ಶಿರೂರು ಶ್ರೀಗಳಿಗೆ ವಿಷಪ್ರಾಶನ? ಉಡುಪಿ ಶ್ರೀಕೃಷ್ಣನೇ ಬಲ್ಲ!
Recommended Video

ಮಣಿಪಾಲ, ಜುಲೈ 19: 'ಆಹಾರ ಪ್ರಾಶನದಲ್ಲಿ ವಿಷ ಇದ್ದರೆ ಒಬ್ಬರಿಗೆ ಮಾತ್ರ ಈ ರೀತಿ ಆಗಲು ಹೇಗೆ ಸಾಧ್ಯ? ಶ್ರೀಗಳಿಗೆ ಪ್ರತ್ಯೇಕ ಆಹಾರ ನೀಡಲಾಗಿತ್ತೆ? ವಿಷ ಹೇಗೆ ಆಹಾರ ಸೇರಲು ಸಾಧ್ಯ? ಹೀಗೆ ನಾನಾ ಪ್ರಶ್ನೆಗಳು ಎದ್ದಿವೆ. ಎಲ್ಲದರ ಉತ್ತರವನ್ನು ಉಡುಪಿ ಶ್ರೀಕೃಷ್ಣನೇ ಬಲ್ಲ.
'ಶಿರೂರು ಶ್ರೀಗಳು ವಿಷ ಸೇವಿಸಿರುವುದು ನಿಜ, ಫುಡ್ ಪಾಯ್ಸನ್ ಇರಬಹುದು ಅಥವಾ ಬಲವಂತ ವಿಷ ಪ್ರಾಶನವಾಗಿರಬಹುದು, ಈ ಸಮಯಕ್ಕೆ ಯಾವುದನ್ನು ಖಚಿತವಾಗಿ ಹೇಳಲಾಗದು, ಪೊಲೀಸರ ಕಣ್ಗಾವಲಿನಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ಈ ಬಗ್ಗೆ ತಿಳಯಲಿದೆ ' ಎಂದು ಕೆಎಂಸಿ ಡಾ. ಅವಿನಾಶ್ ಶೆಟ್ಟಿ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ಫುಡ್ ಪಾಯ್ಸನ್ ಆಗುವುದಾದರೆ ಅದು ಕೇವಲ ಸ್ವಾಮೀಜಿಗಳಿಗೆ ಮಾತ್ರ ಏಕೆ? ಆ ಆಹಾರ ಸೇವಿಸಿದ ಎಲ್ಲರಿಗೂ ಆಗಬೇಕಿತ್ತು. ಇತ್ತೀಚೆಗೆ ದೇವರ ವಿಗ್ರಹದ ಸ್ಥಳ ಬದಲಾವಣೆಯಂಥ ಕೆಲವು ಸಂಗತಿಗಳು ಸ್ವಾಮೀಜಿಗಳಿಗೆ ತೀವ್ರ ಬೇಸರ ತಂದಿದ್ದವು. ಜೊತೆಗೆ ಅವರ ನೇರ ಸ್ವಭಾವವೂ ಅವರಿಗೆ ಮುಳುವಾಗಿರಬಹುದು ಎಂದು ಬರ್ಕೂರು ಸಂಸ್ಥಾನದ ಸ್ವಾಮೀಜಿ ಸಂತೋಷ ಭಾರತಿ ಶ್ರೀ ಮತ್ತು ಪೇಜಾವರದ ಮಾಜಿ ಕಿರಿಯ ಶ್ರೀಗಳಾದ ವಿಶ್ವವಿಜಯ ಸ್ವಾಮೀಜಿ ಸಂಶಯ ಹೊರಹಾಕಿದ್ದಾರೆ.
ಈ ನಡುವೆ ಆಹಾರ ತಜ್ಞ ದಿನೇಶ್ ಅವರು ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿ, 'ವಿಸೇರಾದಲ್ಲಿ ವಿಷ ಅಂಶ ಇದೆ ಎಂದು ಮರಣೋತ್ತರ ಪರೀಕ್ಷೆ ಸಮಯದಲ್ಲಿ ತಿಳಿದು ಬಂದರೂ, ಸಂಪೂರ್ಣವಾಗಿ ಯಾವ ವಿಷ, ದೇಹದ ಯಾವ ಯಾವ ಭಾಗಕ್ಕೆ ಹರಡಿದೆ. ವಿಷ ಸೇವಿಸಿರಬಹುದಾದ ಸಮಯ ಸೇರಿದಂತೆ ಇನ್ನಿತರ ಮಾಹಿತಿಗಳು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ ನೆರವು ಬೇಕಾಗುತ್ತದೆ. ಎಲ್ಲವನ್ನು ಸಂಪೂರ್ಣವಾಗಿ ತಿಳಿಯಲು ಕನಿಷ್ಠ 6 ವಾರಗಳ ಕಾಲವಾದರೂ ಬೇಕು' ಎಂದಿದ್ದಾರೆ.
-
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ












Click it and Unblock the Notifications