ಇಂಜಿನಿಯರಿಂಗ್ ಕಾಲೇಜಿಗೆ ಬಂದವರು ಯಾರು?
ಮಣಿಪಾಲ, ಆ, 21 : ನಗರದ ಮಾಧವ ಪೈ ಕಾಲೇಜು ಆವರಣಕ್ಕೆ ವಿಶೇಷ ಅತಿಥಿಯೊಬ್ಬ ಇತ್ತೀಚೆಗೆ ಭೇಟಿ ನೀಡಿದ್ದ. ಅರಣ್ಯ ನಾಶದ ಪ್ರತೀಕ ಎಂಬಂತೆ ಕಾಡಿನಲ್ಲಿರಬೇಕಾದ ಹೆಬ್ಬಾವು ಕಾಲೇಜಿಗೆ ಆಗಮಿಸಿತ್ತು.
ನಂತರ ಉರಗ ತಜ್ಞ ಗುರುರಾಜ್ ಸಾಣಿಲ್ ಅವರನ್ನು ಕರೆಸಿ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ಆಗುಂಬೆ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಕಾಲೇಜಿನ ಹಿಂಭಾಗದಲ್ಲಿ ಮಲಗಿದ್ದ ಹೆಬ್ಬಾವು ಕಂಡ ವಿದ್ಯಾರ್ಥಿಗಳು ಬೆಚ್ಚಿಬಿದ್ದರು. ಸ್ಥಳಕ್ಕೆ ಆಗಮಿಸಿದ ಗುರುರಾಜ್ ಹಾವು ಹಿಡಿದು 'ಹೆಬ್ಬಾವುಗಳು ಮಾನವರನ್ನು ತಿನ್ನುವುದಿಲ್ಲ, 14 ಅಡಿ ಉದ್ದದ ಈ ಹಾವು ಸುಮಾರು 20 ವರ್ಷ ಪ್ರಾಯದ್ದಿರಬೇಕು' ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಭಯ ದೂರಮಾಡಿದ ಗುರುರಾಜ್ ಅವರಿಗೆ ಹಾವಿನ ವಿವಿಧ ಭಾಗಗಳ ಪರಿಚಯ ಮಾಡಿಕೊಟ್ಟರು. ಸ್ವತಃ ವಿದ್ಯಾರ್ಥಿಗಳೇ ಹಾವಿನ ತಲೆ, ಬಾಲ ಹಿಡಿದು ಸಂಭ್ರಮಿಸಿದರು. ನಂತರ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಹೆಬ್ಬಾವು ಹಿಡಿದ ವಿದ್ಯಾರ್ಥಿಗಳು
ಮಣಿಪಾಲ ಮಾಧವ ಪೈ ಕಾಲೇಜು ಆವರಣಕ್ಕೆ ಬಂದಿದ್ದ 14 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಯಿತು.

ಬೃಹತ್ ಗಾತ್ರದ ಹೆಬ್ಬಾವು
ಕಾಡು ಬಿಟ್ಟು ನಾಡಿಗೆ ಬಂದ 14 ಅಡಿ ಉದ್ದದ ಹೆಬ್ಬಾವು ಹಿಡಿದ ಉರಗ ತಜ್ಞ ಗುರುರಾಜ್ ಸಾಣಿಲ್.

ಹಾವು ಹಿಡಿದು ವಿದ್ಯಾರ್ಥಿಗಳ ಸಂಭ್ರಮ
ಮಣಿಪಾಲ ಮಾಧವ ಪೈ ಕಾಲೇಜು ಆವರಣಕ್ಕೆ ಬಂದಿದ್ದ ಹೆಬ್ಬಾವನ್ನು ಹಿಡಿದು ಸಂಭ್ರಮಿಸಿದ ವಿದ್ಯಾರ್ಥಿಗಳು.

ಹೆಬ್ಬಾವು ಮಾನವನ್ನು ತಿನ್ನಲ್ಲ
ಮಣಿಪಾಲ ಮಾಧವ ಪೈ ಕಾಲೇಜು ಆವರಣಕ್ಕೆ ಬಂದಿದ್ದ 14 ಅಡಿ ಉದ್ದದ ಹೆಬ್ಬಾವು ಹಿಡಿದ ಉರಗ ತಜ್ಞ ಗುರುರಾಜ್ ಸಾಣಿಲ್ ಹೆಬ್ಬಾವು ಮಾನವನನ್ನು ತಿನ್ನಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.

14 ಅಡಿ ಉದ್ದ, 20 ವರ್ಷ
20 ವರ್ಷ ಪ್ರಾಯದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಆಗುಂಬೆ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications