿತು. ಒಟ್ಟಿನಲ್ಲಿ ಅಳಿವಿನ ಅಂಚಿಗೆ ಸರಿಯುತ್ತಿರುವ ಕನ್ನಡ ಶಾಲೆಗಳ ಉಳಿವಿಗಾಗಿ ಮಠದ ಕಡೆಯಿಂದ ಹೀಗೊಂದು ಮೌನ ಕ್ರಾಂತಿ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ.
-
ಲವ್ ಮಾಕ್ಟೇಲ್ 3 ವಿವಾದ: ನನ್ನ ಕಥೆಯ ದ್ವಿತೀಯಾರ್ಧ ನಕಲು: ಸಿನಿಮಾ ಬರಹಗಾರರೇ ಎಚ್ಚರ ಎಂದ ನಿರ್ದೇಶಕ ರಾಘವೇಂದ್ರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications