ಕಲ್ಪತರು ನಾಡು ನೋಡಿ ಸಂತಸ ಪಟ್ಟ ಜರ್ಮನ್ ಅಧ್ಯಕ್ಷರು
ತುಮಕೂರು, ಫೆ.9 : ಕಲ್ಪತರು ನಾಡು ತುಮಕೂರಿಗೆ ಭೇಟಿ ನೀಡಿದ್ದ ಜರ್ಮನ್ ಅಧ್ಯಕ್ಷ ಜೋಕ್ಸಿಮ್ ಗಾಕ್, ರೈತರು ಕ್ಷಣಾರ್ಧದಲ್ಲಿ ತೆಂಗಿನಕಾಯಿಯನ್ನು ಸುಲಿಯುವುದು, ಕೈಯಿಂದಲೇ ಹಸುವಿನ ಹಾಲು ಕರೆಯುವುದನ್ನು ನೋಡಿ ಪುಳಕಿತರಾದರು. ನಾರಿನಿಂದ ಸಿದ್ಧಪಡಿಸಿದ ಕುರ್ಚಿ ಮೇಲೆ ಕುಳಿತು ಸಂತಸ ಪಟ್ಟರು.
ಶನಿವಾರ ಜರ್ಮನ್ ಅಧ್ಯಕ್ಷ ಜೋಕ್ಸಿಮ್ ಗಾಕ್ ಪತ್ನಿ ಸಮೇತ ತುಮಕೂರಿಗೆ ಆಗಮಿಸಿದ್ದರು. ಗುಬ್ಬಿ ತಾಲೂಕಿನ ತ್ಯಾಗಟೂರಿನ ತೆಂಗಿನನಾರಿನ ಕುಶಲ ಕೈಗಾರಿಕಾ ಸಹಕಾರ ಸಂಘಕ್ಕೆ ಭೇಟಿ ನೀಡಿ, ತೆಂಗಿನ ನಾರಿನ ಘಟಕದ ಚಟುವಟಿಕೆಯನ್ನು ವೀಕ್ಷಿಸಿದರು. ಮುದ್ದಪುರ ಗ್ರಾಮದ ರೈತರಾದ ಮಹದೇವಯ್ಯ, ರಾಮಣ್ಣ ತಮ್ಮ ಸೀಮೆ ಹಸುವಿನ ಕೆಚ್ಚಲಿನಿಂದ ಕೈಯಲ್ಲಿಯೇ ಹಾಲು ಕರೆಯುವುದನ್ನು ನೋಡಿ ಪುಳಕಿತರಾದರು.
ನಬಾರ್ಡ್ ಕರ್ನಾಟಕ ವಿಭಾಗದ ಸಿಜೆಎಂ ಜಿ.ಆರ್.ಚಿಂತಾಲ ಮತ್ತು ನಬಾರ್ಡ್ ಸಿಜೆಎಂ ಮುಂಬೈ ಬ್ರಾಂಚ್ನ ಡಾ. ವೆಂಕಟೇಶ ತಗದ್, ಜರ್ಮನಿ ಅಧ್ಯಕ್ಷರಿಗೆ ತೆಂಗಿನನಾರಿನ ಕುಶಲ ಕೈಗಾರಿಕಾ ಸಹಕಾರ ಸಂಘ ಮತ್ತು ಘಟಕದ ಸಂಪೂರ್ಣ ಪರಿಚಯ ಮಾಡಿಕೊಟ್ಟರು. ತೆಂಗಿನ ನಾರಿನ ಸಹ ಕಾರ ಸಂಘದ ಅಧ್ಯಕ್ಷ ಕಿಡಿಗಣ್ಣಪ್ಪ ಮುಂತಾದವರು ಅಧ್ಯಕ್ಷರ ಜೊತೆ ಉಪಸ್ಥಿತರಿದ್ದರು. ಚಿತ್ರಗಳಲ್ಲಿ ಜರ್ಮನ್ ಅಧ್ಯಕ್ಷರ ತುಮಕೂರು ಭೇಟಿ

ತೆಂಗಿನ ಕಾಯಿ ಸುಲಿದಿದ್ದಕ್ಕೆ ಅಚ್ಚರಿ
ಜರ್ಮನಿಯಲ್ಲಿ ಎಲ್ಲವೂ ಯಾಂತ್ರಿಕತೆಯಿಂದ ನಡೆಯುವುದನ್ನು ನೋಡಿರುವ ಅಧ್ಯಕ್ಷರು ಮುದ್ದಪುರದ ರೈತ ಕಲ್ಲೇಶ್ ಹಾರೆ ಕೋಲನ್ನು ಭೂಮಿಗೆ ಮೀಟಿ ಕೈಯಿಂದ ಕ್ಷಣಾರ್ಧದಲ್ಲಿ ತೆಂಗಿನ ಕಾಯಿಗಳನ್ನು ಸುಲಿಯುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದರು.

ನಾರು ಬೇರ್ಪಡಿಸುವ ಕ್ರಿಯೆ ವೀಕ್ಷಣೆ
ತೆಂಗಿನ ನಾರಿನ ಘಟಕದಲ್ಲಿ ತೆಂಗಿನಮಟ್ಟೆಯಿಂದ ನಾರನ್ನು ಬೇರ್ಪಡಿಸುವ ಪ್ರಕ್ರಿಯೆ ವೀಕ್ಷಿಸಿದರು. ಘಟಕದಲ್ಲಿ ಸಿದ್ಧವಾಗುವ ಹಗ್ಗ, ನಾರು, ಕುರ್ಚಿ, ಮೇಜು, ಮಂಚ, ಪ್ಯಾನಲ್, ಮ್ಯಾಟ್ ಮುಂತಾದ ವಸ್ತುಗಳನ್ನು ನೋಡಿದರು.

ಗ್ರಾಮೀಣ ಪರಿಸರ ಸ್ವರ್ಗದಂತಿದೆ
ಗುಬ್ಬಿ ತಾಲೂಕು ತ್ಯಾಗಟೂರಿನ ತೆಂಗಿನ ನಾರಿನ ಕುಶಲ ಕೈಗಾರಿಕಾ ಸಹಕಾರ ಸಂಘಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಗ್ರಾಮೀಣ ಪರಿಸರ ಸ್ವರ್ಗದಂತಿದೆ ಎಂದು ಸಂತಸ ಪಟ್ಟರು.

ನಾರಿನ ಕುರ್ಚಿ ಮೇಲೆ ಕುಳಿತು ಸಂತಸ
ಜರ್ಮನ್ ಅಧ್ಯಕ್ಷ ಮತ್ತು ಅವರ ಪತ್ನಿ ನಾರಿನ ಕುರ್ಚಿಯಲ್ಲಿ ಕುಳಿತು ಸಂತಸ ಪಟ್ಟರು. ಜರ್ಮನ್ ಪ್ರಥಮ ಮಹಿಳೆ ನಾರಿನಿಂದ ಸಿದ್ಧಪಡಿಸಿದ ಕುರ್ಚಿ ಮೇಲೆ ಕುಳಿತು ಆನಂದಿಸಿ ಅದರ ಬಗ್ಗೆ ಅಧ್ಯಕ್ಷರಿಗೆ ವಿವರಣೆ ನೀಡಿದರು.

ಶಾಲಾ ಮಕ್ಕಳೊಂದಿಗೆ ಫೋಟೋ ಶೂಟ್
ಸಂಜೆ 4.30ಕ್ಕೆ ಮುದ್ದಪುರಕ್ಕೆ ಆಗಮಿಸಿದ ಅವರು, ಶನೈಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ನಂತರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಭೇಟಿ ಮಾಡಿ, ಅವರೊಂದಿಗೆ ಪೋಟೊ ತೆಗೆಸಿಕೊಂಡರು.

ರೈತರೊಂದಿಗೆ ಸಂವಾದ
ಆಯ್ದ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಅಧ್ಯಕ್ಷರು, ತೆಂಗಿನ ತೋಟ, ತೆಂಗು ಮಾರುಕಟ್ಟೆ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು. ಗ್ರಾಮದಲ್ಲಿರುವ ಮಕ್ಕಳ ಸಂಖ್ಯೆ, ಶಾಲೆಗೆ ಹೋಗುತ್ತಾರಾ? ಎಂದು ಮಾಹಿತಿ ಪಡೆದುಕೊಂಡರು. ರೈತರು ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಾರಾ? ಇಲ್ಲೇ ಕೆಲಸ ಮಾಡುತ್ತೀರಾ? ಎಂದು ಮಾಹಿತಿ ಸಂಗ್ರಹಿಸಿದರು.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications