ಉಡುಪಿಗೆ ಬಂತು ಕೇರಳ ಮಾದರಿಯ ಬೋಟ್ ಹೌಸ್
ಬೊಟ್ ಹೌಸ್ ಪ್ರವೇಶಿಸುತ್ತಿದ್ದಂತೆಯೇ ವೆಲ್ ಕಮ್ ಡ್ರಿಂಕ್ಸ್ , ಸೌತ್ ಇಂಡಿಯನ್ ತಿಂಡಿ ತಿನಸುಗಳು , ಪಲ್ಯ ಅನ್ನದ ಜತೆ ಮೀನು, ಚಿಕನ್ ಸಾಂಬಾರು ಹೀಗೆ ಹಲವಾರು ಭಕ್ಷ್ಯಗಳು ಭೋಜನ ಪ್ರಿಯರಿಗಾಗಿ ಸಿದ್ಧವಾಗಿದೆ.
ಉಡುಪಿ, ಮಾರ್ಚ್ 23 : ಇದೀಗ ಕೇರಳದ ಬೊಟ್ ಹೌಸ್ ಕರ್ನಾಟಕಕ್ಕೂ ಪ್ರವೇಶಿಸಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಬೋಟ್ ಹೌಸ್ ಪರಿಚಯಿಸಲಾಗಿದೆ. ಹೌದು ಉಡುಪಿ ಜಿಲ್ಲೆಯ ಕೆಮ್ಮಣ್ಣು, ಕೊಡಿ ಬೆಂಗ್ರೆಯ ಸ್ವರ್ಣ ನದಿಯಲ್ಲಿ ಬೋಟ್ ಹೌಸ್ ತೇಲಲು ತಯಾರಾಗಿದೆ.
ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು, ಶೀಘ್ರದಲ್ಲೇ ಎಲ್ಲಾ ಪರೀಕ್ಷೆಗಳೂ ಮುಗಿದು ರಜಾ ಪರ್ವ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಓಡಾಟ ಹೆಚ್ಚು. ಕಡಲ ತಡಿಯ ಸೌಂದರ್ಯದ ಜತೆಗೆ, ಇಲ್ಲಿನ ಜಲಮಾರ್ಗಗಳಲ್ಲಿ ಸಂಚರಿಸಿದರೆ ಸಾಕು, ನೀವು ಆ ಕ್ಷಣಗಳನ್ನು ಜೀವಮಾನದಲ್ಲಿ ಮತ್ತೀನೆಂದೂ ಮರೆಯಲಾರಿರಿ. ಬೆಂಗ್ರೆಯ ಸ್ವರ್ಣ ನದಿಯಲ್ಲಿ ಬೋಟ್ ಹೌಸ್ ಹಿನ್ನೀರಿನ ಸವಿ ಸವಿಯಲು ಸನ್ನದ್ಧಗೊಂಡಿದೆ.

ಬೋಟ್ ಹೌಸ್ ನಲ್ಲಿ ಏನೆಲ್ಲಾ ಇದೆ ಗೊತ್ತಾ?
ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಬೆಳಗ್ಗೆ, ಸಂಜೆ ಹಾಗೂ ರಾತ್ರಿ ಯಾನ ಎನ್ನುವ ೩ ವಿಭಾಗ ಮಾಡಲಾಗಿದೆ. ೩೫ ರಿಂದ ೪೦ ಜನರ ಸಾಮರ್ಥ್ಯ ಹೊಂದಿರುವ ಈ ಬೋಟ್ ಹೌಸ್ ನಲ್ಲಿ ಶೌಚಾಲಯ, ಅಡುಗೆಕೋಣೆಯ ವ್ಯವಸ್ಥೆ ಕೂಡಾ ಮಾಡಲಾಗಿದೆ. ಇದಲ್ಲದೆ ಮೀಟಿಂಗ್, ವರ್ಕ್ ಶಾಪ್, ಬರ್ತ್ ಡೇ ಆಯೋಜನೆ ಮಾಡಲು ಸ್ಥಳಾವಕಾಶವನ್ನು ಹೊಂದಿದೆ. ಪಾಂಚಜನ್ಯ ಕ್ರೂಸ್ ನ ಬೋಟ್ ಹೌಸ್ ಪ್ರವಾಸಿಗರಿಗಾಗಿ ಕಾಯುತ್ತಿದೆ.
ಬೊಟ್ ಹೌಸ್ ಪ್ರವೇಶಿಸುತ್ತಿದ್ದಂತೆಯೇ ವೆಲ್ ಕಮ್ ಡ್ರಿಂಕ್ಸ್ , ಸೌತ್ ಇಂಡಿಯನ್ ತಿಂಡಿ ತಿನಸುಗಳು , ಪಲ್ಯ ಅನ್ನದ ಜತೆ ಮೀನು, ಚಿಕನ್ ಸಾಂಬಾರು ಹೀಗೆ ಹಲವಾರು ಭಕ್ಷ್ಯಗಳು ಭೋಜನ ಪ್ರಿಯರಿಗಾಗಿ ಸಿದ್ಧವಾಗಿದೆ. ಇದಲ್ಲದೆ ಬೋಟ್ ನಲ್ಲಿಯೇ ರಾತ್ರಿಯನ್ನು ಕಳೆಯಬೇಕೆನಿಸಿದವರಿಗೆ ಮಂದ ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ. ಪ್ರವಾಸಿಗರ ಸುರಕ್ಷತೆಗೆ ನುರಿತ ಈಜು ತಜ್ಞರಿದ್ದಾರೆ.

ಇದೇ ಬರುವ ಏಪ್ರಿಲ್ ೮ ರಂದು ಬೋಟ್ ಹೌಸ್ ಉದ್ಘಾಟನೆಯಾಗಲಿದ್ದು, ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ. ಕೇರಳದಲ್ಲಿ ಬೋಟ್ ಹೌಸ್ ದರ ದಿನಕ್ಕೆ ೧೦೦೦೦ ಸಾವಿರ ರೂ ಎಂದು ನಿಗದಿ ಮಾಡಲಾಗಿದೆ. ಆದರೆ ಉಡುಪಿಯ ಬೋಟ್ ಹೌಸ್ ಇನ್ನಷ್ಟೇ ಉದ್ಘಾಟನೆಯಾಗಲಿದ್ದು, ದರ ನಿಗದಿಯಾಗಿಲ್ಲ.
ಮನೋರಂಜನೆ ಮಾಡುವುದರ ಜತೆ ಸ್ವರ್ಣ ನದಿಯಲ್ಲಿ ೮ ರಿಂದ ೧೦ ಕಿ ಮೀ ಹೋಗಿ ಬರಲು ಅವಕಾಶವಿದೆ.ಪರಿಸರದ ಸೊಬಗನ್ನು ಬೋಟ್ ಹೌಸ್ ನಲ್ಲಿ ನೀವು ತೇಲುತ್ತಲೇ ನೋಡಬಹುದು. ನೀವೇ ಹೇಳಿ ಇದು ನಿಜವಾಗಿಯೂ ಆಕರ್ಷಣೆಯಲ್ಲವೇ? ನಿಮಗೂ ಇಂತಹ ಬೋಟ್ ಹೌಸ್ ನ ಅನುಭವ ಆಗಬೇಕೆಂದೆನಿಸಿದರೆ ನೀವು ಒಂದು ಬಾರಿ ಭೇಟಿ ನೀಡಿ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications