ರವಿ ಪೂಜಾರಿಯಿಂದ ಜೆಡಿಎಸ್ ಶಾಸಕನಿಗೆ ಕೊಲೆ ಬೆದರಿಕೆ
ತುಮಕೂರು, ಜನವರಿ 17: ಭೂಗತ ಪಾತಕಿ ರವಿ ಪೂಜಾರಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಭೂಗತ ಪಾತಕಿ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿ ನನ್ನ ಮೊಬೈಲ್ಗೆ ಕರೆ ಮಾಡಿ, ಬಳಿಕ ಸಂದೇಶ ಕಳುಹಿಸಿ ಬೆದರಿಕೆ ಹಾಕಿದ್ದಾನೆ' ಎಂದು ಸಿ.ಬಿ.ಸುರೇಶ್ ಬಾಬು ತಿಳಿಸಿದ್ದಾರೆ.
ಸಚಿವ ತನ್ವೀರ್ ಸೇಠ್ ಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ
'ಡಿಸೆಂಬರ್ 27ರಂದು ನನ್ನ ಮೊಬೈಲ್ಗೆ ಕರೆ ಮಾಡಿದ ರವಿಪೂಜಾರಿ 10 ಕೋಟಿ ರೂಪಾಯಿ ನೀಡಬೇಕು. ಕೊಡದಿದ್ದರೆ ನೀನು ಮತ್ತು ನಿನ್ನ ಕುಟುಂಬದವರು ಬದುಕಿ ಉಳಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದರು' ಎಂದು ತಿಳಿಸಿದರು.
'ಡಿ. 28ರ ಬೆಳಿಗ್ಗೆ ಅದೇ ನಂಬರ್ನಿಂದ 'ನಾನು ಮಾಫಿಯಾ ಡಾನ್ ರವಿ ಪೂಜಾರಿ. ನನಗೆ 10 ಕೋಟಿ ರೂಪಾಯಿ ನೀಡಬೇಕು. ಈ ಕುರಿತು ಪೊಲೀಸರಿಗೆ ತಿಳಿಸಿದರೆ ಜೀವ ತೆಗೆಯುತ್ತೇನೆ' ಎಂದು ಇಂಗ್ಲಿಷ್ನಲ್ಲಿ ಸಂದೇಶ ರವಾನಿಸಿದ್ದರು. ಈ ಬಗ್ಗೆ ಉಪ್ಪಾರಪೇಟೆ ಡಿವೈಎಸ್ಪಿ ಬಳಿ ನೇರವಾಗಿ ದೂರು ದಾಖಲಿಸಿದ್ದೇನೆ' ಎಂದು ಹೇಳಿದರು.
ಮಂಗಳೂರು ಶೂಟೌಟ್ ಹಿಂದೆ ಭೂಗತ ಪಾತಕಿ ರವಿ ಪೂಜಾರಿ?
ಕೆಲವೇ ದಿನಗಳ ಹಿಂದೆ ಮಂತ್ರಿ ತನ್ವೀರ್ ಸೇಠ್ಗೂ ರವಿ ಪೂಜಾರಿ ಬೆದರಿಕ ಹಾಕಿದ್ದಾ ಎನ್ನಲಾಗಿತ್ತು, ಅದಕ್ಕೂ ಮುಂಚೆ ಸಂಸದ ಡಿ.ಕೆ.ಸುರೇಶ್ ಅವರಿಗೂ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದ.