ಅಸಂಖ್ಯಾತ ಕಂಬಳಪ್ರಿಯರನ್ನು ಅಗಲಿದ ಕರಾವಳಿಯ ರಾಕೇಟ್ ಮೋಡ್
ಉಡುಪಿ, ನವೆಂಬರ್ 21: ರಾಕೇಟ್ ಮೋಡ್...ಈ ಹೆಸರನ್ನು ಕೇಳದ ಕಂಬಳ ಪ್ರಿಯರಿಲ್ಲ ಅನಿಸುತ್ತದೆ. ಕರಾವಳಿಯ ಕಂಬಳದಲ್ಲಿ ತನ್ನ ಮಿಂಚಿನ ಓಟದಿಂದ ವಿಜೃಂಭಿಸಿದ್ದ ರಾಕೇಟ್ ಮೋಡ್ ಇನ್ನು ನೆನಪು ಮಾತ್ರ . ಕಂಬಳ ಸ್ಪರ್ಧೆಯಲ್ಲಿ ಪದಕಗಳ ಮೇಲೆ ಪದಕ ಬಾಚಿ ಸಾಧನೆ ಮಾಡಿದ್ದ ರಾಕೆಟ್ ಮೋಡ್ ಖ್ಯಾತಿಯ ಕಂಬಳದ ಕೋಣ ಇನ್ನಿಲ್ಲ.
ಕಂಬಳದಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಅನಭಿಷಿಕ್ತ ಓಟದ ದೊರೆಯಾಗಿ ಮೆರೆದ ರಾಕೇಟ್ ಮೋಡ್ ಓಟ ನಿಲ್ಲಿಸಿದ್ದಾನೆ. ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ರಾಕೇಟ್ ಮೋಡ್ ನಿನ್ನೆ (ನವೆಂಬರ್ 20) ಮೃತಪಟ್ಟಿದ್ದಾನೆ.
ಮೃತ ಕೋಣದ ಅಂತ್ಯ ಸಂಸ್ಕಾರವನ್ನು ಶಾಸ್ತ್ರಬದ್ಧವಾಗಿ ನಿನ್ನೆ ನೆರವೇರಿಸಲಾಯಿತು. ಕರಾವಳಿಯ ಯಾವುದೇ ಭಾಗದಲ್ಲಿ ಕಂಬಳ ಕೋಣಗಳು ಮೃತಪಟ್ಟರೆ ಗೌರವಾದರಗಳಿಂದಲೇ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಆದರೆ ರಾಕೆಟ್ ಮೋಡ್ ಖ್ಯಾತಿಯ ಈ ಕೋಣದ ಅಂತ್ಯಸಂಸ್ಕಾರಕ್ಕೆ ನೂರಾರು ಕಂಬಳಪ್ರಿಯರು ಆಗಮಿಸಿ ಕಂಬನಿ ಮಿಡಿದದ್ದು ವಿಶೇಷವಾಗಿತ್ತು.
ಪರ ಊರುಗಳ ಜನರಿಗೆ ಕಂಬಳ ಎಂಬುದು ಕೇವಲ ಕೋಣಗಳ ಓಟದ ಅಖಾಡ ಆಗಿರಬಹುದು. ಆದರೆ ಕರಾವಳಿಯ ಜನರಿಗೆ ಕಂಬಳ ಎನ್ನುವುದು ಮನುಷ್ಯ ಮತ್ತು ಕೋಣಗಳ ನಡುವಿನ ಸಂವಹನ. ಕಂಬಳ ಕೋಣಗಳನ್ನು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ವರ್ಷಪೂರ್ತಿ ನೋಡಿಕೊಳ್ಳಲಾಗುತ್ತದೆ. ರೈತಾಪಿ ಜನ ಇದನ್ನು ಅತ್ಯಂತ ಶ್ರದ್ಧೆಯಿಂದ ಸಾಕುತ್ತಾರೆ.
ರಾಕೆಟ್ ಮೋಡ್ ಖ್ಯಾತಿಯ ಕೋಣವೂ ಇದಕ್ಕೆ ಹೊರತಲ್ಲ. ಮುಂದೆ ಓದಿ...

ಬಹುಮಾನಗಳಿಗೆ ಲೆಕ್ಕವಿಲ್ಲ
ಕರಾವಳಿಯ ಕಂಬಳ ಕ್ಷೇತ್ರದಲ್ಲಿ ತನ್ನ ಓಟದಿಂದ ಹುಸೇನ್ ಬೋಲ್ಟ್ ನಷ್ಟು ಫೇಮಸ್ಸಾಗಿದ್ದ ಕೋಣ ಇದು. ಕೊಂಡೊಟ್ಟು ಮೋಡ, ರಾಕೆಟ್ ಮೋಡ್ ಎಂಬ ಹೆಸರಿನಿಂದಲೇ ಕಂಬಳ ಪ್ರಿಯರು ಇದನ್ನು ಗುರುತಿಸುತ್ತಿದ್ದರು. ಇದು ಬಾಚಿಕೊಂಡ ಬಹುಮಾನಗಳಿಗೂ ಲೆಕ್ಕವಿಲ್ಲ. ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ರಾಕೇಟ್ ಮೋಡ್ ಕೋಣನದ್ದಾಗಿತ್ತು.

ಕಂಬಳ ಪ್ರಿಯರಿಗೆ ನಿರಾಸೆ ಮಾಡಿಲ್ಲ
ರಾಕೆಟ್ ಮೋಡ್ ಗಂತ್ ನಲ್ಲಿ ತಲೆ ಎತ್ತಿ ನಿಂತನೆಂದರೆ ಆ ಗತ್ತು ಗೈರತ್ತು ಬೇರೆಯೇ. ನಿಶಾನೆ ಹಾರಿಸುತ್ತಿದ್ದಂತೆ ರಾಕೇಟ್ ಮೋಡ್ ಓಟ ಕಿತ್ತನೆಂದರೆ ಮಿಂಚಿನ ವೇಗದಲ್ಲಿ ಗುರಿ ತಲುಪಿ ಜಯಮಾಲೆ ಧರಿಸುತ್ತಿದ್ದ. ಕಂಬಳ ಪ್ರಿಯರು ಈ ಕೋಣದ ಹೆಸರಿನಲ್ಲಿ ಅಳುಕಿಲ್ಲದೆ ಬಾಜಿ ಕಟ್ಟುತ್ತಿದ್ದರು. ಯಾವತ್ತೂ ಈ ಕೋಣ ಕಂಬಳ ಪ್ರಿಯರಿಗೆ ನಿರಾಸೆ ಮಾಡಿದ್ದೇ ಇಲ್ಲ.

ಶಾಸ್ತ್ರಬದ್ಧವಾಗಿ ನೆರವೇರಿತು
ಕಂಬಳ ಮನೆತನದ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಮನೆಯಲ್ಲಿದ್ದ ಈ ಓಟದ ರಾಕೇಟ್ ಮೋಡ್ ಬಳಿಕ ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ ಅವರ ಮನೆಯಲ್ಲಿತ್ತು. ಈಗ ಹಲವು ಸಮಯದಿಂದ ನಂದಳಿಕೆ ಶ್ರೀಕಾಂತ್ ಭಟ್ ಆರೈಕೆಯಲ್ಲಿದ್ದ ಕೋಣ ನಿನ್ನೆ ಅಸೌಖ್ಯದಿಂದ ಮೃತಪಟ್ಟಿದೆ. ಮೃತ ಕೋಣದ ಅಂತ್ಯ ಸಂಸ್ಕಾರವನ್ನು ಶಾಸ್ತ್ರಬದ್ಧವಾಗಿ ಮಾಡಲಾಯಿತು. ಈ ವೇಳೆ ನೂರಾರು ಜನ ಕಂಬಳ ಪ್ರಿಯರು ರಾಕೇಟ್ ಮೋಡ್ ಗೆ ಕಂಬನಿ ಮಿಡಿದರು.

ದುಡ್ಡಿಗಿಂತ ಕೋಣಗಳ ಆರೋಗ್ಯ ಮುಖ್ಯ
ಕಂಬಳ ಕೋಣಗಳ ಮಾಲೀಕರಿಗೆ ದುಡ್ಡಿಗಿಂತ ಕೋಣಗಳ ಆರೋಗ್ಯ ಮುಖ್ಯ. ಹೀಗೆ ಸಿಬ್ಬಂದಿಗಳ ಮೂಲಕ ಕೋಣಗಳನ್ನು ಸಾಕಿ ಅವುಗಳನ್ನು ಕಂಬಳಗಳಿಗೆ ತಯಾರು ಮಾಡುವುದೂ ಕೂಡ ಒಂದು ಕಲೆ. ಹೀಗೆ ಅನೇಕ ಮಂದಿಯ ಆರೈಕೆಗೆ ಒಳಗಾಗಿದ್ದ ,ಉಡುಪಿ ,ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಂಬಳ ಪ್ರಿಯರ ಮನೆಮಾತಾಗಿದ್ದ ಈ ಓಟದ ಸರದಾರ ಅಸಂಖ್ಯ ಕಂಬಳಪ್ರಿಯರನ್ನು ಅಗಲಿದ್ದಾನೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications