ತುಮಕೂರು : ಕ್ರೂಸರ್ ಮತ್ತು ಲಾರಿ ಡಿಕ್ಕಿ ಐವರು ಸಾವು
ತುಮಕೂರು, ಜ.4: . ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬರುತ್ತಿದ್ದ ರಾಯಚೂರಿನ ದೇವದುರ್ಗ ಮೂಲದ ಕುಟುಂಬ ಭಾನುವಾರ ಮುಂಜಾನೆ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದೆ. ಕ್ರೂಸರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು
ಜಿಲ್ಲೆ
ಶಿರಾ
ತಾಲೂಕಿನ
ಕಳ್ಳಂಬೆಳ್ಳ
ಪೊಲೀಸ್
ಠಾಣೆ
ವ್ಯಾಪ್ತಿಯ
ಚಿಕ್ಕನಹಳ್ಳಿಯಲ್ಲಿ
ಈ
ದುರ್ಘಟನೆ
ನಡೆದಿದೆ.
ಈ
ಅಪಘಾತದಲ್ಲಿ
ಐವರು
ಮೃತಪಟ್ಟಿದ್ದು,
ನಾಲ್ವರಿಗೆ
ಗಂಭೀರ
ಗಾಯಗಳಾಗಿದ್ದು,
ಒಬ್ಬರ
ಸ್ಥಿತಿ
ಚಿಂತಾಜನಕವಾಗಿದೆ.
ಗಾಯಗೊಂಡವರನ್ನು
ತಾಲೂಕು
ಆಸ್ಪತ್ರೆಗೆ
ಸೇರಿಸಿ
ಚಿಕಿತ್ಸೆ
ನೀಡಲಾಗುತ್ತಿದೆ.
ಮೃತರನ್ನು ಲಕ್ಷ್ಮಿ (28), ಆಂಜನಮ್ಮ (22), ಮರಿಯಮ್ಮ(55), ಪೂಜಾ (35) ಎಂದು ಗುರುತಿಸಲಾಗಿದೆ. ಮೃತರೆಲ್ಲರು ರಾಯಚೂರಿನ ದೇವದುರ್ಗ ತಾಲೂಕಿನವರು, ಬೆಂಗಳೂರಿಗೆ ಕೂಲಿ ಕೆಲಸ ಹುಡುಕಿಕೊಂಡು ಬರುತ್ತಿದ್ದರು ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮೃತ ದುರ್ದೈವಿಗಳಿದ್ದ ಕ್ರೂಸರ್ ವಾಹನ ಚಲಿಸುವಾಗ ಟೈರ್ ಪಂಕ್ಚರ್ ಆಗಿದೆ. ಟೈರು ಬದಲಾವಣೆ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.
ಸುಮಾರು 15 ಮಂದಿ ಹಬ್ಬದ ನಿಮಿತ್ತ ಗ್ರಾಮಕ್ಕೆ ತೆರಳಿದ್ದು, ಹಬ್ಬ ಮುಗಿಸಿಕೊಂಡು ಕ್ರೂಸರ್ ವಾಹನದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಬೆಳಗಿನ ಜಾವ 3.30ರ ಸಮಯದಲ್ಲಿ ಚಿಕ್ಕನಹಳ್ಳಿ ಸಮೀಪ ಕ್ರೂಸರ್ ಪಂಚರ್ ಆಗಿದ್ದು, ಚಕ್ರ ಬದಲಾಯಿಸುವಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಗಾಯಗೊಂಡಿರುವ ದೇವದುರ್ಗ ತಾಲ್ಲೂಕಿನ ಷರೀಫ(18), ಅರಳಯ್ಯ(60), ಅಂಬರೀಷ(60), ವೆಂಕಟೇಶ(28) ಹಾಗೂ ಬಾಲಕ ಮರಿಯಪ್ಪ ಎಂಬುವರನ್ನು ಈಗ ತುಮಕೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.