ಆಷಾಢ ಏಕಾದಶಿ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುದ್ರಾಧರಣೆ
ಉಡುಪಿ, ಜುಲೈ 04 : ಆಷಾಢ ತಿಂಗಳ ಮೊದಲ ಏಕಾದಶಿಯ ದಿನವಾದ ಇಂದು (ಜುಲೈ 4) ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮುದ್ರಾಧರಣೆ ನೆರವೇರಿತ್ತು.
ಸುದರ್ಶನ ಹೋಮದಲ್ಲಿ ಭಗವಂತನ ಆಯುಧಗಳಾದ ಚಕ್ರ, ಶಂಖಗಳನ್ನು ಕಾಯಿಸಿ ಬಾಹುಮೂಲದಲ್ಲಿ ಧಾರಣೆ ಮಾಡುವ ಧಾರ್ಮಿಕ ಪ್ರಕ್ರಿಯೆ ತಪ್ತ ಮುದ್ರಾಧಾರಣೆ ಇಂದು ಶ್ರೀಕೃಷ್ಣ ಮಠದಲ್ಲಿ ನೆರವೇರಿತ್ತು.

ಆಷಾಢ ಶುದ್ಧ ಶಯನೀ ಏಕಾದಶಿಯಂದು ಭಗವಂತ ಯೋಗನಿದ್ರೆಗೆ ಮುಂದಾದರೆ, ದ್ವಾದಶಿಯಂದು (ಜು.5) ಚಾತುರ್ಮಾಸ್ಯ ವ್ರತ ಆರಂಭವಾಗಿ (ಶಾಖಾ, ದಧಿ, ಕ್ಷೀರ ಹಾಗೂ ದ್ವಿದಳ) ಅ. 30ಕ್ಕೆ ಕೊನೆಗೊಳ್ಳಲಿದೆ.
ವೇದದಲ್ಲಿ ಅತಪ್ತತನು: ತದಾಮಹ ಅಷ್ಣುತೇ ಭಗವಂತನ ಆಯುಧಗಳಾದ ಚಕ್ರ, ಶಂಖಗಳಿಂದ ಮುದ್ರಾಧಾರಣೆ ಮಾಡಿಸಿಕೊಂಡ ಸಾಧಕನು ಪವಿತ್ರಾತ್ಮನಾಗಿ ಮೋಕ್ಷ ಫಲ ಪಡೆಯುತ್ತಾನೆ ಎನ್ನುವ ಉಲ್ಲೇಖವಿದೆ ಎನ್ನುತ್ತಾರೆ ಶ್ರೀಕೃಷ್ಣ ಮಠದ ಪರಪತ್ಯಗಾರ ಕೆ.ಆರ್. ಶಶಾಂಕ್ ಭಟ್.

ಮಳೆಗಾಲ ಆರಂಭವಾಯಿತೆಂದರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಯತಿಗಳಿಗೆ ಸಂಚಾರ ನಿಷಿದ್ಧ. ಹೀಗಾಗಿ ಒಂದೆಡೆ ಒಟ್ಟಾಗಿ ಕೂತು ಚಾತುರ್ಮಾಸ್ಯ ವ್ರತದಲ್ಲಿ ತೊಡಗುತ್ತಾರೆ.
ಅಹಿಂಸೆ ತತ್ವದ ಹಿನ್ನಲೆ, ಹಿಂದಿನ ಕಾಲಗಳಲ್ಲಿ ಮಳೆಗಾಲದಲ್ಲಿ ರೋಗ ತಡೆಯೊಂದಿಗೆ ರೋಗ ನಿರೋಧಕ ಶಕ್ತಿ ತಪ್ತ ಮುದ್ರಾಧಾರಣೆ ಪೂರಕ ಎನ್ನುವುದು ಆಧುನಿಕ ನಂಬಿಕೆಯಾಗಿದೆ.
ಬಲಗೈಗೆ ಚಕ್ರ ಹಾಗೂ ಶಂಖ ಮುದ್ರೆ ಧಾರಣೆ ಮಾಡಿಸಿಕೊಳ್ಳುವುದು ಶಾಸ್ತ್ರೀಯ ಕ್ರಮ. ಇನ್ನು ಹೊಟ್ಟೆಗೆ ಚಕ್ರ, ಬಲ ಎದೆಗೆ ಚಕ್ರ, ಎಡ ಎದೆಗೆ ಶಂಖ ಮುದ್ರೆ ಹಾಕಿಸಿಕೊಳ್ಳಬಹುದಾಗಿದ್ದರು ಇದು ಶಾಸ್ತ್ರಿಯವಲ್ಲ. ಮಣಿಪಾಲ ವಿದ್ಯಾರ್ಥಿಗಳಿಗೂ ತಪ್ತ ಮುದ್ರಾಧಾರಣೆ ಬಗ್ಗೆ ವೈಜ್ಞಾನಿಕ ಕುತೂಹಲವಿದೆ ಎನ್ನುತ್ತಾರೆ ಶ್ರೀಕೃಷ್ಣ ಮಠದ ಪರಪತ್ಯಗಾರ ಕೆ.ಆರ್. ಶಶಾಂಕ್ ಭಟ್.

ಚಾತುರ್ಮಾಸ್ಯ ವ್ರತ ದಿನಾಂಕಗಳು:
ಶಾಖ ವ್ರತ - ಜುಲೈ 5ರಿಂದ ಆಗಸ್ಟ್ 3ರ ತನಕ
ದಧಿ ವ್ರತ - ಆಗಸ್ಟ್ 4ರಿಂದ ಸೆಪ್ಟೆಂಬರ್.1ರ ತನಕ
ಕ್ಷೀರ ವ್ರತ- ಅಕ್ಟೋಬರ್ 2ರಿಂದ ಅಕ್ಟೋಬರ್30ರ ತನಕ
ದ್ವಿದಳ ವ್ರತ - ಅಕ್ಟೋಬರ್.2ರಿಂದ ಅ.30ತನಕ
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications