Vitla Pindi 2022 : ಉಡುಪಿಯಲ್ಲಿ ವಿಟ್ಲ ಪಿಂಡಿ ಉತ್ಸವಕ್ಕೆ ಕ್ಷಣಗಣನೆ, ಹುಲಿಕುಣಿತಕ್ಕೆ ಎದುರು ನೋಡುತ್ತಿರುವ ಜನತೆ
ಉಡುಪಿ, ಆಗಸ್ಟ್ 20: ಕೃಷ್ಣನೂರು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮುಗಿಲು ಮುಟ್ಟಿದೆ. ಶುಕ್ರವಾರ ತಡರಾತ್ರಿ ಶ್ರೀಕೃಷ್ಣನಿಗೆ ಉಡುಪಿ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅರ್ಘ್ಯ ಪ್ರಧಾನ ಮಾಡಿದ್ದಾರೆ. ಹಾಲು ಹಾಗೂ ನೀರಿನ ಮೂಲಕ ಚಂದ್ರನಿಗೆ ಹಾಗೂ ಕೃಷ್ಣ ದೇವರಿಗೆ ಅರ್ಘ್ಯ ಸಮರ್ಪಣೆ ಮಾಡಿದ ಬಳಿಕ ಉಂಡೆ ಮತ್ತು ಚಕ್ಕುಲಿಗಳನ್ನು ಶ್ರೀಕೃಷ್ಣನಿಗೆ ಅರ್ಪಿಸಿದ್ದಾರೆ. ಮಹಾ ಮಂಗಳಾರತಿ ಬಳಿಕ ಶ್ರೀ ಕೃಷ್ಣ ನಿಗೆ ಅರ್ಘ್ಯ ಸಮರ್ಪಿಸಿದ ಮಠದ ಅರ್ಚಕರು ಹಾಗೂ ಭಕ್ತರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ..ಈ ವೇಳೆ ನಟ ರವಿಶಂಕರ್ ಕೂಡಾ ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ..
ಅರ್ಘ್ಯ ಪ್ರಧಾನದ ಬಳಿಕ ಕೃಷ್ಣಜನ್ಮಾಷ್ಟಮಿಯ ವಿಶೇಷ ಆಕರ್ಷಣೆ ವಿಟ್ಲಪಿಂಡಿ ಇಂದು (ಶನಿವಾರ) ನಡೆಯಲಿದೆ. ಶ್ರೀ ಕೃಷ್ಣ ಲೀಲೋತ್ಸವದಲ್ಲಿ ದೇಶದ ನಾನಾ ಭಾಗಗಳ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆ ವೇಳೆಗೆ ವಿಟ್ಲಪಿಂಡಿ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಗೊಲ್ಲರು ಹುಲಿ ವೇಷದಾರಿಗಳೊಂದಿಗೆ ಆಗಮಿಸಿ ಮೊಸರು ಕುಡಿಕೆ ಒಡೆಯುವ ಮೂಲಕ ಚಾಲನೆ ನೀಡಲಿದ್ದಾರೆ.
ಗುರ್ಜಿ ಕೆಳಗೆ ಆಡುತ್ತಾ ಮೊಸರು ಕುಡಿಕೆ ಒಡೆಯುವ ಮೂಲಕ ಲೀಲೋತ್ಸವಕ್ಕೆ ಚಾಲನೆ ಸಿಗಲಿದೆ. ರಥಬೀದಿ ಸುತ್ತ ಹಾಕಿರುವ ಗುರ್ಜಿ ಕೆಳಗೆ ಗೊಲ್ಲರಿಂದ ಮೊಸರು ಕುಡಿಕೆ ಒಡೆಯವ ಆಟ ನಡೆಯಲಿದೆ. ಗೊಲ್ಲರು ಮೊಸರು ಕುಡಿಕೆ ಒಡೆಯುತ್ತಿದ್ದಂತೆ ಕೃಷ್ಣನ ರಥೋತ್ಸವ ನಡೆಯಲಿದೆ. ಮೂರು ರಥಗಳನ್ನ ಭಕ್ತರು ಎಳೆಯಲಿದ್ದು, ಈ ಸಂಭ್ರಮದ ಕ್ಷಣಕ್ಕೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾಗಲಿದ್ದಾರೆ. ಸಂಜೆ 5:10ಕ್ಕೆ ಮಧ್ವ ಸರೋವರದಲ್ಲಿ ಕೃಷ್ಣನ ಮೃಣ್ಮಯ(ಮಣ್ಣಿನ) ಮೂರ್ತಿ ಜಲಸ್ಥಂಭನವಾದ ಬಳಿಕ ವಿಟ್ಲಪಿಂಡಿ ಉತ್ಸವ ಸಂಪನ್ನ ವಾಗಲಿದೆ.

ಈ ವಿಟ್ಲ ಪಿಂಡಿ ಸಂಭ್ರಮದಲ್ಲಿ ವಿವಿಧ ವೇಷಧಾರಿಗಳು, ಹುಲಿವೇಷ ತಂಡಗಳು ಗಮನಸೆಳೆಯಲಿದೆ. ವಿಟ್ಲಪಿಂಡಿ ಸಂಭ್ರಮದಲ್ಲಿ ಹುಲಿವೇಷ ತಂಡಗಳದ್ದೇ ಅಬ್ಬರವಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹುಲಿವೇಷ ತಂಡಗಳು ಬರುವ ನೀರಿಕ್ಷೆಗಳಿವೆ. ವಿಟ್ಲ ಪಿಂಡಿ ವೈಭದಲ್ಲಿ ಪಾಲ್ಗೊಳ್ಳಲು ಹುಲಿವೇಷ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಅಕ್ಕಿಮೂಟೆಯನ್ನೇ ಬಾಯಲ್ಲಿ ಎತ್ತಿ ಬಿಸಾಕುವ ಕಸರತ್ತಿನಲ್ಲಿ ಹುಲಿವೇಷ ತಂಡಗಳು ನಿರತವಾಗಿದ್ದು, ನಟ ರಿಷಬ್ ಶೆಟ್ಟಿ ಕೂಡಾ ಹುಲಿವೇಷ ತಂಡದ ಜೊತೆಗೆ ಹುಲಿಹೆಜ್ಜೆ ಹಾಕಿದ್ದಾರೆ.

ಈ ಬಾರಿ ಅಷ್ಟಮಿಗೆ ದೇಶದ ಮೂಲೆ ಮೂಲೆಗಳಿಂದ ಶ್ರೀಕೃಷ್ಣ ಮಠಕ್ಕೆ ಸಹಸ್ರ ಸಂಖ್ಯೆಯ ಭಕ್ತರು ಹರಿದುಬಂದಿದ್ದಾರೆ. ರಥ ಬೀದಿಯ ತುಂಬೆಲ್ಲ ಮುದ್ದು ಕೃಷ್ಣರ ಕಲರವ ಕಂಡುಬಂದಿದ್ದು, ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ನೂರಾರು ಸಂಖ್ಯೆಯ ಮಕ್ಕಳು ಪಾಲ್ಗೊಂಡಿದ್ದಾರೆ. ಎರಡು ವರ್ಷ ಕೊರೊನಾ ಸಂಕಷ್ಟದ ಬಳಿಕ ಅಷ್ಟಮಿಯ ಸಂಭ್ರಮದಲ್ಲಿ ಭಕ್ತರು ಮಿಂದೆದಿದ್ದು, ಕೃಷ್ಣ ರಾಧೆಯರ ವೇಷ ಭೂಷಣದಲ್ಲಿ ವಿದ್ಯಾರ್ಥಿಗಳು ಕುಣಿದು ನಲಿದಾಡಿದ್ದಾರೆ. ಶ್ರೀಕೃಷ್ಣ ಮಠದ ರಥಬೀದಿಯೆಲ್ಲ ಕೃಷ್ಣರಾಧೆಯರದ್ದೇ ಕಲರವ ಕಂಡುಬಂದಿದ್ದು, ಕಡೆಗೋಲು ಕೃಷ್ಣನ ಊರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications