ದೇವೇಗೌಡರು, ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಅಬ್ಬರಿಸಿದ ಮಧುಗಿರಿ ರಾಜಣ್ಣ
Recommended Video
ತುಮಕೂರು, ಏಪ್ರಿಲ್ 21: ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನು ಅಮಾನತು ಮಾಡಿದ್ದಾರೆ. ಈ ಅಮಾನತನ್ನು ವಾಪಸ್ ಪಡೆಯದಿದ್ದರೆ ಮಧುಗಿರಿಯಲ್ಲಿ ಕಾಂಗ್ರೆಸ್ ಅನ್ನು ಶೂನ್ಯ ಮಾಡ್ತೀವಿ ಎಂದು ಮಧುಗಿರಿಯ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಅಬ್ಬರಿಸಿದ್ದಾರೆ. ಉಚ್ಚಾಟಿತ ಅಧ್ಯಕ್ಷರ ಸಭೆ ಬಳಿಕ ಅವರು ಮಾತನಾಡಿದ್ದಾರೆ.
ನಾನೂ ಉಚ್ಚಾಟಿತರ ಜೊತೆ ಇರುತ್ತೀನಿ. ಅಮಾನತು ಆದೇಶ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಉಳಿಯಬೇಕು ಅಂದರೆ ಹೈಕಮಾಂಡ್ ಸುಮ್ಮನಿರಬೇಕು. ಕಾಂಗ್ರೆಸ್ ಕಳೆಯಬೇಕು ಅಂದರೆ ಏನು ಬೇಕಾದರೂ ಮಾಡಲಿ. ಏನು ಇವರದ್ದು ಒಂದೇ ಅಂಗಡಿನಾ? ಸಾಮಾನು ಸಿಗುವ ಅಂಗಡಿ ಬಹಳಷ್ಟು ಇವೆ. ಎಲ್ಲಿ ಸಾಮಾನು ಸಿಗುತ್ತದೋ ಅಲ್ಲಿಯೇ ತಗೊಳ್ತೀವಿ ಎಂದಿದ್ದಾರೆ.

ಅಮಾನತು ಆಗಿರುವವರು ಬಿಜೆಪಿ ಪರ ಕೆಲಸ ಮಾಡಿದ್ದಾರೆ ಅನ್ನೋದಕ್ಕೆ ಏನಿದೆ ಪುರಾವೆ? ಮಧುಗಿರಿಯಲ್ಲಿ ದೇವೇಗೌಡರಿಗೆ ಒಂದು ಲಕ್ಷ ಲೀಡ್ ಕೊಡ್ತೀವಿ. ಕೊರಟಗೆರೆಯಲ್ಲಿ ಒಂದೂವರೆ ಲಕ್ಷ ಮುನ್ನಡೆ ಕೊಡ್ತೀವಿ. ಒಟ್ಟಾರೆ 'ದೇವೇಗೌಡ ಮಯ' ಮಾಡ್ತೀವಿ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷವನ್ನು ಬಿಡುವ ಬಗ್ಗೆ ಇರುವ ಸುದ್ದಿಗೆ ಉತ್ತರ ನೀಡಿದ ಅವರು, ಕಾಂಗ್ರೆಸ್ ಪಕ್ಷವು ಎಲ್ಲವೂ ಕೊಟ್ಟಿದೆ. ನಾನು ಯಾಕೆ ಬಿಜೆಪಿಗೆ ಹೋಗಲಿ? ಬಿಜೆಪಿ ಅಭ್ಯಥಿ೯ ಜಿ.ಎಸ್.ಬಸವರಾಜು ಭೇಟಿಗೆ ರಾಜಕೀಯದ ಅರ್ಥ ಕಲ್ಪಿಸುವುದು ಸರಿಯಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಎಷ್ಟೋ ಬಾರಿ ಮನೆಗೆ ಬಂದಿದ್ದಾರೆ. ಹಾಗಂತ ಬಿಜೆಪಿಗೆ ಸೇರಿದೆನಾ ಎಂದು ಪ್ರಶ್ನಿಸಿದ್ದಾರೆ.
ವಿಶ್ವಾಸಕ್ಕೆ, ಸ್ನೇಹಕ್ಕೆ ನಾನು ಬೆಲೆ ಕೊಡ್ತೀನಿ. ಎಂಟು ವಿಧಾನಸಭಾ ಕ್ಷೇತ್ರದಲ್ಲೂ ಮೈತ್ರಿ ಅಭ್ಯಥಿ೯ ಗೆ ಮುನ್ನಡೆ ಬರುತ್ತದೆ. ದೇವೇಗೌಡ ರನ್ನು ನಾನಲ್ಲ, ಜನ ಗೆಲ್ಲಿಸುವುದು. ಆ ಜನರಲ್ಲಿ ನಾನೂ ಒಬ್ಬ ಅಷ್ಟೇ. ನಾನು ಯಾವುದೇ ಪಕ್ಷಕ್ಕೆ ಹೋಗೋದಿಲ್ಲ. ಬಿಜೆಪಿ ಬಗ್ಗೆ ನನ್ನದೇ ಆದ ನಿಲುವಿದೆ. ಬಿಜೆಪಿಗೆ ಹೋಗುವುದಾದರೆ ಯಾವಾಗಲೋ ಹೋಗ್ತಾ ಇದ್ದೆ ಎಂದಿದ್ದಾರೆ.
ನಾನು ಕಾಂಗ್ರೆಸ್ ನಲ್ಲೇ ಇರುತ್ತೀನಿ ಬಿಜೆಪಿ ಯಾಕೆ ಹೋಗಲಿ? ಅಲ್ಲಿಗೆ ಹೋಗುವಂಥದ್ದನ್ನು ಕಾಂಗ್ರೆಸ್ ನವರು ಏನು ಮಾಡಿದ್ದಾರೆ? ಕೇಳಿದ್ದೆಲ್ಲ ಕೊಟ್ಟಿದ್ದಾರೆ. ನನಗೆ ಆಕ್ರೋಶವೂ ಇಲ್ಲ, ಕೋಪವೂ ಇಲ್ಲ. ನಾವೇ ಕಾಂಗ್ರೆಸ್. ದೇವೇಗೌಡರು ಎಲ್ಲಿ ಬೇಕಾದರೂ ನಿಲ್ಲಲಿ. ಆದರೆ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿ ನಿಲುತ್ತಾರೆ ಅಂದರೆ ಸ್ವಲ್ಪವಾದರೂ ಮನುಷ್ಯತ್ವ ಬೇಡವಾ ಅವರಿಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಹೈಕಮಾಂಡ್ ತೀಮಾ೯ನ ತೆಗೆದುಕೊಂಡಿದ್ದಾರೆ ಅಂತ ಸುಮ್ಮನೆ ಇರಬೇಕಾಯಿತು. ಹೈಕಮಾಂಡ್ ತೀಮಾ೯ನ ಇಲ್ಲದಿದ್ದರೆ ನಮ್ಮ ವಿರೋಧ ಇದ್ದೇ ಇರುತ್ತಿತ್ತು ಎಂದಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications