Live: ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸಂಭ್ರಮದ ಚಾಲನೆ
ಉಡುಪಿ, ಜನವರಿ 18: ಅಷ್ಟಮಠಗಳಲ್ಲೊಂದಾದ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಎರಡನೇ ಪರ್ಯಾಯ ಪೀಠಾರೋಹಣ ಉಡುಪಿಯಲ್ಲಿ ಇಂದು(ಜ.18) ಬೆಳಗ್ಗಿನ ಜಾವ 2 ಗಂಟೆಗೆ ಆರಂಭವಾಗಿದೆ.
ಈಗಾಗಲೇ ಉಡುಪಿಯ ಕಾಪು ಬಳಿಯ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮುಗಿಸಿ, ಪಲಿಮಾರು ಶ್ರೀ ಗಳು ಮೆರವಣಿಗೆಯ ಮೂಲಕ ಕೃಷ್ಣ ಮಠ ಪ್ರವೇಶಿಸಿದ್ದಾರೆ.
ಅಷ್ಟಮಠಗಳಿಗೆ ಸರದಿ ಪ್ರಕಾರ ಹಂಚಿಹೋಗುವ ಪರ್ಯಾಯ 16 ವರ್ಷಗಳಲ್ಲಿ ಒಂದು ಚಕ್ರ ಪೂರೈಸುತ್ತದೆ. ಇದೀಗ 32 ನೇ ಚಕ್ರಕ್ಕೆ ಕಾಲಿಟ್ಟಿರುವ 2018 ರ ಪರ್ಯಾಯ 249 ನೇ ಪರ್ಯಾಯವಾಗಿದೆ. ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಇದು ಎರಡನೆಯ ಪರ್ಯಾಯ.
* ಅಷ್ಟಮಠಾಧೀಶರ ಸಮ್ಮುಖದಲ್ಲಿ ವಿವಿಧ ಪರ್ಯಾಯ ವಿಧಿವಿಧಾನಗಳಿಗೆ ಚಾಲನೆ
* ಬೆಳಿಗ್ಗೆ 6.50ಕ್ಕೆ ಸರ್ವಜ್ಞ ಪೀಠವೇರಿದ ಪಲಿಮಾರು ಶ್ರೀ
* ಪರ್ಯಾಯದಲ್ಲಿ ಅಷ್ಟಮಠದ ಯತಿಗಳೂ ಭಾಗಿ
* ಅಕ್ಷಯ ಪಾತ್ರೆ, ಸಟ್ಟುಗ, ಬೀಗದ ಕೈಗಳನ್ನು ಪಲಿಮಾರು ಶ್ರೀಗಳಿಗೆ ಹಸ್ತಾಂತರಿಸಿದ ಪೇಜಾವರ ಶ್ರೀಗಳು
* ದಾಖಲೆಯ ಐದನೇ ಪರ್ಯಾಯ ಮುಗಿಸಿದ ಪೇಜಾವರ ಶ್ರೀಗಳು
* ಅನಂತೇಶ್ವರ, ಚಂದ್ರ ಮೌಳೇಶ್ವರ ದೇವಾಲಯಗಳಲ್ಲಿ ಪೂಜೆ ಪಲಿಮಾರು ಶ್ರೀಗಳಿಂದ ಪೂಜೆ
* ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳಿಂ ಪಲಿಮಾರು ಶ್ರೀಗಳಿಗೆ ಸ್ವಾಗತ.
* ಜೋಡುಕಟ್ಟೆ ಮೆರವಣಿಗೆಯಲ್ಲಿ ಕೃಷ್ಣ ಮಠಕ್ಕೆ ಆಗಮಿಸಿದ ಪಲಿಮಾರು ಶ್ರೀಗಳು

ಪರ್ಯಾಯ ಉತ್ಸವದಲ್ಲಿ ಇಂದಿನ(ಜ.18) ಕಾರ್ಯಕ್ರಮಗಳ ವಿವರ ಇಂತಿದೆ.
02.00 - ಕಾಪು ದಂಡತೀರ್ಥದಲ್ಲಿ ಪವಿತ್ರ ಸ್ನಾನ
03.00 - ಜೋಡುಕಟ್ಟೆ ವೃತ್ತದಲ್ಲಿರುವ ಮಂಟಪದಲ್ಲಿ ಪಲಿಮಾರು ಮಠದ ಪಟ್ಟದ ದೇವರಿಗೆ ಪೂಜೆ, ಪರ್ಯಾಯ ಮೆರವಣಿಗೆ ಆರಂಭ
In Pics: ಉಡುಪಿಯಲ್ಲಿ ಪಲಿಮಾರು ಶ್ರೀಗಳ ಪರ್ಯಾಯೋತ್ಸವದ ಸಂಭ್ರಮ
05.15 - ಅಖಂಡ ಶ್ರೀಹರಿ ನಾಮ ಸಂಕೀರ್ತನೆ
05.35 - ಪರ್ಯಾಯ ಶ್ರೀ ರಥಬೀದಿ ಪ್ರವೇಶ, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನ
06.12 - ಪೇಜಾವರ ಶ್ರೀಗಳಿಂದ ಸ್ವಾಗತ, ಶ್ರೀಕೃಷ್ಣಮಠ ಪ್ರವೇಶ
06.35 - ಅಕ್ಷಯಪಾತ್ರೆ, ಸಟ್ಟುಗ ಸ್ವೀಕಾರ, ಸರ್ವಜ್ಞ ಪೀಠಾರೋಹಣ
06.50 - ಅರಳುಗದ್ದುಗೆಯಲ್ಲಿ ಸಾಂಪ್ರದಾಯಿಕ ವಿಧಿವಿಧಾನ
07.00 - ರಾಜಾಂಗಣದ ಆನಂದತೀರ್ಥ ಮಂಟಪದಲ್ಲಿ ಪರ್ಯಾಯ ದರ್ಬಾರ್
11.10 - ಮಹಾಪೂಜೆ 12.15 - ಮಹಾ ಅನ್ನ ಸಂತರ್ಪಣೆ
19.40 - ರಥೋತ್ಸವ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications