ಅವಹೇಳನಕಾರಿ ಪೋಸ್ಟ್; ಕುಂದಾಪುರ ಯುವಕನ ಮೇಲೆ ಪ್ರಕರಣ ದಾಖಲು
ಉಡುಪಿ, ಏಪ್ರಿಲ್ 11: ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಯುವಕನ ಮೇಲೆ ಉಡುಪಿಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದ ಕಾರ್ವಾಡಿಯ ನಾಗರಾಜ್ ಮೊಗವೀರ (28) ಎಂಬ ಯುವಕನ ಮೇಲೆ ಪ್ರಕರಣ ದಾಖಲಾಗಿದ್ದು, ಈತ ಕೋಮು ಪ್ರಚೋದನೆ ರೀತಿಯಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಏಪ್ರಿಲ್ 9ರಂದು ಈತ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಎಂದು ತಿಳಿದುಬಂದಿದೆ.
ಇಸ್ಲಾಂ ವಿರುದ್ಧ ಅವಹೇಳನಕಾರಿ ಪೋಸ್ಟ್– ದುಬೈನಲ್ಲಿ ಕೆಲಸದಿಂದ ಹಾವೇರಿ ಯುವಕ ವಜಾ
ಹೀಗಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ 1860 295ಎ, 505(2) ನಂತೆ ಪ್ರಕರಣ ದಾಖಲಿಸಲಾಗಿದೆ.
Comments
English summary
Case has been filed against kundapura youth for posting against religion in social media,