Get Updates
Get notified of breaking news, exclusive insights, and must-see stories!

ಕರಾವಳಿ ಜಿಲ್ಲೆಗಳಲ್ಲಿ ಮಂಜು ಮುಸುಕಿದ ವಾತಾವರಣ: ಹಲವೆಡೆ ಗುಡುಗು ಸಹಿತ ಮಳೆ

ಉಡುಪಿ, ನವೆಂಬರ್ 4: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಬುಧವಾರ ಮಂಜು ಮುಸುಕಿದ ವಾತಾವರಣ ಇತ್ತು. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಮಂಗಳವಾರ ತಡರಾತ್ರಿ ಮಳೆಯಾಗಿದ್ದು, ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣವಿತ್ತು.

ಮಂಗಳೂರು ನಗರದಲ್ಲಿಯೂ ಬೆಳಿಗ್ಗೆ ಮಂಜಿನಿಂದ ಕೂಡಿದ ವಾತಾವರಣ ನಿರ್ಮಾಣವಾಗಿತ್ತು. ಉಡುಪಿ ಜಿಲ್ಲೆಯ ಹಾಲಾಡಿಯಲ್ಲಿ ಮಂಗಳವಾರ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು ತಾಲೂಕಿನ ಹಲವೆಡೆ ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಬಳ್ಪದಲ್ಲಿ ಗರಿಷ್ಠ 43 ಮಿ.ಮೀ., ಮಡಪ್ಪಾಡಿ 40, ಕಲ್ಲಾಜೆ 38, ಕಡಬ 37, ಮೆಟ್ಟಿನಡ್ಕ 36, ಸುಬ್ರಹ್ಮಣ್ಯ 32 ಮಿ.ಮೀ ಮಳೆಯಾಗಿದೆ.

Foggy Weather In Coastal Districts: Thunderstorms Rains At Several Areas

ಇನ್ನು ಅಯ್ಯನಕಟ್ಟೆ, ಬಾಳಿಲ, ಹಾಲೆಮಜಲು ತಲಾ 30 ಮಿ.ಮೀ, ಕೊಳ್ತಿಗೆ-ಎಕ್ಕಡ್ಕ 23, ವಾಲ್ತಾಜೆ- ಕಂದ್ರಪ್ಪಾಡಿ 20, ಕಲ್ಮಡ್ಕ 18, ಹರಿಹರ- ಮಲ್ಲಾರ 17, ಕೋಡಿಂಬಾಳ-ತೆಕ್ಕಡ್ಕ 12, ಚೊಕ್ಕಾಡಿ, ಎಣ್ಮೂರು ತಲಾ 10, ಕಲ್ಲಕಟ್ಟ 09, ಶಾಂತಿಗೋಡು ತಲಾ 06, ಮುಂಡೂರು 05, ಕೊಲ್ಲಮೊಗ್ರ 03, ಮುಳ್ಯ-ಅಜ್ಜಾವರ, ತೊಡಿಕಾನ ತಲಾ 02, ದೊಡ್ಡತೋಟ, ಬಲಾಡು, 01 ಮಿ.ಮೀ.ನಷ್ಟು ಮಳೆ ದಾಖಲಾಗಿದೆ.

ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ, ಹಿಂಗಾರು ಸಮಯದಲ್ಲಿ ಹಾಗೂ ಚಳಿ ಆಗಮನದ ವೇಳೆ ಈ ರೀತಿ ಮಂಜಿನಿಂದ ಕೂಡಿದ ವಾತಾವರಣ ಇರುವುದು ಸಹಜ ಎಂದು ಹೇಳಿದ್ದಾರೆ.

Recommended Video

      Corona Update Karnataka : ನಮ್ಮನ್ನ ನಾವೇ ಕಾಪಾಡ್ಕೊಬೇಕು! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+