ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣಮಠದ ಮಧ್ವಸರೋವರದಲ್ಲಿ ತೀರ್ಥಸ್ನಾನಕ್ಕಿಳಿದ ವೃದ್ಧ ಸಾವು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 11: ತೀರ್ಥಸ್ನಾನಕ್ಕೆ ಇಳಿದಿದ್ದ ಭಕ್ತರೊಬ್ಬರು ಮಧ್ವಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉಡುಪಿ ಕೃಷ್ಣಮಠದಲ್ಲಿ ಇಂದು ಮುಂಜಾನೆ‌ ಈ ದುರ್ಘಟನೆ ನಡೆದಿದೆ.‌

ಚೆನ್ನೈ ಮೂಲದ 62 ವರ್ಷದ ಕ್ಯಾಪ್ಟನ್ ಜಿ. ಶ್ರೀಧರನ್ ಮೃತ ದುರ್ದೈವಿ. ಕೃಷ್ಣನ ದರ್ಶನ ಪಡೆಯಲು ಬಂದಿದ್ದ ಇವರು ಮಧ್ವ ಸರೋವರದಲ್ಲಿ ತೀರ್ಥ‌ಸ್ನಾನಕ್ಕೆ ಇಳಿದಿದ್ದಾರೆ. ಸರೋವರ ಆಳವಿದ್ದ ಕಾರಣ ಈಜಲು ಬಾರದೆ ಮುಳುಗಿ ಸಾವನ್ನಪ್ಪಿದ್ದಾರೆ.‌

Chennai Based Man Died In Madhwa Sarovar In Krishna Mutt Udupi

 ಹಂಪೆಯ ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು ಹಂಪೆಯ ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು

ಉಡುಪಿ‌ ನಗರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಈ ಹಿಂದೆಯೂ ಇಂತಹ ದುರ್ಘಟನೆಗಳು ಮಧ್ವ ಸರೋವರದಲ್ಲಿ ನಡೆದ ಉದಾಹರಣೆಗಳಿವೆ. ಭಕ್ತರಿಗೆ ಇಲ್ಲಿ ಸ್ನಾನಕ್ಕೆ ಅವಕಾಶ ಇಲ್ಲ. ಆದರೂ ಕೆಲವು ಭಕ್ತರು ಮಠದ ಸಿಬ್ಬಂದಿ ಕಣ್ತಪ್ಪಿಸಿ ಸ್ನಾನಕ್ಕೆ ಇಳಿಯುತ್ತಾರೆ. ಈ ಮೊದಲೂ ಇಂತಹ ದುರ್ಘಟನೆ ನಡೆದಿರುವುದರಿಂದ ಮಠದ ಆಡಳಿತ ಮಂಡಳಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವ ಮೂಲಕ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.

English summary
A devotee of Lord Krishna, Sridharan From chennai died in Madhvasarovar. The mishap occurred at Udupi Krishna mutt this morning
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X