ಮಣಿಪಾಲದ ಗ್ರಾಮದಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆ
ಉಡುಪಿ, ಸೆಪ್ಟೆಂಬರ್ 05: ಮಣಿಪಾಲದ ಸರಳೆಬೆಟ್ಟು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಚಿರತೆಯೊಂದು ಮಣಿಪಾಲದಲ್ಲಿ ಸೆರೆಯಾಗಿದೆ. ಮಣಿಪಾಲದ ಸರಳೆಬೆಟ್ಟು ವಿಜಯನಗರ ಕೋಡಿ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಇಂದು ನಸುಕಿನ ವೇಳೆಗೆ ಚಿರತೆ ಬಿದ್ದಿದೆ.
Recommended Video
ದಾರಿ
ತೋರಿದ
ಗುರುವಿಗೆ
ನಮನ
|
Happy
teachers
day
|
Oneindia
Kannada
ಗುಂಡ್ಲುಪೇಟೆ ಪಟ್ಟಣದಲ್ಲೇ ಪ್ರತ್ಯಕ್ಷವಾದ ಚಿರತೆ
ಕಳೆದ ಕೆಲವು ದಿನಗಳಿಂದ ವಿಜಯನಗರ ಕೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆಯು ಜನರಲ್ಲಿ ಭೀತಿ ಹುಟ್ಟಿಸಿತ್ತು. ಅಲ್ಲದೇ ಸುತ್ತಮುತ್ತಲಿನ ಮನೆಯಲ್ಲಿದ್ದ ಕರು, ನಾಯಿ, ಕೋಳಿಗಳನ್ನು ಹಿಡಿದು ತಿನ್ನುತ್ತಿತ್ತು. ಚಿರತೆಯ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು.
ಕೊನೆಗೆ ಈ ಭಾಗದ ಜನರು ಅರಣ್ಯ ಇಲಾಖೆಯ ಮೊರೆ ಹೋಗಿದ್ದರು. ಅಧಿಕಾರಿಗಳು ಚಿರತೆಯನ್ನು ಕೆಡವಲು ಬೋನು ಇರಿಸಿದ್ದರು. ಇಂದು ಬೆಳಿಗ್ಗೆ ಭಾರೀ ಗಾತ್ರದ ಚಿರತೆ ಸೆರೆಯಾಗುವುದರೊಂದಿಗೆ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಚಿರತೆಯನ್ನು ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.
Comments
English summary
Leopard which has created fear among villagers captured today at saralebettu of manipal in udupi,
Story first published: Saturday, September 5, 2020, 10:28 [IST]