ಧರ್ಮ ಯುದ್ಧ ಪ್ರಾರಂಭಿಸಲು ಲೋಕಾಯುಕ್ತ ನ್ಯಾಯಾಧೀಶರಿಗೆ ಇರಿದ!
ತುಮಕೂರು, ಮಾರ್ಚ್ 08: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಗೆ ಚೂರಿ ಇರಿದು ಈಗ ಪೊಲೀಸರ ಅತಿಥಿ ಆಗಿರುವ ಆರೋಪಿ ತೇಜರಾಜ್ ಶರ್ಮಾ ವಿಚಾರಣೆ ವೇಳೆ ಚಿತ್ರ ವಿಚಿತ್ರ ವಿಷಯಗಳು ಹೊರ ಬರುತ್ತಿವೆ.
'ನಾನು ವಿಶಾಖ ನಕ್ಷತ್ರದವನು, ಅರ್ಜುನ ಕೂಡ ವಿಶಾಖ ನಕ್ಷತ್ರದವನು, ಈ ನಕ್ಷತ್ರದವರು ಬುಧವಾರ ಹೋರಾಟ ಪ್ರಾರಂಭ ಮಾಡಿದರೆ ಗೆಲುವಾಗುತ್ತದೆ, ಹಾಗಾಗಿ ನಾನು ಬುಧವಾರದಂದೇ ನ್ಯಾಯಮೂರ್ತಿಗಳಿಗೆ ಚೂರಿ ಹಾಕಿದೆ, ಶ್ರೀಕೃಷ್ಣ ಕೂಡ ಅರ್ಜುನನಿಗೆ ಬುಧವಾರದಂದೇ ಹೋರಾಟ ಪ್ರಾರಂಭ ಮಾಡುವಂತೆ ಹೇಳಿದ್ದ' ಎಂದಿದ್ದಾನೆ ತೇಜರಾಜ್ ಶರ್ಮಾ.
ಆತನ ಮನೆ ತಪಾಸಣೆ ಮಾಡಲು ಆರೋಪಿಯನ್ನು ಇಂದು ತುಮಕೂರಿನ ಬಿದಿರು ಮಳೆ ಬಡಾವಣೆಗೆ ಕರೆತರಲಾಗಿತ್ತು. ಇದೇ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಆರೋಪಿ ತೇಜರಾಜ್ ಶರ್ಮಾ ವಾಸವಿದ್ದ.

ತೇಜರಾಜ್ ಶರ್ಮಾ ಮನೆಗೆ ಹೋದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು, ಅಲ್ಲಿ ಏಕಾಗ್ರತೆ, ಇಂದ್ರಜಾಲ, ಮಾಟ-ಮಂತ್ರಗಳಿಗೆ ಸಂಬಂಧಪಟ್ಟ ಪುಸ್ತಗಳು ದೊರೆತವು. ಈ ಪುಸ್ತಕಗಳನ್ನು ಏಕೆ ಓದುತ್ತೀಯೆಂದು ಪೊಲೀಸರು ತೇಜರಾಜ್ ಶರ್ಮಾ ಗೆ ಪ್ರಶ್ನಿಸಿದರು. ಕೊಠಡಿಯ ಬಾಗಿಲಿಗೆ ದೃಷ್ಟಿ ಗೊಂಬೆಯ ತರಹದ ಗೊಂಬೆಯನ್ನು ಕಟ್ಟಿದ್ದರ ಬಗ್ಗೆಯೂ ತನಿಖಾಧಿಕಾರಿಗಳು ಪ್ರಶ್ನೆ ಮಾಡಿದ್ದಾಗಿ ತಿಳುದು ಬಂದಿದೆ.
ಆ ನಂತರ ಆರೋಪಿಗೆ ಮನೆ ಬಾಡಿಗೆಗೆ ನೀಡಿದ್ದ ವೆಂಕಟಲಕ್ಷ್ಮಿ ಎಂಬುವರನ್ನೂ ತನಿಖಾ ತಂಡ ಪ್ರಶ್ನೆ ಮಾಡಿತು. ಆರೋಪಿಗೆ ಮನೆ ಬಾಡಿಗೆಗೆ ನೀಡಬೇಕಾದರೆ ಮಾಡಿಕೊಮಡಿರುವ ಅಗ್ರಿಮೆಂಟ್, ಆತನ ವ್ಯವಹಾರ, ನಡತೆ, ಮಾತು-ಕತೆಗಳ ಬಗ್ಗೆ ಅವರು ಪ್ರಶ್ನೆ ಮಾಡಿ ಉತ್ತರ ಪಡೆದಿದ್ದಾರೆ.
ಇದೀಗ ಈ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದು, ಇನ್ನು ಮುಂದಿನ ತನಿಖೆಯನ್ನು ಅವರೇ ಮಾಡಲಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications