ವಿಶೇಷ ಚೇತನ ಅಣ್ಣ-ತಂಗಿಯರ ಹುಬ್ಬೇರಿಸುವ ಸಾಧನೆ
ಉಡುಪಿ, ಏಪ್ರಿಲ್ 30: ಸಾಧಿಸುವ ಛಲ ಇದ್ದರೆ ಯಾವುದೇ ಸಾಧನೆಯೂ ಅಸಾಧ್ಯವಲ್ಲ ಎಂಬುದನ್ನು ಇಬ್ಬರು ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ. ಇವರಿಬ್ಬರು ಒಂದೇ ಮನೆಯ ಮಕ್ಕಳು; ಸೊಂಟದ ಕೆಳಗೆ ಇಬ್ಬರಿಗೂ ಬಲ ಇಲ್ಲ; ಹೀಗಾಗಿ ತೆವಳುತ್ತಾ ಆಚೀಚೆ ಹೋಗಬೇಕು. ಆದರೆ ಇವರ ಸಾಧನೆಗೆ ಈ ಅಂಗವೈಕಲ್ಯ ಕಿಂಚಿತ್ತೂ ಅಡ್ಡಿಯಾಗಿಲ್ಲ. ಇಬ್ಬರೂ ಓದಿ ಪಿಯುಸಿಯಲ್ಲಿ ಪಾಸಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಉಡುಪಿಯ ಕಾರ್ಕಳ ತಾಲೂಕಿನ ನಿಟ್ಟೆಯ ಪ್ರಜ್ವಲ್ ಮತ್ತು ಪ್ರತೀಕ್ಷಾ ಈ ಸಾಧಕರು. ಸೊಂಟದ ಕೆಳಗೆ ಬಲ ಇಲ್ಲದಿದ್ದರೂ ಒಂದನೇ ತರಗತಿಯಿಂದ ಇವತ್ತಿನವರೆಗೂ ಮನೆಗೇ ಉಪನ್ಯಾಸಕರನ್ನು ಕರೆಸಿ ಪಾಠ ಹೇಳಿಸಿದ್ದಾರೆ. ಸ್ವಂತ ಬರೆಯಲೂ ಸಾಧ್ಯವಿಲ್ಲದ ಅಣ್ಣ-ತಂಗಿ ಸಹಾಯಕರ ನೆರವಿನಿಂದ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.
ಪ್ರಜ್ವಲ್ 51%, ಪ್ರತೀಕ್ಷಾ 49% ಅಂಕ ಪಡೆದಿದ್ದಾರೆ. ಹೊರಗಿನವರೊಂದಿಗೆ ಬೆರೆಯದ ಇವರಿಗೆ ಈ ಸಲ ಪರೀಕ್ಷೆ ಬರೆಯುವುದಕ್ಕೆ ದೊಡ್ಡ ತೊಡಕು ಉಂಟಾಗಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅವರಿಗೆ ಪಾಠ ಮಾಡಿದ ಟೀಚರುಗಳೇ ಪರೀಕ್ಷೆ ಬರೆದಿದ್ದರು. ಅವರು ತಮ್ಮ ಸ್ವಂತ ಉತ್ತರ ಬರೆಯದಂತೆ ಸ್ಕ್ವಾಡ್ ಗಳು ಕಾಯುತ್ತಿದ್ದರು.

ತಮ್ಮ ಪರಿಚಯದ, ಯಾವತ್ತೂ ಬಂದು ಹೋಗಿ ಸಲಿಗೆ ಇದ್ದ ಟೀಚರುಗಳ ಮಂದೆ ಉತ್ತರವನ್ನು ನಿರರ್ಗಳವಾಗಿ ಹೇಳಿ ಇಬ್ಬರೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು.ಆದರೆ ಪಿ.ಯು ಪರೀಕ್ಷೆಗೆ ಟೀಚರುಗಳು ಅಥವಾ ಅವರ ವಿಷಯವನ್ನು ಓದಿದವರು ಬರೆಯಬಾರದೆಂಬ ಕಟ್ಟು ನಿಟ್ಟು ನಿಯಮವಿದೆ.
ಆ ಕಾನೂನು ನಿಜಕ್ಕೂ ಒಳ್ಳೆಯದೇ. ಆದರೆ ಹೊಸಬರ ಜೊತೆಗೆ ತುಟಿ ಬಿಚ್ಚದ ಈ ಹುಡುಗರಿಗೆ ಹೊಸ ಸಹಾಯಕರನ್ನು ಹುಡುಕುವ ಸವಾಲು ಎದುರಾಗಿತ್ತು. ಅದೆಷ್ಟೋ ಕಾಲೇಜಿಗೆ, ಪರಿಚಯಸ್ಥರ ಮನೆಗಳಿಗೆ ತಂದೆ ತಾಯಿ ಅಲೆದಾಡಿದರು. ಸಹಾಯಕರು ಸಿಗಬಹುದೇ ಹುಡುಕಾಡಿದರು. ಯಾರೂ ಬರೆಯಲು ಒಪ್ಪಲಿಲ್ಲ.
ಕೊನೆಗೆ ಇಬ್ಬರು ವಿದ್ಯಾರ್ಥಿಗಳು ಸಹಾಯಕ್ಕೆ ಬಂದರು. ಓರ್ವಳು ಮನೆ ಪಕ್ಕದ ಹುಡುಗಿ. ಇನ್ನೋರ್ವ ದೂರದ ಕಲ್ಯಾ ಊರಿನವನು. ಪರೀಕ್ಷೆಗಿಂತ ವಾರದ ಹಿಂದೆ ಇಬ್ಬರೂ ಒಂದೊಂದು ಗಂಟೆ ಪ್ರಜ್ವಲ್ ಪ್ರತೀಕ್ಷಾರ ಮನೆಗೆ ಬಂದು ಅವರ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಪ್ರತೀಕ್ಷ ಸರಿಯಾಗಿ ಮಾತನಾಡುತ್ತಾಳೆ. ಆದರೆ ಹೊರಗಿನವರೆಂದರೆ ಬಹಳ ನಾಚಿಕೆ. ಪ್ರಜ್ವಲ್ ನಾಚಿಕೆ ಇಲ್ಲ. ಆದರೆ ಪ್ರತೀ ಮಾತಿಗೂ ಬಹಳವೇ ತೊದಲುತ್ತಾನೆ.
ಒಟ್ಟಿನಲ್ಲಿ ಅಪ್ಪ, ಅಮ್ಮ, ಇಬ್ಬರು ಉಪನ್ಯಾಸಕರು, ಇಬ್ಬರು ಸಹಾಯಕರು ಹಾಗೂ ಆ ವಿದ್ಯಾರ್ಥಿಗಳ ಪರಿಶ್ರಮ ಫಲಕೊಟ್ಟಿದೆ. ಇಬ್ಬರೂ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಇವರ ಸಾಧನೆ ವಿದ್ಯಾರ್ಥಿ ಸಮೂಹಕ್ಕೇ ಒಂದು ಸ್ಪೂರ್ತಿ.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications