ಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್: ಏನುಂಟು, ಏನಿಲ್ಲ
ಉಡುಪಿ, ಸೆಪ್ಟೆಂಬರ್.19: ಉಪ್ಪುನೀರು ಮತ್ತು ಹಿನ್ನೀರು ಎರಡೂ ಇರುವ ಕಡೆ ಮನರಂಜನೆಗೇನು ಕೊರತೆ? ಕರಾವಳಿಯಲ್ಲಂತೂ ಕಡಲತೀರ ಮತ್ತು ಬ್ಯಾಕ್ ವಾಟರ್ ಪ್ರವಾಸಿಗರಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಈ ವರ್ಷದ ಬೇಸಿಗೆ ಮಜಾಕ್ಕೆ ಈಗಲೇ ಉಡುಪಿಯಲ್ಲಿ ಬೋಟ್ ಹೌಸ್ ಸಿದ್ಧಗೊಂಡಿದೆ.
ಪ್ರಕೃತಿಯ ಆಸ್ವಾದನೆಗೆ ಬೋಟ್ ಹೌಸ್ ಗಿಂತ ಮತ್ತೊಂದು ಸಿಗಲು ಸಾಧ್ಯವೇ ಇಲ್ಲ. ಏನಿದರ ವಿಶೇಷತೆ ಅಂತೀರಾ? ಪ್ರಕೃತಿ ಪ್ರಿಯರಿಗಂತೂ ಇದು ಸಿಹಿಸುದ್ದಿ . ಕೇರಳದಲ್ಲಿ ಪ್ರಸಿದ್ಧಿ ಪಡೆದಿರುವ ಬೋಟ್ ಹೌಸ್ ಮತ್ತೆ ಉಡುಪಿಯಲ್ಲಿ ಸೇವೆಗೆ ಸಿದ್ಧಗೊಂಡಿದೆ.
ಅಂದಹಾಗೆ ಈ ಬೋಟ್ ಹೌಸ್ ನಲ್ಲಿ ಅಲೆಗಳ ಏರಿಳಿತಗಳಿಲ್ಲ ಇಲ್ಲಿ ಏನಿದ್ದರೂ ಪ್ರಕೃತಿಯ ಮಡಿಲಲ್ಲಿ ಮೌನಧ್ಯಾನ. ಹಿನ್ನೀರಲ್ಲಿ ತೇಲುವ ಅಪೂರ್ವ ರಸದೌತಣ.

ಬೋಟ್ ನಲ್ಲಿ ಸಂಚರಿಸುತ್ತಾ ಕಡಲ ತಡಿಯ ಸೌಂದರ್ಯದ ಜತೆಗೆ ಹಿನ್ನೀರಿನ ಸವಿ, ಡಾಲ್ಫಿನ್ ಪಾಯಿಂಟ್, ಸೈಂಟ್ ಮೆರೀಸ್ ದ್ವೀಪಗಳನ್ನು ನೋಡುತ್ತಾ ಸೂರ್ಯಾಸ್ತವನ್ನು ಸವಿಯಬಹುದು. ಬೇಸಿಗೆ ರಜೆಯಲ್ಲಿ ಪ್ರವಾಸಿಗರಿಗೆ ಪರಿಸರದ ಸೌಂದರ್ಯದೊಂದಿಗೆ ಮೋಜಿಗೆ ಅವಕಾಶ ನೀಡುವ ಬೋಟ್ ಹೌಸ್ ಇದು.
ಒಂದೆಡೆ ಬೀಚ್ ನ ಸೌಂದರ್ಯ, ಇನ್ನೊಂದೆಡೆ ಹಿನ್ನೀರಿನ ಉಲ್ಲಾಸ ಸವಿಯುವ ಮನಸ್ಸು ನಿಮಗಿದ್ದರೆ ಖಂಡಿತ ಕೆಮ್ಮಣ್ಣು, ಕೋಡಿಬೆಂಗ್ರೆಯ ಸ್ವರ್ಣಾ ನದಿಯತ್ತ ಬನ್ನಿ. ಪ್ರತಿದಿನ ಸ್ವರ್ಣಾ ನದಿಯಿಂದ ಆರಂಭವಾಗಿ ಸಮುದ್ರಕ್ಕೆ ಸುತ್ತು ಹಾಕಲಿದೆ ಈ ಬೋಟ್ ಹೌಸ್.
ಪ್ರವಾಸಿಗರಿಗೆ 2 ಗಂಟೆಗಳ ಕಾಲ ಸ್ವಚ್ಛಂದವಾಗಿ ನೀರಿನ ಮೇಲೆ ತೇಲಾಡುವ ಅವಕಾಶವನ್ನು ಈ ಬೋಟ್ ಹೌಸ್ ನೀಡಲಿದೆ. ಇದೊಂದು ಅಪ್ಪಟ ಮನೆಯ ವಾತಾವರಣ ಹೊಂದಿರುವ ಬೋಟ್. ಅಡಿಭಾಗದಲ್ಲಿ ಜೋಡಿಗಳಿಗೆ ಅನುಕೂಲವಾಗುವಂತೆ ಬೆಡ್ ರೂಂ ವ್ಯವಸ್ಥೆಯಿದೆ.

ಅಲ್ಲಿಂದಲೇ ಪ್ರಕೃತಿಯ ಸೌಂದರ್ಯ ಸವಿಯುವ ಅಪೂರ್ವ ಅವಕಾಶ. ಒಟ್ಟು 160 ಜನರಿಗೆ ಈ ಬೋಟ್ ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಈ ಟೂರಿಸ್ಟ್ ಬೋಟ್ ನಲ್ಲಿ ಪಾರ್ಟಿ, ಬರ್ತ್ ಡೇ ಆಯೋಜನೆಗೂ ಅವಕಾಶ ಉಂಟು. ರಾತ್ರಿ ಉಳಿದುಕೊಳ್ಳಲೂ ಪ್ಯಾಕೇಜ್ ವ್ಯವಸ್ಥೆಯೂ ಇದೆ.
ಸಂಪೂರ್ಣ ಮರದಿಂದಲೇ ಸಿದ್ಧಗೊಂಡಿರುವ ಟೂರಿಸ್ಟ್ ಬೋಟನ್ನು ಹಳೆಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ನುರಿತ ಸಲಕರಣೆಗಳನ್ನು ಜೋಡಿಸಲಾಗಿದೆ. ಅಲ್ಲದೇ ನುರಿತ ತಜ್ಞರು ಬೋಟ್ ನಲ್ಲಿ ಇರುತ್ತಾರೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆಯ ಸಹಕಾರವೂ ಇದೆ.
ಬೋಟ್ ಹೌಸ್ ಗಳಿಗೆ ಕೇರಳ ತುಂಬ ಪ್ರಸಿದ್ಧಿ. ಇದೀಗ ಕರ್ನಾಟಕದಲ್ಲಿ ಬೋಟ್ ಹೌಸ್ ಪರಿಚಯ ಆಗ್ತಿರೋದು ಉಡುಪಿಯಲ್ಲಿ ಮಾತ್ರ. ಈಗಾಗಲೇ ಉಡುಪಿಯಲ್ಲಿ ನಿಗಿನಿಗಿ ಬಿಸಿಲು ಪ್ರಾರಂಭಗೊಂಡಿದೆ. ಬೇಸಿಗೆಗೆ ಸಹಜವಾಗಿಯೇ ಪ್ರವಾಸಿಗರ ಓಡಾಟ ಹೆಚ್ಚು.

ಕಡಲ ತಡಿಯ ಸೌಂದರ್ಯದ ಜತೆಗೆ, ಇಲ್ಲಿನ ಜಲಮಾರ್ಗಗಳಲ್ಲಿ ಸಂಚರಿಸಿದರೆ ಸಾಕು, ನೀವು ಆ ಕ್ಷಣಗಳನ್ನು ಜೀವಮಾನದಲ್ಲಿ ಮತ್ತೀನೆಂದೂ ಮರೆಯಲಾರಿರಿ. ಇನ್ನು ಈ ಬೋಟ್ ಹೌಸ್ ನಲ್ಲಿ ನಿಮಗೆ ಕರಾವಳಿಯ ಮೀನು ಅಡುಗೆ, ಚಿಕನ್ ಅಡುಗೆಯನ್ನೂ ಸವಿಯಬಹುದು.
ಇದಲ್ಲದೆ ಬೋಟ್ ನಲ್ಲಿಯೇ ರಾತ್ರಿಯನ್ನು ಕಳೆಯಬೇಕೆನಿಸಿದವರಿಗೆ ಮಂದ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಮತ್ತೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲು ? ಮತ್ತೇಕೆ ತಡ ಈ ಬೇಸಿಗೆಗೆ ನೀವೂ ಒಮ್ಮೆ ಇಲ್ಲಿ ಭೇಟಿ ಕೊಡಲು ಸಿದ್ಧರಾಗಿ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications